ನೀರಿನ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು, ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು, ಎಸ್.ಕೆ ನ್ಯೂಸ್ ಕನ್ನಡ ಚಾನಲ್ ವರದಿಯ – ಫಲಶೃತಿ.
ನಾದ ಬಿ.ಕೆ ಮೇ.04

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ನಾದ ಬಿ.ಕೆ ಗ್ರಾಮದಲ್ಲಿ ಕೆಲವು ದಿನಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉದ್ಭವಿಸಿತು.ಒಂದು ಕಡೆ ಬಿಸಿಲಿನ ತಾಪಮಾನ, ಇನ್ನೊಂದು ಕಡೆ, ನೀರಿನ ಹಾಹಾಕಾರ, ಇದರಿಂದ ಬೇಸತ್ತು ಜನರು ಸಂಬಂಧಿಸಿದ ಪಂಚಾಯತ ಅಧಿಕಾರಿಗಳ ಗಮನಕ್ಕೂ ತಂದರೂ ಕಾರ್ಯಗಳು ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿತ್ತು.

ಇದರಿಂದ ರೋಸಿ, ರೊಚ್ಚಿಗೆದ್ದ ಗ್ರಾಮಸ್ಥರು ಬದುಕಲು ಮೊದಲು ನೀರು, ಬೇಕು ನೀರರಿದಿದ್ದರೆ ಬದುಕೇ ನಶ್ವರ ಎಂದ ದಿನಾಂಕ 08.05.2024 ರಂದು ಬುಧವಾರ ಪಂಚಾಯಿತಿಗೆ ಬೀಗ ಹಾಕಿ ಸಮಸ್ಯೆ ಬಗೆ ಹರಿಯುವ ವರೆಗೆ ಪ್ರತಿಭಟನೆಗೆ ಮಾಡಲು ಮುಂದಾಗಿದ್ದರು. ಇದರಿಂದ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಪಂಚಾಯತ ಅಧಿಕಾರಿಗಳು ತುರ್ತಾಗಿ ನೀರಿನ ಬೋರವೆಲ್ ವಾಹನ ತಂದು. ಮರು ಕೊಳವೆ ಬಾವಿ ಕೊರೆಸಿ ಗ್ರಾಮಸ್ಥರ ನೀರಿನ ದಾಹ ನೀಗಿಸಿ, ಗ್ರಾಮಸ್ಥರ ಪ್ರೀತಿಗೆ ಪಾತ್ರರಾದರು.

ಸಮಸ್ಯೆಗೆ ಬೇಗನೆ ಸ್ಪಂದಿಸಿದ ಪಂಚಾಯತ ಅಧಿಕಾರಿಗಳಿಗೆ ಹಾಗೂ ನೀರಿಗಾಗಿ ಹೋರಾಟಕ್ಕಿಳಿದ ಗ್ರಾಮದ ಮುಖಂಡರಿಗೆ ಸಿಹಿ-ಕಹಿ ಕನ್ನಡ ದಿನ ಪತ್ರಿಕೆಯಲ್ಲಿ ವರದಿ ಬಿತ್ತರಿಸಿದ ಸಂಪಾದಕರಿಗೆ, ವರದಿಗಾರರಿಗೆ, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಮುಂದೆ ನಡೆಯಬಹುದಾದ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ