ಕಪ್ಪತ್ತಗಿರಿ ಸಾಹಿತ್ಯ ಸಾಸ್ಕೃತಿಕ ಕಲಾ ವೇದಿಕೆಯು ಮುತ್ತು.ಯ.ವಡ್ಡರ (ಶಿಕ್ಷಕರು) ರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆಗೆ ಅಭಿನಂದಿಸಿ. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಮತ್ತು SK ನ್ಯೂಸ್ ಚಾನಲ್ ಸದಾ ಹಾರೈಸುತ್ತದೆ.
ಹಿರೇಮಾಗಿ ಜುಲೈ.19

ಕಪ್ಪತ್ತಗಿರಿ ಸಾಹಿತ್ಯ ಸಾಂಸ್ಕೃತಿಕ ಕಲಾವೇದಿಕೆಯ ರಾಜ್ಯ ಘಟಕ ಗದಗ, ಬಾಗಲಕೋಟೆ ಜಿಲ್ಲೆಯ *ಜಿಲ್ಲಾ ಅಧ್ಯಕ್ಷರನ್ನಾಗಿ* ಹುನಗುಂದ ತಾಲೂಕಿನ ಹಿರೇಮಾಗಿಯ *ಶ್ರೀ ಮುತ್ತು.ಯ. ವಡ್ಡರ ( ಶಿಕ್ಷಕರು)* ಇವರನ್ನು ಆಯ್ಕೆ ಮಾಡಲಾಗಿದೆ. ಕ್ರಿಯಾಶೀಲ ಬರಹಗಾರರು, ಕವಿಗಳು ಹಾಗೂ ಸಾಹಿತ್ಯದಲ್ಲಿ ಅನುಪಮ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಕಪ್ಪತಗಿರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಎಂ ಇಟಗಿಮಠ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶಿಕ್ಷಕರಾದ ಶ್ರೀ ಮುತ್ತು ವಡ್ಡರ ಇವರು ಪ್ರತಿನಿತ್ಯ ಹಲವು ಕವನಗಳನ್ನು ಬರೆದು ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದಾರೆ.

ಇದರ ಜೊತೆಗೆ ಹಲವು ಸಾಹಿತ್ಯ ವೇದಿಕೆಗಳಲ್ಲಿ ಕವನ ಸ್ಪರ್ಧೆಯಲ್ಲಿ ಭಾಗವಹಿಸುವುದರ ಜೊತೆಗೆ ಸುಮಾರು ಅಭಿನಂದನಾ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಹಲವಾರು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದ ಇವರು ಪ್ರಸ್ತುತ ಕವಿವಾಣಿ ಸಾಹಿತ್ಯ ವೇದಿಕೆಯ ಸಂಚಾಲಕರಾಗಿ. ಕರುನಾಡ ಹಣತೆ ಕವಿ ಬಳಗದ ಪ್ರಧಾನ ಕಾರ್ಯದರ್ಶಿಯಾಗಿ. ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮನ್ನು ತಾವು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ನಿರಂತರ ಅವಿರತ ಶ್ರಮಕ್ಕೆ ಸಂಧ ಪ್ರತಿಫಲ ಇವರ ಸೇವೆ ನಿತ್ಯ ನಿರಂತವಾಗಿ ಮುಂದುವರಿಯುತ್ತಾ ನಾಡಿನೂದ್ದಕ್ಕೂ ಆಲದ ಮರದಂತೆ ಪಸರಿಸಲಿ ಅಂತಾ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಮತ್ತು SK ನ್ಯೂಸ್ ಚಾನಲ್ ಸದಾ ಅಭಿನಂದಿಸಿ. ಹಾರೈಸುತ್ತದೆ.