ಶ್ರೀ ಮಹಿಬೂಬ ಸುಬಹಾನಿ ಜಾತ್ರಾ ಮಹೋತ್ಸವವು – ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಆಚರಣೆ.
ಗುಂಡಕರ್ಜಗಿ ಸೆ.19

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ 22 ರಿಂದ 24 ರ ವರೆಗೆ ಭಕ್ತಿ ಭಾವದಿಂದ ಅದ್ದೂರಿಯಾಗಿ ಜರಗುತ್ತದೆ, ಈ ಜಾತ್ರೆಯಲ್ಲಿ ಅನುಷ್ಠಾನ ಮೂರ್ತಿ, ಪವಾಡ ಪುರುಷರಾದ ಪೂಜ್ಯ ಶಂಕರಲಿಂಗ ಶ್ರೀಗಳವರ ಆಶೀರ್ವಾದದಲ್ಲಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಆಯೋಜಿಸಲಾಗಿದೆ ಎಂದು ಜಾತ್ರಾ ಸಮಿತಿ ಪ್ರಕಟಿಸಿದೆ.
ಕಾರ್ಯಕ್ರಮದ ವಿವರಗಳು 22-09-2026 (ಮಂಗಳವಾರ) ರಾತ್ರಿ 10:00 ಗಂಟೆಗೆ ಶ್ರೀ ಮಹಿಬೂಬ ಸುಬಹಾನಿ ದೇವರಿಗೆ ಕುದುರೆಯ ಮೆರವಣಿಗೆಯೊಂದಿಗೆ ಹಾಗೂ ಹರಿಂದ್ರಾಳ ಗ್ರಾಮದ ಹಲಿಗೆ ಮಜಲಿನೊಂದಿಗೆ ಗಂಧ ಒಯ್ಯುವದು ನಂತರ ಗ್ರಾಮದ ಸಮಸ್ತ ದೈವ ಮಂಡಳಿಯಿಂದ ಗಂಧ ಏರುವುದು ಮತ್ತು ಮದ್ದು ಸುಡುವುದು.ಅಂದೇ ರಾತ್ರಿ 10 :00 ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶಿವ ಭಜನೆಗಳು.
23-9-2026 (ಬುಧವಾರ) ಬೆಳಿಗ್ಗೆ 6 :00 ಗಂಟೆಗೆ ಶ್ರೀ ಕಾಶಿಲಿಂಗೇಶ್ವರ ಅಭಿಷೇಕ.ನಂತರ ಮಹಿಬುಬ ಸುಬಹಾನಿ ಉರುಸು,
ಮುಂಜಾನೆ 10:00 ಗಂಟೆಗೆ ರಾಜ್ಯಮಟ್ಟದ ತೇರಬಂಡಿ ಸ್ಪರ್ಧೆ
ಸೂಚನೆ:-
(ಡಾಂಬರ ರಸ್ತೆಯಲ್ಲಿ) ಸಂಜೆ 6:00 ಗಂಟೆಗೆ ಬಂದ್ ಮಾಡಲಾಗುತ್ತದೆ.
ತೇರಬಂಡಿ ಸ್ಪರ್ಧೆಗೆ ದಿ!! 22-9-2026 ರಾತ್ರಿ 8:00 ಗಂಟೆಗೆ ಲಾಟ್ ಮಾಡಲಾಗುವುದು ಫೋನ್ ಪೇ ನ0, 9113242806, 9380006172
1 ನೇ. ಬಹುಮಾನ: 40,001 ರೂ,
2 ನೇ. ಬಹುಮಾನ: 30,001 ರೂ,
3 ನೇ. ಬಹುಮಾನ 20,001 ರೂ,
4 ನೇ. ಬಹುಮಾನ 15,001 ರೂ,
5 ನೇ. ಬಹುಮಾನ 10,001 ರೂ,
6 ನೇ. ಬಹುಮಾನ 8,001 ರೂ,
7 ನೇ. ಬಹುಮಾನ 7,001 ರೂ,
8 ನೇ. ಬಹುಮಾನ 5,001 ರೂ,
9 ನೇ. ಬಹುಮಾನ 3,001 ರೂ,
10 ನೇ. ಬಹುಮಾನ 2,501 ರೂ,
ಈ ತರ ಬಹುಮಾನಗಳು ಇರುತ್ತವೆ.
ಅಂದೇ ರಾತ್ರಿ 08:00 ಗಂಟೆಗೆ ಶ್ರೀ ಶಂಕರಲಿಂಗ ಶ್ರೀಗಳಿಂದ ವಿಶೇಷ ಸನ್ಮಾನ:-

ಶ್ರೀ ರಾಮನಗೌಡ, ಎಂ, ಸಂಕನಾಳ PSI ನಿಂದ CPI ವೃತ್ತಿಗೆ ಬಡ್ತಿ ಹೊಂದಿದ್ದಾರೆ (CPI, ಸಾಹೇಬ್ರು ಧಾರವಾಡ ಇವರಿಗೆ) ಮತ್ತು ಶಿವನಗೌಡ,ದ್ಯಾ, ಪಾಟೀಲ್ (ನಿವೃತ್ತ ಶಿಕ್ಷಕರು)ಇವರಿಗೆ ನಂತರ ದಾನಿಗಳಿಗೆ ಸನ್ಮಾನ ಸಮಾರಂಭ.
ರಾತ್ರಿ 9:30 ಗಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘ ಬಂಡಿಗಣಿ ತಾ!! ರಬಕವಿ ಇವರಿಂದ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಮಹಾತ್ಮೆ “ಅರ್ಥಾತ್” (ಕಲಿಯುಗದ ಕಾಮಧೇನು) ಎಂಬ ಪೌರಾಣಿಕ ನಾಟಕ ಜರುಗುತ್ತದೆ.
24-9-2026 (ಗುರುವಾರ) ಬೆಳಿಗ್ಗೆ 8-00 ಗಂಟೆಗೆ ಸಾಧು ಮಹಾರಾಜರಿಗೆ ಬಟ್ಟೆ ವಿತರಣೆ,
ಸೇವೆ:-
ಶ್ರೀ ಶಿವಸಿದ್ದಪ್ಪಗೌಡ,ಗು, ಬಿರಾದಾರ ಸಾ!! ಗುಂಡಕರ್ಜಗಿ ಇವರಿಂದ,
ಮುಂಜಾನೆ 10 :00 ಗಂಟೆಗೆ ಒಂದು ಎತ್ತು, ಒಂದು ಕುದುರೆ, ಗಾಡಿ ರೇಸ್ ( ಡಾಂಬರ್ ರಸ್ತೆಯಲ್ಲಿ ) “ಅವಧಿ ಎರಡು ನಿಮಿಷ”
1 ನೇ. ಬಹುಮಾನ 15,001 ರೂ,
2 ನೇ. ಬಹುಮಾನ 10,001 ರೂ,
3 ನೇ. ಬಹುಮಾನ 7,001 ರೂ,
4 ನೇ. ಬಹುಮಾನ 5,001 ರೂ,
5 ನೇ. ಬಹುಮಾನ 3,001 ರೂ,
6 ನೇ. ಬಹುಮಾನ 2,001 ರೂ,
ಇತರೆ ಬಹುಮಾನಗಳು ಇರುತ್ತವೆ. ಜಾತ್ರೆಯ ಅಂಗವಾಗಿ ಪ್ರತಿದಿನ “ಅನ್ನಸಂತರ್ಪಣೆ” ಇರುತ್ತದೆ.
ಯಾವತ್ತು ಸದ್ಭಕ್ತರು ಆಗಮಿಸಿ ಶ್ರೀ ಮಹಿಬೂಬ ಸುಬಹಾನಿ ಕೃಪೆಗೆ ಪಾತ್ರರಾಗಿ ಎಂದು ಜಾತ್ರಾ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು:- 7760606871-9632970304 ಕೋರಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ
