ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಅವರಿಂದ ಮತದಾನ.
ಕೂಡ್ಲಿಗಿ ಮೇ.07

ಲೋಕಸಭಾ ಚುನಾವಣೆ ಅಂಗವಾಗಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮಂಗಳವಾರ ಬೆಳಿಗ್ಗೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಸೊಲ್ಲಮ್ಮ ಶಾಲೆಯ ಮತಗಟ್ಟೆ ಸಂಖ್ಯೆ 44 ರಲ್ಲಿ ಬಿಜೆಪಿ ಎಸ್.ಟಿ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಬಂಗಾರು ಹನುಮಂತು ಅವರು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು ಮತದಾನವೆಂಬುದು ಸಂವಿಧಾನವು ಪ್ರಜೆಗಳಿಗೋಸ್ಕರ ಕಲ್ಪಿಸಿರುವ ಹಕ್ಕು. ಪ್ರಜೆಗಳೇ ತಮ್ಮ ಇಚ್ಚೆಯನುಸಾರ ನಾಯಕನನ್ನು ಆಯ್ಕೆ ಮಾಡಿ ತಮ್ಮ ಕ್ಷೇತ್ರ ಅಭಿವೃದ್ಧಿಪಡಿಸುವ ಸಲುವಾಗಿ, ತಮ್ಮ ಕ್ಷೇತ್ರದ ಪರವಾಗಿ ಸಂಸತ್ತಿಗೆ ಕಳಿಸುವ ಆಯ್ಕೆ ಇದಾಗಿದೆ. ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಹೌದು. ಸಮಗ್ರ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಭದ್ರತೆಯ ದೃಷ್ಟಿಯಿಂದ ಇಂದಿನ ಮತದಾನ ಕಾರಣವಾಗಲಿದ್ದು, ಪ್ರಜ್ಞಾವಂತ ಮತದಾರರು ಮತದಾನದಿಂದ ದೂರ ಉಳಿಯಬೇಡಿ ಎಲ್ಲರಿಗೂ ಚಲಾಯಿಸಲು ಪ್ರೇರೆಪಿಸಿ ನೀವು ಮತದಾನ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.