ಕಾನೂನು ಕಾಪಾಡಿ, ಸುಳ್ಳು ಕೇಸ್ ದಾಖಲಿಸುವುದು ಕೈ ಬಿಡಿ – ಜೆ.ಡಿ.ಎಸ್ ಆರ್ ಪಿ ಆಯ್ ಮುಖಂಡರಿಂದ ಸಿಬಿಐಗೆ ಮನವಿ ಸಲ್ಲಿಕೆ.
ಇಂಡಿ ಫೆಬ್ರುವರಿ.7

ಕಾನೂನು ಕಾಪಾಡಿ, ಸುಳ್ಳು ಕೇಸ್ ದಾಖಲಿಸುವುದು ಕೈ ಬಿಡಿ.-ಜೆಡಿಎಸ್,ಆರ್ ಪಿಆಯ್.ಮುಖಂಡರಿಂದ ಸಿಬಿಐಗೆ ಮನವಿ ಸಲ್ಲಿಕೆ.ಇಂಡಿ-ಜೆಡಿಎಸ್ ಹಾಗೂ ಆರ್ ಪಿ ಐ ಕಾಯ೯ಕತ೯ರ ಮೇಲೆ ಪೊಲೀಸ್ ಅಧಿಕಾರಿಗಳು ಉದ್ದೇಶಪೂವ೯ಕವಾಗಿ ಕೇಸ್ ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಆರ್ ಪಿ ಐ ತಾಲೂಕಾ ಅಧ್ಯಕ್ಷ ನಾಗೇಶ ತಳಕೇರಿ ಹಾಗೂ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಅವರು ಇಂಡಿ ಶಹರ ಪೊಲೀಸ್ ಠಾಣೆ ಸಿಪಿಐ ಜಿರಗಾಳ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಆರ್ ಪಿ ಐ ತಾಲೂಕಾ ಅಧ್ಯಕ್ಷ ನಾಗೇಶ ತಳಕೇರಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಮಾತನಾಡಿ ತಾಲೂಕಿನಲ್ಲಿ ಜೆಡಿಎಸ್, ಆರ್ ಪಿ ಐ ಕಾಯ೯ಕತ೯ರನ್ನು ಮತ್ತು ಹಿಂದುಳಿದ, ದಲಿತ, ಅಲ್ಪಸಂಖ್ಯಾತರ,ಮೇಲೆ ಸುಳ್ಳು ಕೇಸ್ ದಾಖಲಿಸುತ್ತಿದ್ದು ಕೂಡಲೇ ಅದನ್ನು ಕೈ ಬಿಡಬೇಕು.ಸುಳ್ಳು ಕೇಸ್ ದಾಖಲಿಸಿದ ವ್ಯಕ್ತಿಯ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು.ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಭಯದಲ್ಲಿ ಇದ್ದಾರೆ.ದಲಿತ ಅಲ್ಪಸಂಖ್ಯಾತರ, ಹಿಂದುಳಿದ ಜನಾಂಗ ಆರ್ಥಿಕವಾಗಿ ಬಡವರಾಗಿದ್ದು , ಪ್ರತಿನಿತ್ಯ ದುಡಿದರೆ ಕುಟುಂಬ ನಿವ೯ಹಣೆ ಸಾಧ್ಯ.ಹೀಗಾಗಿ ಯಾವುದೇ ಕೆಲಸ ಕಾರ್ಯಗಳಿಗೆ ಹೊರಗೆ ಹೋದರೂ ಸಂಶಯದ ಮೇಲೆ ಅವರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತಿರುವುದು ಕಂಡು ಬಂದಿದೆ.ಇದೇ ರೀತಿ ಪೊಲೀಸ್ ವತ೯ನೆ ಕಂಡುಬಂದರೆ ಸಂಬಂಧಿಸಿದ ಪೊಲೀಸ್ ಠಾಣೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ.ಅನಿಲಗೌಡ ಬಿರಾದಾರ.ನಾಗೇಶ ತಳಕೇರಿ.ದೇವೇಂದ್ರ ಕುಂಬಾರ.ಜಬ್ಬರ ಅರಬ್.ರಾಮಚಂದ್ರ ಕಾಂಬಳೆ.ವಿರೂಪಾಕ್ಷಿ ಕಾಳೆ.ಇಸ್ಮಾಯಿಲ್ ಅರಬ.ಸಿದ್ಧು ಡಂಗಾ.ಅಯೂಬ್ ನಾಟಿಕಾರ.ಬಾಬು ಜಮಾದಾರ.ಬಾಬು ಕಾಂಬಳೆ.ರಿಯಾಜ್ ಅಗರಖೇಡ.ಸಿದ್ಧೀಕ ಅರಬ್.ಮರೇಪ್ಪ ಹರಿಜನ.ದುಂಡು ಬಿರಾದಾರ.ನಿಯಾಜ್ ಅಗರಖೇಡ.ಆಕಾಶ ಮೇಲಿನಕೇರಿ.ಗೌತಮ ಕಾಳೆ.ಇತರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ