ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾಕ್ಟರ್ ಸೀತವ್ವ ಜೋಡಟ್ಟಿ ಅವರ – ಕಾರ್ಯ ಶ್ಲಾಘನೀಯ.

ರಾಯಬಾಗ ಮೇ.23

ಪಟ್ಟಣದಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಘಟಪ್ರಭಾ ಹಾಗೂ ಇನ್ಫೋಸಿಸ್ ಮತ್ತು ಫನಕ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 10 ನೇ. ತರಗತಿ ಅನುತ್ತೀರ್ಣರಾದ ಮಕ್ಕಳಿಗೆ ಎರಡು ದಿನಗಳ ಕಾಲ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿವಿಧ ಶಾಲೆಯ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳು ಮುಂದಿನ ಪ್ರಯತ್ನದಲ್ಲಿ ಉತ್ತೀರ್ಣವಾಗಲಿ ಎಂದು ಹಾರೈಸುತ್ತೇನೆ ಎಂದು ಕ್ಲಸ್ಟರ್ ಆಫೀಸರ್ ಆದ ಸಾಗರ್ ಶಿವಕ್ಕಣ್ಣವರ ಅವರು ಹೇಳಿದರು. ನಮ್ಮ ಸಂಸ್ಥೆಯ ಸಿ.ಇ.ಓ ಆದ ಸೀತವ್ವ ಜೋಡಟ್ಟಿ ಅವರು ಬಾಲ್ಯದಲ್ಲಿಯೇ ದೇವದಾಸಿ ಪದ್ಧತಿ ಎಂಬ ಮೂಡನಂಬಿಕೆಗೆ ಬಲಿಯಾಗಿ ಹಲವಾರು ಅವಮಾನಗಳನ್ನು ಅನುಭವಿಸಿದ್ದಾರೆ. ಆದ್ದರಿಂದ ನಮ್ಮ ಮಕ್ಕಳು ಭವಿಷತ್ತಿನಲ್ಲಿ ಹೀಗೆಯೇ ಕಷ್ಟವನ್ನು ಅನುಭವಿಸ ಬಾರದೆಂದು ಮಾಸ್ ಎಂಬ ಸಂಸ್ಥೆಯನ್ನು ಬೆಳೆಸುವ ಮೂಲಕ ಅದರ ಸಿ.ಇ.ಓ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ಇಂದು ಅವರ ಕಾರ್ಯ ವ್ಯಾಪ್ತಿಯ ಹಳ್ಳಿಗಳಲ್ಲಿನ ಎಸ್.ಎಸ್.ಎಲ್.ಸಿಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಕರೆಸಿ ಒಳ್ಳೆಯ ಮಾರ್ಗದರ್ಶನ ಕೊಡಿಸಿದ್ದಾರೆ ಎಂದು ಸಾಗರ ಶಿವಕ್ಕಣ್ಣವರ ಹೇಳಿದರು. ಈ ಸಮಯದಲ್ಲಿ ಸೀತವ್ವ ಜೋಡಟ್ಟಿ. ಕಾಳಿಕಾ ಬಡಿಗೇರ್. ಸಬೇರಾ ಶೇಕ್. ಬಾಹುಸಾಹೇಬ ಸಾಮನೆ. ಅನಿಲ್ ಈರಗಾರ್. ಹಣಮಂತ ಮಾಂಗ್. ಮಾರುತಿ ಮಗದುಮ್ಮ. ಮಹೇಶ್ ಮಾಳಿ ಇನ್ನೂ ಮುಂತಾದ ಸಿಬ್ಬಂದಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು ಎಂದು ಸಾಗರ ಶಿವಕ್ಕಣ್ಣವರ್ ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ.ಆರ್.ತೆಳಗಡೆ.ರಾಯಬಾಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button