ಮುಂಬಡ್ತಿ ನೂತನ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ.

ಇಂಡಿ ಫೆಬ್ರುವರಿ.7

ತಾಲೂಕಿನ ನಾದ ಕೆಡಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ನಾದ ಕೆಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದು ನೂತನವಾಗಿ ಮುಂಬಡ್ತಿ ಹೊಂದಿರುವ ಅಂಗನವಾಡಿ ಕಾಯ೯ಕತೆ೯ಯರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಜರುಗಿತು. ಹಲವಾರು ವಷ೯ಗಳಿಂದ ನಾದ ಬಿಕೆ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ -01 ರಲ್ಲಿ ಶ್ರೀ ಮತಿ ಅನಿತಾ ರಾಮು ಮೇಕೇರಿ ಹಾಗೂ ನಾದ ಕೆಡಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ -01 ರಲ್ಲಿ ಇಂದ್ರಾಬಾಯಿ ರಾವುತಪ್ಪ ಹಿಪ್ಪರಗಿ ಇವರು ಅಂಗನವಾಡಿ ಸಹಾಯಕಿಯರಾಗಿ ಕಾಯ೯ ನಿವ೯ಹಿಸುತ್ತಿದ್ದರು.ಸದರಿಯವರನ್ನು ಸರ್ಕಾರದ ನೇಮಕಾತಿ ಆದೇಶದ ನಿಯಮದಂತೆ ಶ್ರೀ ಮತಿ ಅನಿತಾ ರಾಮು ಮೇಕೇರಿ ಇವರನ್ನು ನಾದ ಬಿಕೆ-01 ಅಂಗನವಾಡಿ ಕೇಂದ್ರದಿಂದ ನಾದ ಬಿಕೆ 02 ಅಂಗನವಾಡಿ ಕೇಂದ್ರಕ್ಕೆ ಕಾಯ೯ಕತೆ೯ ಅಂತ ಮತ್ತು ನಾದ ಕೆಡಿ ಅಂಗನವಾಡಿ ಕೇಂದ್ರ ಸಂ-01 ರ ಇಂದ್ರಾಬಾಯಿ ರಾವುತಪ್ಪ ಹಿಪ್ಪರಗಿ ಇವರನ್ನು ಅಂಗನವಾಡಿ ಕೇಂದ್ರ ಸಂಖ್ಯೆ -03 ಗೆ ಕಾಯ೯ಕತೆ೯ಅಂತ ಮುಂಬಡ್ತಿ ಹೊಂದಿದ ನಿಮಿತ್ಯವಾಗಿ ಇಂದು ಸದರಿಯವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ನಾದ ವಲಯದ ಮೇಲ್ವಿಚಾರಕೀಯರಾದ ಶ್ರೀಮತಿ ನಂದಾ ಕಾಂಬಳೆ. ಕಾಯ೯ಕತೆ೯ಯರಾದ-ಶ್ರೀಮತಿ ರೋಜಾಬಿ ಮುಲ್ಲಾ.ಶ್ರೀಮತಿ ಸಫೀಯಾ ಮುಲ್ಲಾ.ಸಹಾಯಕೀಯರಾದ ಶ್ರೀಮತಿ ಭಾರತಿ ಬಡಿಗೇರ.ಆಶಾ ಕಾಯ೯ಕತೆ೯ಯರಾದ ಶ್ರೀಮತಿ ಶಕುಂತಲಾ ಮಾದರ.ಶಾಲಾ ಶಿಕ್ಷಕಿಯರು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button