ದಿನನಿತ್ಯ ಸೇವಿಸಿದ ಹಣ್ಣಿನ ಬೀಜಗಳನ್ನು ಸಂಗ್ರಹಣೆ ಮಾಡಿ – ಸಸಿಗಳನ್ನು ತಯಾರಿಸುತ್ತಿರುವ ವನಸಿರಿ ತಂಡ.

ಸಿಂಧನೂರು ಏ.07

ವನಸಿರಿ ಪೌಂಡೇಷನ್ ವತಿಯಿಂದ ಬೀಜಗಳನ್ನು ಸಂಗ್ರಹಣೆ ಮಾಡಿ ಸಸಿಗಳನ್ನು ಮಾಡಿ ಮತ್ತು ಅವುಗಳನ್ನು ಎತ್ತರವಾಗಿ ಬೆಳೆಯುವಂತೆ ಪ್ಲಾಸ್ಟಿಕ್ ಕವರ್ ನಲ್ಲಿ ಮಣ್ಣು ಹಾಕಿ ಸಸಿಗಳನ್ನು ಬೆಳಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಸರಕಾರಿ ನೌಕರರು, ಪರಿಸರ ಪ್ರೇಮಿಗಳು ಪ್ರತಿಯೊಬ್ಬರೂ ತಾವು ದಿನನಿತ್ಯ ಸೇವಿಸುವ ಹಣ್ಣುಗಳ ಬೀಜಗಳನ್ನು ಸಂಗ್ರಹಣೆ ಮಾಡಿ ವನಸಿರಿ ಸಂಸ್ಥೆಗೆ ನೀಡ ಬೇಕೆಂದು ವನಸಿರಿ ಪೌಂಡೇಷನ್ ಸದಸ್ಯ ಚನ್ನಪ್ಪ.ಕೆ ಹೊಸಹಳ್ಳಿ ಮನವಿ ಮಾಡಿದರು.

“ಒಂದು ಒಳ್ಳೆಯ ಕೆಲಸ ಮಾಡೋಣ”

ಎಲ್ಲರಿಗೂ ಗೊತ್ತಿರುವ ಹಾಗೆ ಇವಾಗ ಹಣ್ಣುಗಳ ಸೀಸನ್ ಶುರು ಆಗುತ್ತೆ. ಮಾವು, ನೇರಳೆ, ಹಲಸು, ಸೀತಾಫಲ ಈ ತರಹದ ಹಣ್ಣುಗಳನ್ನು ನಾವು ನಮ್ಮ ಮನೆಗೆ ತಂದು ತಿನ್ನುತ್ತೇವೆ ಅಲ್ವಾ????”ಈ ಬಾರಿ ಒಂದು ಒಳ್ಳೆಯ ಪ್ರಯತ್ನ ಮಾಡೋಣ”… ಕಲ್ಯಾಣ ಕರ್ನಾಟಕವನ್ನು ಹಸಿರುಕರಣ ಮಾಡಲು ನಮ್ಮ ಮನೆಯಲ್ಲಿ ತಿಂದ ಮಾವು, ನೇರಳೆ, ಹಲಸು, ಸೀತಾಫಲ ಇತರೆ ಯಾವುದೇ ಹಣ್ಣಿನ ಬೀಜಗಳನ್ನು ಕಸದ ತೊಟ್ಟಿಗೊ ಅಥವಾ ನಗರ ಸಭೆ ಕಡೆಯಿಂದ ಮನೆ ಹತ್ತಿರ ಬರುವ ಕಸದ ಗಾಡಿಗೋ ಹಾಕುವ ಬದಲು ಹಣ್ಣುಗಳನ್ನು ತಿಂದ ಮೇಲೆ ಅದರ ಬೀಜಗಳನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಒಂದು ಸಣ್ಣ ಚೀಲದಲ್ಲಿ ಪ್ಯಾಕ್ ಮಾಡಿ ನಿಮ್ಮ ಮನೆಯಲ್ಲಿ ಶೇಖರಣೆ ಮಾಡಿ ಇಟ್ಟು ಕೊಳ್ಳಿ. ನಂತರ ಅವುಗಳನ್ನು ನಮ್ಮ ವನಸಿರಿ ಪೌಂಡೇಷನ್ ಸಂಸ್ಥೆಗೆ ನೀಡಿ.

ನಮ್ಮ ಸಂಸ್ಥೆ ವತಿಯಿಂದ ಅವುಗಳನ್ನು ಸಸಿಗಳಾಗಿ ಪೋಷಣೆ ಮಾಡುತ್ತೇವೆ. ಮತ್ತು ಎತ್ತರವಾಗಿ ಬೆಳೆದ ನಂತರ ಅವುಗಳನ್ನು ಉಚಿತವಾಗಿ ನಿಮಗೆ ನೀಡುತ್ತೇವೆ. ಮತ್ತು ವಿವಿಧ ಸಮಾರಂಭಗಳಲ್ಲಿ ಇವುಗಳನ್ನು ಉಡುಗೊರೆ ಯಾಗಿ ನೀಡುತ್ತೇವೆ. ಅದಕ್ಕೆ ದಯವಿಟ್ಟು ಯಾರೂ ಕೂಡಾ ದಿನನಿತ್ಯ ಸೇವಿಸಿದ ಹಣ್ಣಿನ ಬೀಜಗಳನ್ನು ಸಂಗ್ರಹಣೆ ಮಾಡಿ ವನಸಿರಿ ಸಂಸ್ಥೆಗೆ ನೀಡಬೇಕೆಂದು ವಿನಂತಿಸಿ ಕೊಳ್ಳುತ್ತೇವೆ ಅಥವಾ ಅವುಗಳನ್ನು ಕೆಲ ತಿಂಗಳುಗಳು ಕಳೆದ ಮೇಲೆ ಮಳೆಗಾಲ ಶುರುವಾಗುತ್ತದೆ. ಆವಾಗ ನೀವು ನಿಮ್ಮ ಕಾರು, ಬಸ್ಸು ಅಥವಾ ಯಾವುದೇ ವಾಹನದಲ್ಲಿ ನಿಮ್ಮ ನಗರದಿಂದ ಹೊರಗಡೆ ಎಲ್ಲಾದರು ಹೋದಾಗ ರಸ್ತೆ ಬದಿ ಇರುವ ಖಾಲಿ ನೆಲದಲ್ಲಿ ಹಣ್ಣಿನ ಗಿಡದ ಬೀಜಗಳನ್ನು ಎಸೆದರೆ ಮಳೆಗಾಲದಲ್ಲಿ ಆ ಬೀಜಗಳು ಮೊಳಕೆ ಒಡೆದು ಸಸಿ ಬೆಳೆಯುವ ಸಾಧ್ಯತೆ ಜಾಸ್ತಿ ಇರುತ್ತದೆ. ಹೀಗೆ ನಾವು ಹಾಕಿದ ಬೀಜಗಳಲ್ಲಿ ಒಂದೇ ಒಂದು ಬೀಜ ಮೊಳಕೆ ಯೊಡೆದು ಗಿಡ ಬೆಳೆದರೆ ನೀವು ಮಾಡಿದ ಕೆಲಸ ಸಾರ್ಥಕ ಆಗುತ್ತದೆ ಅಲ್ಲವಾ??? ಯಾರಿಗೋ ಫಲ ಕೊಡೊ ಗಿಡಕ್ಕೆ ನಾವೇಕೆ ಬೀಜ ಹಾಕಬೇಕು ಅನ್ನುವ ಅಸಡ್ಡೆ ಬೇಡ, ಅವರು ಯಾರೋ ಅಲ್ಲ ಅವರು ನಮ್ಮ ಮುಂದಿನ ಪೀಳಿಗೆ.ದಯವಿಟ್ಟು ಎಲ್ಲರೂ ಸರಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಸರಕಾರಿ ನೌಕರರು ದಿನನಿತ್ಯ ಸೇವಿಸುವ ಹಣ್ಣುಗಳ ಬೀಜಗಳನ್ನು ಶೇಖರಣೆ ಮಾಡಿ ವನಸಿರಿ ಸಂಸ್ಥೆಗೆ ನೀಡಬೇಕು. ವನಸಿರಿ ಸಂಸ್ಥೆಗೆ ಬೀಜಗಳನ್ನು ನೀಡಲು ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ 9480969895, 8970134571 ಈ ಮೂಲಕ ಕಲ್ಯಾಣ ಕರ್ನಾಟಕವನ್ನ ಹಸಿರುಕರಣ ಗೊಳಿಸೋಣ, ಪರಿಸಕ್ಕೆ ನಮ್ಮ ಚಿಕ್ಕ ಕೊಡುಗೆ ನೀಡೋಣ ಬನ್ನಿ ಪರಿಸರ ಸಂರಕ್ಷಣೆಗೆ ಕೈ ಜೋಡಿಸಿ ಎಂದು ವನಸಿರಿ ಪೌಂಡೇಷನ್ ಸದಸ್ಯ ಚನ್ನಪ.ಕೆ ಹೊಸಹಳ್ಳಿಯವರು ಪತ್ರಿಕಾ ಮಾಧ್ಯಮದ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ಮೂಲಕ ಮನವಿ ಮಾಡಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button