24/01/2025 ಬೆಂಗಳೂರು ಪ್ರಿಡಮ್ ಪಾರ್ಕ್ ನಲ್ಲಿ ಜರುಗಲಿರುವ ಸನ್ನತಿ ಪಂಚಶೀಲ ಪಾದಯಾತ್ರೆಕ್ಕೆ – ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಬೆಂಬಲ.
ಬಳ್ಳಾರಿ ಜ.18

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಯಿಂದ ಮಾಡಿಕೊಳ್ಳುತ್ತಾ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಆಂಧ್ರ ಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಡಿನ ಚಿಕ್ಕು ಮತ್ತು ಚಿಕ್ಕುಣಿ ಸಂಘದ ಪೂಜ್ಯ ಭಂತೆ ಭೋಧಿದತ್ತ ಇವರ ನೇತೃತ್ವದಲ್ಲಿ ದಿನಾಂಕ 15-11-2024 ರಂದು ಸನ್ನತಿಯಿಂದ ಪ್ರಾರಂಭವಾದ ಪಂಚಶೀಲ ಪಾದಯಾತ್ರೆ ಕರ್ನಾಟಕ ರಾಜ್ಯದಲ್ಲಿ ಇರುವ ಸಾಮ್ರಾಟ್ ಅಶೋಕರ ಶಿಲಾ ಶಾಸನಗಳಿಗೆ ಭೇಟಿ ನೀಡುತ್ತಾ, ಮತ್ತು ಅಲ್ಲಿಯ ಅವಶ್ಯಕತೆಗಳ ಬಗ್ಗೆ ಸಂಕ್ಷೀಪ್ತವಾಗಿ ಅಧ್ಯಯನ ಮಾಡುತ್ತಾ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯ ನಗರ, ಬಳ್ಳಾರಿ, ಚಿತ್ರದುರ್ಗಾ, ತುಮಕೂರು, ಬೆಂಗಳೂರು ಗ್ರಾಮಾಂತಾರ ಜಿಲ್ಲೆಗಳಲ್ಲಿ ಸುಮಾರು 800 ಕಿಮೀ ಕ್ಕೂ ಹೆಚ್ಚು ಸಂಚರಿಸಿ ನೂರಾರು ಗ್ರಾಮಗಳಲ್ಲಿ. ವಾಸ್ತವ್ಯ ಮಾಡಿ. ಧಮ್ಮ ಸಂದೇಶ ನೀಡಿ, ಬೌದ್ಧ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಜನಜಾಗೃತಿ ಮೂಡಿಸುತ್ತಾ ಆಯ್ದ ಸ್ಥಳಗಳಲ್ಲಿ ಧಮ್ಮಾ ದೀಕ್ಷಾ ನೀಡುತ್ತಾ ಮುಂದುವರೆದು ದಿನಾಂಕ 23-01-2025 ರಂದು ಯಶವಂತಪೂರ ಮಾರ್ಗವಾಗಿ ಡಾ, ಬಿ.ಆರ್ ಅಂಬೇಡ್ಕರ್ ರವರ ಕನಸಿನ ದಕ್ಷಿಣ ಭಾರತ ಧಮ್ಮ ಕೇಂದ್ರವಾದ ನಾಗಸೇನ ಬುದ್ಧ ವಿಹಾರ ಸದಾಶಿವ ನಗರ ತಲುಪಿ ವಾಸ್ತವ್ಯ ಮಾಡಲಾಗುವುದು. ದಿನಾಂಕ 24-01-2025 ರಂದು ಬೆಳಗ್ಗೆ 9:00 ಗಂಟೆಗೆ ನಾಗಸೇನ ಬುದ್ಧ ವಿಹಾರದಿಂದ ಹೊರಟು ಬೆಂಗಳೂರು ಪ್ರೀಡಮ್ ಪಾರ್ಕ್ ತಲುಪಲಿದೆ.ಈ ಕಾರ್ಯಾಕ್ರಮದ ಸಮಾರೋಪ ಸಮಾರಂಭದಲ್ಲಿ ಸುಮಾರು ಹತ್ತು ಸಾವಿರ ಕ್ಕೂ ಹೆಚ್ಚು ಜನರು ಶಾಂತಿ ಪೂರ್ವಕವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿ ಫ್ರೀಡಮ್ ಪಾರ್ಕ್ ತಲುಪಿ ಬಹಿರಂಗ ಸಭೆಯಲ್ಲಿ ಸಮಾರೋಪ ಗೊಳ್ಳಲಾಗುವುದು.ಈ ಅಂತಿಮ ಘಟ್ಟದ ಪಾದಯಾತ್ರೆಯಲ್ಲಿ ಕರ್ನಾಟಕ ರಾಜ್ಯದ ಸಮಸ್ತ ಚಿಕ್ಕು ಸಂಘ ಬೌದ್ಧ ಸಂಘ ಸಂಸ್ಥೆಗಳು, ಎಲ್ಲಾ ದಲಿತ ಸಂಘರ್ಷ ಸಮಿತಿಗಳ ರಾಜ್ಯ ಸಂಚಾಲಕರು, ಮುಖಂಡರು, ನೌಕರರು, ವಿದ್ಯಾರ್ಥಿ ಯುವ ಜನರು, ಕಾರ್ಮಿಕರು, ಮತ್ತು ಪ್ರಗತಿಪರ ಚಿಂತಕರು ಭಾಗವಹಿಸುವರು.ಬೌದ್ಧ ಸಮುದಾಯದ ವಿವಿಧ ಬೆಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಯವರಿಗೆ ಮನವಿ ಪತ್ರವನ್ನು ನೀಡಲಾಗುವುದು.ಈ ಮನವಿ ಪತ್ರವನ್ನು ಸ್ವಯಂ ಮುಖ್ಯಮಂತ್ರಿ ಯವರಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರು ಸ್ವೀಕರಿಸಲಿದ್ದಾರೆ. ನಂತರ ಈ ಕುರಿತು ಸರಕಾರ ತನ್ನ ಸ್ಪಷ್ಟವಾದ ನಿಲುವನ್ನು ಪ್ರಕಟಿಸಲು ಗೌರವ ಪೂರ್ವಕವಾಗಿ ಕೋರಲಾಗಿದೆ.ಸರ್ಕಾರಕ್ಕೆ ಸಲ್ಲಿಸುವ ಬೌದ್ಧ ಸಮುದಾಯದ ಬೇಡಿಕೆಗಳು.1. ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಕನಿಷ್ಠ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ ಸನ್ನತ್ತಿಯನ್ನು 7 ಸ್ಟಾರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು.2. ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.3. ಬೌದ್ಧರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕನಿಷ್ಠ 1000 ಕೋಟಿ ಅನುದಾನ ಈ ಬಜೆಟ್ನಲ್ಲಿ ಒದಗಿಸಬೇಕು.4. ಪ್ರತಿ ವರ್ಷ ಮಹಾತ್ಮ ಗೌತಮ್ ಬುದ್ಧ ಜಯಂತಿಗೆ ಸಾರ್ವತ್ರಿಕವಾಗಿ ರಜೆ ಘೋಷಣೆ ಮಾಡಬೇಕು.5. ಬೋಧಗಯ ಟೆಂಪಲ್ ಆಕ್ಟ್ 1949 ರನ್ನು ರದ್ದು ಗೊಳಿಸಿ ಬುದ್ಧ ಗಯಾದ ಮಹಾಬೋಧಿ, ಮಹಾ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮತ್ತು ಬಿಹಾರ ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು.6. ಕನಾಟಕ ಸರಕಾರ ಪ್ರತಿ ವರ್ಷ ಫೆಬ್ರುವರಿ 12 ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕು.7. 1990 ರ ಸಂವಿಧಾನ ತಿದ್ದುಪಡಿ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿ ವೇತನ ಪಡೆಯಲು ಅನುಕೂಲ ವಾಗುವಂತೆ ಸಮಾಜ ಕಲ್ಯಾಣ ಇಲಾಖೆಯ SSP.kar ತಂತ್ರಾಂಶ ಸರಿಪಡಿಸ ಬೇಕು ಮತ್ತು ಎಲ್ಲಾ ಪರಿಶಿಷ್ಟ ಜಾತಿಯ ಬೌದ್ಧ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು.8. ಸಂವಿಧಾನದ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಗಳು ಹಿಂದೂ ಅಥವಾ ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ನೀಡುವ ಜಾತಿ ಪ್ರಮಾಣ ಪತ್ರದಲ್ಲಿ (ನಮೂನೆ -1) ಯಾವುದೇ ಧರ್ಮದ ನಮೂದು ಮಾಡದೆ ಸಂವಿಧಾನದ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಕೂಡಲೇ ಸಂವಿಧಾನದ ಕಾಯ್ದೆ ಪ್ರಕಾರ ಜಾತಿ ಪ್ರಮಾಣ ಪತ್ರ ನಮೂನೆ 1 ರಲ್ಲಿ ಧರ್ಮದ ಉಲ್ಲೇಖ ಇರುವಂತೆ ಮಾರ್ಪಾಡು ಮಾಡಬೇಕು.9. ಉದ್ಯೋಗ ಅವಕಾಶ ಸಂದರ್ಭದಲ್ಲಿ ಈ ಹಿಂದೆ ತಮ್ಮ ದಾಖಲೆಗಳಲ್ಲಿ ಉಪ ಜಾತಿ ನಮೂಧಿಸದೆ ನವಬೌದ್ಧ ಎಂದು ದಾಖಲಿಸಿದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಜಾತಿ ದೃಢಿಕರಣ ಸಂದರ್ಭದಲ್ಲಿ ತಿರಸ್ಕಾರ ಮಾಡುತ್ತಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟಿಕರಣ ನೀಡಿ ಆದೇಶ ಹೊರಡಿಸಿ ನವಬೌದ್ಧರನ್ನು ಪರಿಶಿಷ್ಟ ಜಾತಿಯೆಂದು ಪರಿಗಣಿಸಬೇಕು.10. ಧಾರ್ಮಿಕ ಅಲ್ಪ ಸಂಖ್ಯಾತರಾಗಿ 2ಎ ಪ್ರಮಾಣ ಪತ್ರ ಪಡೆದ ಬೌದ್ಧರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಲ್ಲಿ ಬೌದ್ಧ ಧರ್ಮಿಯರಿಗೆ ಪ್ರತ್ಯೇಕ ಗುರಿ ನಿಗದಿ ಪಡಿಸಬೇಕು.11. ರಾಜ್ಯದ ಪ್ರತಿ ಪಂಚಾಯತಿ. ತಾಲೂಕ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬುದ್ಧ ವಿಹಾರ ನಿರ್ಮಾಣ ಮಾಡಲು ಕನಿಷ್ಟ 5 ರಿಂದ 10 ಎಕರೆ ಜಮೀನು ಕಾಯ್ದಿರಿಸಬೇಕು. ಆಸಕ್ತ ಬೌದ್ಧ ಸಂಘ ಸಂಸ್ಥೆಗಳಿಗೆ ಭೂ ಮಂಜೂರಾತಿ ಯಾವುದೇ ವಿಳಂಬ ಮಾಡದೆ ನೀಡಬೇಕು.12. ಯಾದಗಿರಿ ಜಿಲ್ಲೆಯ ಶಹಾಪೂರದ ವಿಶ್ವ ವಿಖ್ಯಾತ ಮಲಗಿರುವ ಬುದ್ಧನ ಬೆಟ್ಟವನ್ನು ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರಗಳು ಪ್ರವಾಸಿ ತಾಣ ಎಂದು ಘೋಷಿಸಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದೆ. ಈ ಸ್ಥಳದ ಅಭಿವೃದ್ಧಿಗಾಗಿ ಕನಿಷ್ಠ 50 ಎಕರೆ ಪ್ರದೇಶದಲ್ಲಿ ಬಹು ಉಪಯೋಗಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ದಿನಾಂಕ 27-10-2021 ರಂದು ಶಹಾಪುರಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ ಇಲ್ಲಿಯವರೆಗೆ ಯಾವುದೇ ಪ್ರಗತಿ ಆಗಿಲ್ಲ ಇಡಿ ಯೋಜನೆ ದಿಕ್ಕು ತಪ್ಪಿ ಬ್ರಷ್ಟಾಚಾರದ ಕೂಪವಾಗದೆ ಕೂಡಲೇ ಯೋಜನಾ ಬದ್ದವಾಗಿ ಮಲಗಿರುವ ಬುದ್ದ ಸಗರಾದ್ರಿಪಾರಂಪರಿಕ ತಾಣ ಮತ್ತು ಪರಿಸರ ಸಂರಕ್ಷನಾ ಉದ್ಯಾನವನ | Sleeping Buddha SagaradriHeritage And Ecological Protection Park]13. ರಾಜ್ಯಾದ್ಯಾಂತ ಬುದ್ಧ ವಿಹಾರಗಳ ನಿರ್ವಹಣೆಗಾಗಿ ಮುಜರಾಯಿ ಇಲಾಖೆಯಿಂದ ಅನುದಾನ ನೀಡಬೇಕು.14. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಬುದ್ಧ ವಿಹಾರಗಳಿಗೆ ಮೂಲ ಸೌಕರ್ಯಗಳಾದ ಸಂಪರ್ಕ ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕು. ಅಗತ್ಯವಿದ್ದಲ್ಲಿ ಯಾತ್ರೀ ನಿವಾಸ ಕಲ್ಯಾಣ ಮಂಟಪಗಳನ್ನು ನಿರ್ಮಾಣ ಮಾಡಬೇಕು.15. ಕರ್ನಾಟಕ ರಾಜ್ಯದಲ್ಲಿರುವ ಸಾಮ್ರಾಟ್ ಅಶೋಕರ ಶಿಲಾ ಶಾಸನಗಳನ್ನು ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಬೇಕು (ಗುಲಬರ್ಗಾ ಜಿಲ್ಲೆಯ ಸನ್ನತ್ತಿ, ರಾಯಚೂರು ಜಿಲ್ಲೆಯ 2. ಮಸ್ಕಿ. ಕೊಪ್ಪಳದ 3. ಗವಿ ಮಠ, 4.ಪಾಲ್ಕಿ ಗುಂಡು, ಬಳ್ಳಾರಿ ಜಿಲ್ಲೆಯ 5. ನಿಟ್ಟೂರು, 6. ಉದುಂಗೋಳ, ಚಿತ್ರದುರ್ಗ ಜಿಲ್ಲೆಯ 7. ಅಶೋಕ ಸಿದ್ಧಪರ, 8.ಬ್ರಹ್ಮಗಿರಿ, 9. ಜಟಿಂಗ್ ರಾಮೇಶ್ವರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 10 ರಾಜಘಟ್ಟ ಇತರೇ16. ರಾಜ್ಯದ ಹಲವಾರು ಕಡೆ ಬುದ್ಧ ವಿಹಾರ ನಿರ್ಮಾಣ ಮಾಡಲು ದಾನಿಗಳು ಭೂಮಿ ದಾನ ಮಾಡಿದ್ದು ಹಲವು ಕಡೆ ಸರ್ಕಾರದ ಭೂಮಿಯನ್ನು ಬುದ್ಧ ವಿಹಾರ ನಿಮಾಣಕ್ಕೆ ಸ್ಥಳಿಯ ಆಡಳಿತ ದಿಂದ ಭೂಮಿ ಕಾಯ್ದಿರಿಸಲಾಗಿದೆ ಅಂತಹ ಸ್ಥಳಗಳಲ್ಲಿ ಬುದ್ಧ ವಿಹಾರ ನಿರ್ಮಾಣಕೆ ಸರಕಾರ ಅನುದಾನ ನೀಡಬೇಕು.ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಕೂಡಲೇ ಕ್ರಮ ತೆಗೆದು ಕೊಳ್ಳಬೇಕು ಎಂದು ಮಾನ್ಯ ಮುಖ್ಯಮಂತ್ರಿ ಯವರಲ್ಲಿ ಕೋರಲಾಗುವುದು.ಮತ್ತು ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೌದ್ಧ ಉಪಾಸಕಾ ಉಪಾಸಿಕಾರು ಮತ್ತು ಡಾ, ಬಿ.ಆರ್ ಅಂಬೇಡ್ಕರ್ ರವರ ಅನುಯಾಯಿಗಳು, ದಲಿತ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಆಗಮಿಸಿ ಸನ್ನತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಯಶ್ವಸ್ವಿ ಗೊಳಿಸಬೇಕೆಂದು ಈ ಪತ್ರಿಕಾ ಗೋಷ್ಠಿಯ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಕೆ.ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು, ಸಿ ಶಿವಕುಮಾರ್ ಜಿಲ್ಲಾ ಅಧ್ಯಕ್ಷರು ಛಲವಾದಿ ಮಹಾಸಭಾ ಶೇಖರಪ್ಪ ನಿರ್ದೇಶಕರು ಐಎಎಸ್ ಐಪಿಎಸ್ ಕೆಎಎಸ್ ತರಬೇತಿ ಕೇಂದ್ರ ಬಳ್ಳಾರಿ, ಮಾನಯ್ಯ ಬಿ ಗೋನಾಳ್ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ, ರಾಮಕೃಷ್ಣ ಛಲವಾದಿ ಮುಖಂಡರು, ರಂಗಪ್ಪ ತಾಳೂರು ತಾಲೂಕು ಉಪಾಧ್ಯಕ್ಷರು ಸಿರುಗುಪ್ಪ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಮೂಲಕ ಕೋರಲಾಗಿದೆ.