ಅಲೆಮಾರಿಯ ಜನಾಂಗ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಗುಂಡನಪಲ್ಲೆ ಜು.28

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಗುಂಡನಪಲ್ಲೆ ಗ್ರಾಮದಲ್ಲಿ ಅಲೆಮಾರಿಯ ಜನಾಂಗದವರಿಗೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಎಸ್ ಎಸ್ ಅಂಗಡಿಯವರು, ವಿವಿಧ ಕಾರ್ಯ ನಿಮಿತ್ಯ ಅಲೆಮಾರಿಯ ಜನ ಗ್ರಾಮಗಳಿಗೆ ಆಗಮಿಸಿ ತಾತ್ಕಾಲಿಕ ಶೆಡ್ ನಿರ್ಮಿಸಿ ಕುಟುಂಬ ಸಮೇತರಾಗಿ ವಾಸಿಸುವವರು, ವಾತಾವರಣ ಮಳೆ ಬದಲಾವಣೆಗಳಿಂದ ವಿವಿಧ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ಮಲೇರಿಯಾ, ಡೆಂಗ್ಯೂ ಚಿಕೂನ್, ವಾಂತಿ ಬೇಧಿ, ಚರ್ಮ ಕಾಯಿಲೆಗಳು, ಜಂತು ಬಾಧೆ ರೋಗಗಳ ಹರಡುವ ಸಂಭವ ಇರುತ್ತದೆ ಇಂತಹ ಜನಾರೋಗ್ಯ ಜಾಗೃತಿ ಮುಂಜಾಗ್ರತೆ ಕ್ರಮಗಳ ಪಾಲನೆ ವೈಯಕ್ತಿಕ ಸ್ವಚ್ಛತೆ ಪರಿಸರ ಸ್ವಚ್ಛತೆ ಶುದ್ಧ ನೀರು ಸೇವನೆ ಪರಿಸರ ಸ್ವಚ್ಛತೆ ಆದ್ಯತೆ ನೀಡಬೇಕು ಎಂದು ಅಲೆಮಾರಿಯ ಹೇಳವರ ಶೆಡ್ ಗಳಿಗೆ ಭೇಟಿ ನೀಡಿ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು, ಕೆಮ್ಮು ಶೀತ ಇದ್ದವರಿಗೆ ಸಮೀಪದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಲಾಯಿತು. ಗರ್ಭಿಣಿಯರಿಗೆ ೦ ದಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ ಮಾಹಿತಿ ಸಂಪರ್ಕ ಆರೋಗ್ಯ ಶಿಕ್ಷಣ ನೀಡವ ಮುಖಾಂತರ ಅಲೆಮಾರಿಯ ಹೆಳವರಿಗೆ ಉತ್ತಮ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳು, ಅಲೆಮಾರಿ ಜನಾಂಗದ ಮುಖಂಡರು ಯುವಕರು ತಾಯಿಂದಿರು ಗರ್ಭಿಣಿಯರು ಬಾಣಂತಿಯರು ಭಾಗವಹಿಸಿದ್ದರು.