ಪೌರ ಕಾರ್ಮಿಕರಿಗೆ ಪ್ರತಿ ತಿಂಗಳ 2000 ಸಂಕಷ್ಟ ಭತ್ಯೆ – ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಿ.

ಹುನಗುಂದ ಸಪ್ಟೆಂಬರ್.23

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸೇವೆ,ಸಮರ್ಪಣೆ ಕಾರುಣ್ಯದಿಂದ ಸದಾ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ ಹೇಳಿದರು.ಶನಿವಾರ ಪಟ್ಟಣದ ಪುರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚಣೆಯಲ್ಲಿ ಅಧ್ಯಕ್ಷತೆಯನ್ನು ವಹಿಸಕೊಂಡು ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಪಟ್ಟಣದ ಜನರು ಬೆಚ್ಚನೆ ಮಲಗಿರುವ ಸಮಯದಲ್ಲಿ ತಾವೆದ್ದು ಕಸವನ್ನು ಸ್ವಚ್ಚಗೊಳಿಸಿ ಜನರು ಕಣ್ಣು ಬಿಡುವ ಮುನ್ನವೇ ತಮ್ಮ ಪಾಲಿನ ಕೆಲಸ ಮುಗಿಸಿ ಮನೆ ಸೇರಿಕೊಳ್ಳುವ ಪೌರ ಕಾರ್ಮಿಕರ ಕಾರ್ಯ ಮೆಚ್ಚುವಂತಾದ್ದು.ಪೌರ ಕಾರ್ಮಿಕರು ಪಟ್ಟಣದ ಆರೋಗ್ಯದ ಜತೆಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಜಾಗ್ರತೆಯಿಂದ ನೋಡುವುದು ಬಹಳ ಮುಖ್ಯ.ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ಅನೇಕ ವರ್ಷಗಳ ನಿಮ್ಮಗಳ ಪ್ರಾಮಾಣಿಕ ಸೇವೆಗೆ ರಾಜ್ಯ ಸರ್ಕಾರ ೨೮ ಜನ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ್ದು.ಪೌರ ಕಾರ್ಮಿಕರು ನಿಮ್ಮ ಕುಟುಂಬದ ವಿವರವನ್ನು ನೀಡಿದರೇ ಖಂಡಿತ ಸಮಾಜ ಕಲ್ಯಾಣ ಮತ್ತು ಇತರೇ ಇಲಾಖೆಗಳಲ್ಲಿ ಸಿಗುವ ಮಕ್ಕಳ ಶಿಷ್ಯ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕೊಡಿಸಲು ಸಾಧ್ಯ.ಅದರ ಜೊತೆಗೆ ಜೀವ ವಿಮೆ,ಆರೋಗ್ಯ ವಿಮೆ,ಅಪಘಾತ ವಿಮೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.ಉಪಾಧ್ಯಕ್ಷೆ ಶಾಂತಾ ಮೇಲಿನಮನಿ ಮಾತನಾಡಿ ಪೌರ ಕಾರ್ಮಿಕರ ಹಿತ ದೃಷ್ಠಿಯಿಂದ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ತಾವು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು.

ಪಟ್ಟಣದ ಆರೋಗ್ಯ ಕಾಪಾಡುವುದರ ಜೊತೆಗೆ ನಿಮ್ಮ ಮತ್ತು ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಯ್ದುಕೊಳ್ಳಬೇಕು.ಸರ್ಕಾರ ಪ್ರತಿ ತಿಂಗಳ ತಮಗೆ ೨೦೦೦ ಸಂಕಷ್ಟ ಭತ್ಯೆ ನೀಡುತ್ತಿದ್ದು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸದಸ್ಯ ಮಹೇಶ ಬೆಳ್ಳಿಹಾಳ ಮಾತನಾಡಿ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪಟ್ಟಣದ ಕೊಳೆಯನ್ನು ತಗೆದು ಪಟ್ಟಣದ ಆರೋಗ್ಯ ಮತ್ತು ಸ್ವಾಸ್ಥö್ಯವನ್ನು ಕಾಪಾಡಲು ನಿತ್ಯ ಹೆಣಗಾಡುತ್ತಿರುವ ಪೌರ ಕಾರ್ಮಿಕರ ಕಾರ್ಯವನ್ನು ಸಾರ್ವಜನಿಕರು ಮರೆಯಬಾರದು.ಪೌರ ಕಾರ್ಮಿಕರು ಆರೋಗ್ಯದಿಂದ ಇದ್ದರೇ ಮಾತ್ರ ಪಟ್ಟಣದ ಜನತೆ ಆರೋಗ್ಯದಿಂದ ಇರಲು ಸಾಧ್ಯ.ಕೆಲಸದ ವೇಳೆಯಲ್ಲಿ ಸರ್ಕಾರ ತಮಗೆ ನೀಡಿರುವ ಹ್ಯಾಂಡ್ ಬ್ಲೌಜ್,ಶೋಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಪಟ್ಟಣದ ಪೌರ ಕಾರ್ಮಿಕರಿಗೆ ಕ್ರೀಡಾಕೂಟವನ್ನು ಆಯೋಜಿಸಿ ವಿಜೇತ ಪೌರ ಕಾರ್ಮಿಕರಿಗೆ ಪ್ರಶಸ್ತಿ ವಿತರಣೆ ಮತ್ತು ಪೌರ ಕಾರ್ಮಿಕರನ್ನು ಪುರಸಭೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಚಂದ್ರು ತಳವಾರ,ರಾಜಮ್ಮ ಬದಾಮಿ,ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಹಾಂತೇಶ ತಾರಿವಾಳ,ಪುರಸಭೆ ಸಿಬ್ಬಂದಿ ಶ್ರೀನಿವಾಸ ಬದಾಮಿ, ಎಚ್.ಎಚ್.ಚಲವಾದಿ,ಬಾಬು ಲೈನ್,ಹಗೇದಾಳ,ಸಿದ್ದು ಹಿರೇಮನಿ,ಆರೋಗ್ಯ ಇಲಾಖೆಯ ಅಧಿಕಾರಿ ಯಮನಪ್ಪ ಮಾದರ ಸೇರಿದಂತೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.ಪುರಸಭೆ ಅಧಿಕಾರಿ ಶಂಕ್ರಪ್ಪ ಉಳ್ಳಿ ಸ್ವಾಗತಿಸಿ,ಮುತ್ತಣ್ಣ ಹುಣಶ್ಯಾಳ ನಿರೂಪಿಸಿ ವಂದಿಸಿದರು.

ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button