ಬ್ರೇಕಿಂಗ್ ನ್ಯೂಸ್🚨⚡⚡ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅಧಿಕಾರ ಸ್ವೀಕಾರ / ನೇಮಕ – ಪಕ್ಷದ ವಲಯದಲ್ಲಿ ಹರ್ಷೋದ್ಗಾರ..!⚡
ಉಡುಪಿ ಸೆ.19

🔴 ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಮುಖ ಮುಖಂಡರಾದ ಶ್ರೀ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರು ಅಧಿಕಾರಕ್ಕೆ ನೇಮಕ ಗೊಂಡಿದ್ದು, ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಂದ ವ್ಯಾಪಕ ಮೆಚ್ಚುಗೆ ಹಾಗೂ ಹಾರ್ದಿಕ ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.
⚡ ಪ್ರಮುಖ ಮುಖ್ಯಾಂಶಗಳು:-
ನೂತನ ಸಾರಥಿ:-
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಚುಕ್ಕಾಣಿಯನ್ನು ಶ್ರೀ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರು ವಹಿಸಿ ಕೊಂಡಿದ್ದಾರೆ.
ಅಭಿನಂದನಾ ಮಹಾಪೂರ:-
ನೂತನ ಅಧ್ಯಕ್ಷರ ನೇಮಕದಿಂದ ಪಕ್ಷದ ಸಂಘಟನೆಯು ತಳಮಟ್ಟದಿಂದ ಮತ್ತಷ್ಟು ಬಲಗೊಳ್ಳಲಿದೆ ಎಂದು ಹಿರಿಯ ಮುಖಂಡರು ಮತ್ತು ಸ್ಥಳೀಯ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದ ಸಂಘಟನೆಗೆ ಒತ್ತು:-
ಅಧಿಕಾರಾವಧಿಯಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಲು ಮತ್ತು ತಳ ಮಟ್ಟದಿಂದ ಜನಪರ ಹೋರಾಟಗಳನ್ನು ತಲುಪಿಸಲು ಹಾರೈಸಿ, ಹಿತೈಷಿಗಳು ಹಾಗೂ ಗಣ್ಯರು ಬೃಹತ್ ಅಭಿನಂದನಾ ಪೋಸ್ಟರ್ಗಳು ಹಾಗೂ ಬ್ಯಾನರ್ಗಳ ಮೂಲಕ ತಮ್ಮ ಶುಭ ಹಾರೈಕೆಗಳನ್ನು ವಿನಿಮಯ ಮಾಡಿ ಕೊಳ್ಳುತ್ತಿದ್ದಾರೆ.
⚡ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ:-
ಜಿಲ್ಲಾ ಕಾಂಗ್ರೆಸ್ನಲ್ಲಿ ಹೊಸ ನಾಯಕತ್ವದ ಉದಯ ವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳು ಇನ್ನಷ್ಟು ಚುರುಕು ಗೊಳ್ಳುವ ನಿರೀಕ್ಷೆಯಿದೆ. ನೂತನ ಅಧ್ಯಕ್ಷರ ನೇಮಕಕ್ಕೆ ವಿವಿಧ ಗಣ್ಯರು ಹಾಗೂ ಸ್ಥಳೀಯ ಪ್ರಮುಖರುಗಳು ಸಾಥ್ ನೀಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

