ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣ ದತ್ತ ಸಾಗಬೇಕು – ಪಿ.ಎಸ್.ಐ ಐಶ್ವರ್ಯ ನಾಗರಾಳ.
ನರೇಗಲ್ ಡಿ.19

ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲ ತಾಣಗಳ ಬಳಕೆಯನ್ನು ಯುವ ಜನತೆ ಅಗತ್ಯಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದು, ಜಾಲ ತಾಣಗಳಲ್ಲಿ ವೈಯಕ್ತಿಕ ಹಂಚಿ ಕೊಳ್ಳಬೇಡಿ. ವಿಚಾರಗಳ ಮೂಲಕ ಸೈಬರ್ ಅಪರಾಧಗಳ ತಡೆಗಟ್ಟುವಿಕೆಯಲ್ಲಿ ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸಿ ಹಾಗೂ ನಮ್ಮ ಸುತ್ತಲೂ ಘಟಿಸುತ್ತಿರುವ ದುರ್ಘಟನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಇಲ್ಲದ ಉಸಾಬರಿ ನಮಗೇಕೆ ಬೇಕು? ಎಂದು ಮನೋಭಾವ ಅಪರಾಧಗಳ ಸಂಖ್ಯೆ ಹೆಚ್ಚಿ ಪಾರಾಗುತ್ತಾರೆ. ಇದನ್ನು ತಪ್ಪಿಸಲು ಸಹಕಾರ ಅಗತ್ಯ ಎಂದು ಪಿ.ಎಸ್.ಐ ಐಶ್ವರ್ಯ ನಾಗರಾಳ ಹೇಳಿದರು.ಪಟ್ಟಣದ ಎಸ್.ಕೆಆರ್.ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ನಿಮಿತ್ತ ನರೇಗಲ್ಲ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಸ್ತುತ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಕಂಡೂ ಕಾಣದಂತಿರುವುದು ಅಪರಾಧ ಮತ್ತು ಅಪರಾಧಿಯನ್ನು ಪ್ರೋತ್ಸಾಹಿಸಿದಂತೆ ಅಪರಾಧ ಮಾಡುವುದು ಎಷ್ಟು ತಪ್ಪೋ, ಮುಚ್ಚಿಡುವುದೂ ಅಷ್ಟೇ ತಪ್ಪು ಎಂದು ಹೇಳಿದರು. ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಮುಖ್ಯವಾಗಿರುತ್ತದೆ. ಕಿಡಿ ಗೇಡಿಗಳು ನಿಮಗೇನಾದರೂ ಕಿರುಕುಳ ನೀಡಿದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಿದರೇ ಜಾಗ್ರತೆಯಿಂದ ವರ್ತಿಸಬೇಕು. ಕಿಟಕಿ ಮತ್ತು ಬಾಗಿಲು ಪಕ್ಕ ಬೆಲೆ ಬಾಳುವ ವಸ್ತು ಇಡಬಾರದು. ನಿಮ್ಮ ಸಂಪತ್ತು ಅಪರಾಧಗಳಿಗೆ ಪ್ರಚೋದನೆ ನೀಡದಿರಲಿ. ಮೈ ಮೇಲೆ ಒಡವೆ ಧರಿಸಿ ತಿರುಗಾಡುವ ಪರಿ ಪಾಠ ತಪ್ಪಿಸಿ. ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಈ ವೇಳೆ ಮುಖ್ಯ ಶಿಕ್ಷಕ ಎಸ್.ಬಿ ನಿಡಗುಂದಿ, ಜೆ.ಎಂ ಜೋಶಿ, ಎಂ.ವಿ ಜಾಧವ, ಬಿ.ಟಿ ತಾಳಿ, ಮಾರ್ಥಾಂಡ ಉಪ್ಪಾರ ಸೇರಿದಂತೆ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ