ಬಾಗಲಕೋಟೆಯಲ್ಲಿ ಜೂನ್ 09.ರಂದು ಬಿ.ಕೃಷ್ಣಪ್ಪರವರ ಪ್ರತಿಮೆ ಅನಾವರಣ.

ಬಾಗಲಕೋಟೆ ಜೂನ್.06

ಬಿ ಕೃಷ್ಣಪ್ಪನವರ 86 ನೇ. ಜನ್ಮ ದಿನಾಚರಣೆಯ ಪ್ರಯುಕ್ತ ದಿನಾಂಕ 09.06.2024 ರಂದು ಬಾಗಲಕೋಟೆ ಜಿಲ್ಲೆಯ ಎ ಪಿ ಎಂ ಸಿ ಹತ್ತಿರ ಬುದ್ಧ ಭೂಮಿಯಲ್ಲಿ ಬಿ ಕೃಷ್ಣಪ್ಪನವರ ಪ್ರತಿಮೆಯ ಅನಾವರಣವನ್ನು ರಾಜ್ಯ ಮಟ್ಟದ ಕಾರ್ಯಕ್ರಮವನ್ನಾಗಿ ಮಾಡುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನಾ ಸಂಚಾಲಕರಾದ ಪಡಿಯಪ್ಪ ಕಳ್ಳಿಮನಿ ಅವರು ಮಾತನಾಡಿ ದಲಿತ ಸಮುದಾಯಗಳ ಮೇಲೆ ಶೋಷಣೆ, ಹಿಂಸೆ, ದಬ್ಬಾಳಿಕೆ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ, ತನು ಮನ ಧನ ಧಾರೆಯೆರೆದು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿ ಅವರ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಬಿ ಕೃಷ್ಣಪ್ಪನವರು, ಇಂಥ ಮಹಾನ್ ವ್ಯಕ್ತಿಯ ಪ್ರತಿಮೆಯ ಅನಾವರಣಕ್ಕೆ ರಾಜ್ಯದ ಹಳ್ಳಿ ಹಳ್ಳಿಗಳಿಂದಲೂ ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದರು. ಮುಖಂಡರಾದ ಸಿದ್ದು ಮಾದರ ರವಿ ಕಾಂಬಳೆ ಮಹೇಶ್ ಮಾದರ ಆನಂದ ಪೂಜಾರಿ ಹಣಮಂತ ಮನ್ನಿಕೇರಿ ರಂಗನಾಥ ಗುಡಿಮನಿ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.

ಸುದ್ದಿ ಸಂಗ್ರಹ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button