ಡೆಂಗ್ಯೂ ತಡೆಗೆ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಕುಟುಂಬದ ಸದಸ್ಯರು – ಜವಾಬ್ದಾರಿ ನಿಭಾಯಿಸಿ.
ಹೊನ್ನಾಕಟ್ಟಿ ಡಿ.06

ಬಾಗಲಕೋಟ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ವಿವಿಧ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳ ಆರೋಗ್ಯ ಅರಿವು ಜನಜಾಗೃತಿ ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಗ್ರಾಮದ ಕುಟುಂಬದ ಸಮೀಕ್ಷೆ ಮುಖಾಂತರ ಮನೆ ಮನೆಗೆ ಭೇಟಿ ನೀಡಿ, ವಿವಿಧ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಚಿಕೂನ್ ಗುನ್ಯಾ, ಮಲೇರಿಯಾ, ಆನೇಕಾಲು ಕುಷ್ಠರೋಗ, ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಆರೋಗ್ಯ ಅರಿವು ಮೂಡಿಸಿ ಸಂಶಯುತರ ರಕ್ತ ಲೇಪನ ಸಂಗ್ರಹಿಸಲಾಯಿತು. ಪ್ರಾಸ್ತಾವಿಕವಾಗಿ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು ಸೊಳ್ಳೆಗಳು ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ, ಆನೆಕಾಲು ರೋಗ, ಚಿಕೂನ್ ಗುನ್ಯಾ, ಮೆದಳು ಜ್ವರ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುತ್ತವೆ. ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಗುರಿ ನಮ್ಮದಾಗಬೇಕು. ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ಅನುಪಯುಕ್ತ ಕಸ ವಿಲೇವಾರಿ ಮಾಡಿ ಸೊಳ್ಳೆ ಪರದೆ ಸೊಳ್ಳೆ ನಿರೋಧಕ ಬಳಸಬೇಕು. ಮನೆ ಸುತ್ತ ಮುತ್ತ ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಬೇಕು.

ಯಾವುದೇ ತರಹ ಜ್ವರ, ಎರಡು ವಾರಕಿಂತ ಹೆಚ್ಚು ಕೆಮ್ಮು ಇದ್ದವರು, ತೂಕ ಕಡಿಮೆ ಕಫದಲ್ಲಿ ರಕ್ತ ಕಾಣಿಸುವುದು, ಕ್ಷಯ ರೋಗದ ಲಕ್ಷಣ ಇರಬಹುದು ಭಯ ಬೇಡ ಕಫ ಪರೀಕ್ಷೆಗೆ ಸಮೀಪದ ಸರಕಾರಿ ಆಸ್ಪತ್ರೆಗೆ ಹೋಗಿರಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಮುಂಜಾಗ್ರತೆ ಕ್ರಮಗಳ ಪಾಲಿಸಿ ಆಸ್ಪತ್ರೆಗಳ ಅಲೆದಾಟ ತಪ್ಪಿಸಿ ಕೊಳ್ಳಿ. ವಿವಿಧ ಆರೋಗ್ಯ ಸಮಸ್ಯೆಗಳಿಗೆ 104 ಉಚಿತ ಕರೆ ಮಾಡಿ ಪರಿಹಾರ ಪಡೆಯಿರಿ ಎಂದು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಮಾಹಿತಿ ನೀಡಿದರು. ವಿವಿಧ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳ ಆರೋಗ್ಯ ಅರಿವು ಜನಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಆಶಾ ಕಾರ್ಯಕರ್ತೆ ಪದ್ಮಾ ಬಂಡಿವಡ್ಡರ, ಗ್ರಾಮದ ಲಕ್ಷ್ಮಣ ಬಡಿಗೇರ, ರಾಮಪ್ಪಲೊಂಡವೆ,ವೆಂಕಣ್ಣ ಸೂರ್ಯವಂಶಿ, ರುಕುಮವ್ವ ಸೂರ್ಯವಂಶಿ, ಸುಶೀಲಾ, ಧರೆಪ್ಪ ಸೂರ್ಯವಂಶಿ, ಮುಖಂಡರು, ಯುವಕರು, ಗರ್ಭಿಣಿಯರು, ತಾಯಿಂದಿರು ಭಾಗವಹಿಸಿದ್ದರು.