ವಿಕಲ ಚೇತನ ಮಂಜುನಾಥ್ ಇವರಿಗೆ – ಶಾಸಕರಿಂದ ಅಭಿನಂದನೆ.

ಹಿರೇ ಹೆಗ್ಡಾಳ್ ಜು.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಕೆ.ಎನ್.ಮಂಜುನಾಥ ತಾಯಿ ವಿಜಯಲಕ್ಷ್ಮಿ ಇವರು ವಿಶೇಷ ಏನೆಂದರೆ ವೀಲ್ ಚೇರ್ ಬಾಸ್ಕೆಟ್ ಬಾಲ್ ಪುರುಷ ಆಟಗಾರರ ರಾಜ್ಯ ಮಟ್ಟದ ತಂಡಕ್ಕೆ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಮಂಜುನಾಥ್ ಇವರು ಆಯ್ಕೆ ಯಾಗಿದ್ದಾರೆ. ತಮಿಳುನಾಡಿನಲ್ಲಿ ಜುಲೈ 25 ರಂದು ನಡೆಯುವ ಸೌತ್ ಜೂನ್ ಚಾಂಪಿಯನ್ ಶಿಪ್ ಎರಡನೇ ಬಾರಿ ಕ್ರೀಡಾ ಕೂಟದಲ್ಲಿ ರಾಜ್ಯ ವಿಶೇಷ ಚೇತನರ ಹತ್ತು ಆಟಗಾರರು ತಂಡವನ್ನು ಸ್ಟೇಟ್ ವಿಲ್ ಶೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಪ್ರಕಟಿಸಿದ್ದು. ಹತ್ತು ಆಟಗಾರರ ಪೈಕಿ ಗ್ರಾಮದ ವಿಶೇಷ ಚೇತನ ಮಂಜುನಾಥ್ ಆಯ್ಕೆ ಯಾಗಿದ್ದಾರೆ. ಕೆ.ಎನ್.ಮಂಜುನಾಥ್ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿದ್ದು ಕರಿಬಸವೇಶ್ವರ ಯುವ ಕಲಾ ಸಂಘದ ವತಿಯಿಂದ ಕ್ರೀಡೆ ಪ್ರಶಸ್ತಿ ಕಲಾ ಭಾರತಿ ಕಲಾ ಸಂಘದ ವತಿಯಿಂದ ಕ್ರೀಡೋತ್ಸವ ರಾಜ್ಯ ಪ್ರಶಸ್ತಿ ಹಾಗೂ ಇನ್ನೂ ಇತರ ಸಂಘ ಸಂಸ್ಥೆಗಳಿಂದ ಪ್ರಶಸ್ತಿಯನ್ನು ತೆಗೆದು ಕೊಂಡಿರುವ ವೀಲ್ ಚೇರ್ ಆಟಗಾರರಾಗಿರುವ ಹೆಮ್ಮೆಯ ವಿಕಲ ಚೇತನ ಮಂಜುನಾಥ್ ಇವರಿಗೆ ಕೂಡ್ಲಿಗಿ ವಿಧಾನಸ ಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ, ಎನ್.ಟಿ. ಶ್ರೀನಿವಾಸ್ ಇವರಿಂದ ಅಭಿನಂದಿಸಿ ಧನ ಸಹಾಯ ಮಾಡಲಾಯಿತು ಈ ಸಂದರ್ಭದಲ್ಲಿ ಶಾಸಕರು ಮಾತನಾಡಿದರು. ಇಂಥ ಹೊಸ ಹೊಸ ಪ್ರತಿಭೆಗಳು ನಮ್ಮ ಕೂಡ್ಲಿಗಿಯಲ್ಲಿ ಅತಿ ಹೆಚ್ಚಾಗಿ ಹೊರ ಹೊಮ್ಮಲಿ ನನ್ನ ಆಸೆ ಒಂದೇ ಕೂಡ್ಲಿಗಿಯನ್ನು ಒಂದು ಸುಂದರ ಶಾಂತಿಯ ತೋಟ ಮಾಡುವುದು ಪ್ರತಿಭೆಯನ್ನು ಗುರುತಿಸುವುದು ಅವರಿಗೆ ಸಹಕಾರ ನೀಡುವುದು ನನ್ನ ಉದ್ದೇಶ ಎಂದರು. ಈ ಸಂದರ್ಭದಲ್ಲಿ ನೌಕರ ಘಟಕದ ಅಧ್ಯಕ್ಷರಾದ ಪಾಲ್ತೂರ್ ಸಿದ್ದರಾಧ್ಯ ಶಿಕ್ಷಕರು ನಾಗರಾಜ್ ಕೊಟ್ರಪ್ಪನವರು ಹಿರೇ ಹೆಗ್ಡಾಳ್ ಶಾಲೆಯ ಶಿಕ್ಷಕರು ಬಣಕಾರ್ ನಾಗರಾಜ್ ಗೋವಿಂದ ಗಿರಿ ಶಿಕ್ಷಕಿಯಾದ ವಿಜಯಲಕ್ಷ್ಮಿ ಹಾಗೂ ಸಮಾಜ ಸೇವಕರು ಕಾವಲಿ ಶಿವಪ್ಪ ನಾಯಕ ದಿನಕರ ಶಾಸಕರ ಆಪ್ತರಾದ ಮರಳು ಸಿದ್ದಪ್ಪ ದಿಬ್ಬದಳ್ಳಿ ಸಿದ್ದೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್. ಕೆ. ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button