ಗುಡೇಕೋಟೆ ಹೋಬಳಿಯ ಐದು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಯ ಗ್ರಾಮಸ್ಥರು ಸಂವಿಧಾನ ಜಾಥಾ ರಥಕ್ಕೆ ಅದ್ಧೂರಿ ಸ್ವಾಗತ.
ಚಿರುತು ಗುಂಡು ಜನೇವರಿ.31

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಚಿರುತು ಗುಂಡು ಗ್ರಾಮ ಪಂಚಾಯತಿ ಗ್ರಾಮದಲ್ಲಿ 29 ಸೋಮವಾರ ರಂದು ಬೆಳ್ಳಿಗೆ ಸಮಯದಿಂದ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರದ ವಾಹನವು ಆಗಮಿಸಿದ್ದು ಗ್ರಾಮದ ಊರಿನ ಮುಖಂಡರು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಶಾಲಾ ವಿದ್ಯಾರ್ಥಿಗಳು ಮಹಿಳೆಯರು ಅದ್ದೂರಿಯಾಗಿ ಕೂಡ್ಲಿಗಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ಹಳ್ಳಿಗಳಲ್ಲಿ ದೇಶದ ಆಚರಿಸುವಂತೆ ಹಬ್ಬದಂತೆ ಪ್ರತಿ ಮನೆಯಲ್ಲಿ ಸಂವಿಧಾನದ ಆಶಯಗಳು ಮೂಲಭೂತ ಹಕ್ಕುಗಳು ಸರ್ವರಿಗೂ ಸಮಾನ ಎನ್ನುವಂತೆ ಪ್ರತಿ ಗ್ರಾಮದಲ್ಲೂ ಮುಖಂಡರುಗಳು ಮಹಿಳೆಯರು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ಸಾಹ ಭರಿತರಾಗಿ ಸಂವಿಧಾನ ಜಾಗೃತಿ ಜಾಥಾದ ರಥವನ್ನು ತಮ್ಮ ತಮ್ಮ ಗ್ರಾಮಕ್ಕೆ ಸ್ವಾಗತಕ್ಕೆ ಬರ ಮಾಡಿ ಕೊಂಡು ಗ್ರಾಮ ಪಂಚಾಯಿತಿ ಹೊಂದಿದ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು,

ಆಯಾ ಗ್ರಾಮ ಪಂಚಾಯಿತಿಗಲ್ಲಿ ಏರ್ಪಡಿಸಿದಂತಹ ಕಾರ್ಯಕ್ರಮದಲ್ಲಿ ನೆರೆದಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಗ್ರಾಮದ ಗ್ರಾಮಸ್ಥರಿಗೆ ಸಂವಿಧಾನದ ಮಹತ್ವದ ಪೀಠಿಕೆ ಓದುವ ಮುಕೇನಾ ನೆರೆದಂತ ಎಲ್ಲರಿಗೂ ಸಂವಿಧಾನದ ಆಶಯಗಳನ್ನು ಜನ ಮನದಲ್ಲಿ ಮುಟ್ಟುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ವತಿಯಿಂದ ಉತ್ತಮ ಭಾಷಣಕಾರರಿಂದ ತಿಳಿಸುವುದರೊಂದಿಗೆ ಸರ್ಕಾರ ಮಹತ್ವ ಪೂರ್ಣವಾದ ಕಾರ್ಯಕ್ರಮ ಕೈಗೊಂಡಿರುವುದನ್ನು ಪ್ರಜ್ಞಾವಂತರು ಘನ ಸರ್ಕಾರದ ಪ್ಲಾನ್ ಬಗ್ಗೆ ಉತ್ತಮವಾದಂತ ಪ್ರಶಾಂಸೆ ವ್ಯಕ್ತಪಡಿಸಿದ್ದಾರೆ,

ಈ ಸಂರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಅಧಿಕಾರಿಗಳಾದ ಜಗದೀಶ್ ದಿಡಗೂರು ಹಾಗೂ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ನಡೆಯುತ್ತಿರುವ ಈ ಸಂವಿಧಾನದ ಜಾಥಾ ಕಾರ್ಯಕ್ರಮ ಕೂಡ್ಲಿಗಿ ತಾಲೂಕಿನ ಆದ್ಯಾಂತ ಪ್ರತಿ ಗ್ರಾಮದಲ್ಲೂ ಉತ್ತಮವಾದ ಬೆಂಬಲದೊಂದಿಗೆ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಸರ್ಕಾರದ ಹೂಡೇಂ, ಚಿರಾತ ಗುಂಡು, ಗಂಡಮೋಮ್ಮನಹಳ್ಳಿ, ಗುಡೇಕೋಟೆ, ಅಪ್ಪೆನಹಳ್ಳಿ, ರಾಮದುರ್ಗ, ಚಂದ್ರ ಶೇಖಪುರದಲ್ಲಿ ಯಶಸ್ವಿ ಗೊಳಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ