ಲಾರಿ ಚಕ್ರಕ್ಕೆ ಸಿಲುಕಿ ಬಿದ್ದ ನಾಲ್ಕು ವರ್ಷದ ಬಾಲಕಿ ಸಾವು.
ಕೆ ಅಯ್ಯನಹಳ್ಳಿ ಜನೇವರಿ.15
![](https://i0.wp.com/sknewskannada.in/wp-content/uploads/2024/01/IMG-20240115-WA0103-461x1024.jpg?resize=461%2C1024&ssl=1)
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ. ಅಯ್ಯನಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ ವರ್ಷಿಣಿ ಎಂಬ ನಾಲ್ಕು ವರ್ಷದ ಹೆಣ್ಣು ಮಗು KA 36 B 0695 ನಂಬರಿನ ಲಾರಿ ಗಾಲಿಗೆ ಸಿಕ್ಕಿ ಸಾವನ್ನಪ್ಪಿದ್ದಾಳೆ. ಕೆ. ಅಯ್ಯನಹಳ್ಳಿ ಗ್ರಾಮದಿಂದ ಮೂಗಮ್ಮ ಎಂಬುವರು ತನ್ನ ಎರಡು ಮಕ್ಕಳನ್ನು ಆಸ್ಪತ್ರೆಗೆ ಎಂದು ಕೊಟ್ಟೂರಿಗೆ ಹೊರಟಿದ್ದ ಸಂದರ್ಭದಲ್ಲಿ ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ವರ್ಷಿಣಿ ಎಂಬ ಹೆಣ್ಣು ಮಗು ರೋಡಿನಲ್ಲಿ ಅಂಸ್ (ಅಂಪ್) ಗಳಿಲ್ಲದೆ ವೇಗವಾಗಿ ಬರುತ್ತಿದ್ದ ಲಾರಿ ಒಂದು ಡಿಕ್ಕಿ ಹೊಡೆದು ಕೊನೆಗೆ ಗಾಲಿಗೆ ಸಿಕ್ಕಿಬಿದ್ದು ಸ್ಥಳದಲ್ಲಿ ಮರಣ ಹೊಂದಿರುತ್ತಾರೆ.
![](https://i0.wp.com/sknewskannada.in/wp-content/uploads/2024/01/IMG-20240115-WA0105-653x1024.jpg?resize=653%2C1024&ssl=1)
ಇದಕ್ಕೆಲ್ಲ ಕಾರಣ ಪಿಡಬ್ಲ್ಯೂಡಿ ಸಿಸಿ ರಸ್ತೆ ಮಾಡಿದ ಕಾಂಟ್ರಾಕ್ಟರ್ ರವರಿಗೆ ಅನೇಕ ಬಾರಿ ಅಂಸ್ ಗಳ ಹಾಕಿ ಎಂದು ಕೇಳಿದರು ಹಾಕಲಿಲ್ಲ ಮತ್ತು ಇಲ್ಲಿ ಸರಿಯಾಗಿ ಅಂಸ್ (ಅಂಪ್) ಗಳಿಲ್ಲದೆ ತಿರುವುಗಳಲ್ಲಿ ಮಾರ್ಗ ಸೂಚನೆಗಳಿಲ್ಲದೆ ಇರುವುದು ನೋಡಿದರೆ ಆರ್ ಟಿ ಓ ಇವರ ನಿರ್ಲಕ್ಷತನವೇ ಎಂದು ಎದ್ದು ಕಾಣುತ್ತದೆ ಆದರೆ ಇಂದು ಈ ಮಗುವಿನ ಬಲೆ ತೆಗೆದು ಕೊಂಡಿತು ಎಂದು ನೋವಿನಿಂದ ದುರ್ಗಪ್ಪ ಮತ್ತು ಕೆಂಚಪ್ಪನವರು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಮತ್ತು ಎಸ್.ಕೆ. ನ್ಯೂಸ್ ಕನ್ನಡ ಚಾನೆಲ್ ನೊಂದಿಗೆ ಹಂಚಿ ಕೊಂಡರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು