ಮೇ 14 ರಂದು ಸ್ವಯಂ ಪ್ರೇರಣೆಯಿಂದ ಸಾಮೂಹಿಕ ಮತಾಂತರ ಕಾರ್ಯಕ್ರಮ …..

ವಿಭೂತಿ ಹಳ್ಳಿ (ಮೇ.5) :

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ವಿಭೂತಿ ಹಳ್ಳಿ ಗ್ರಾಮದ ಕೆಲವು ಕುಟುಂಬಗಳು ಡಾ . ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವದಡಿ ನಾನು ಹಿಂದೂ ಆಗಿ ಹುಟ್ಟಿದ್ದೇನೆ ನಿಜ, ಆದರೆ ನಾನು ಹಿಂದೂ ಆಗಿ ಸಾಯಲಾರೆ ಅಂತ ಪ್ರತಿಜ್ಞೆಯನ್ನು ಮಾಡಿ ಬೋಧಿ ಸತ್ವ ಪರಮ ಪೂಜ್ಯ. ಡಾ|| ಬಾಬಾಸಾಹೇಬ ಅಂಬೇಡ್ಕರ ಅವರು 1956 ನೇ ವರ್ಷದಲ್ಲಿ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದುಕೊಂಡರು .

ನೀವು ಕೂಡ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದು ಬೌದ್ಧರಾಗಬೇಕು ಅಂತ ಬಾಬಾಸಾಹೇಬರ ಕನಸಿನಂತೆ ವಿಭೂತಿಹಳ್ಳಿಯಲ್ಲಿ ಕೆಲವು ಕುಟುಂಬಗಳು ರವಿವಾರ ದಿನಾಂಕ : 14-05-2023 ರಂದು ಬೆಳಿಗ್ಗೆ 11: 00 ಘಂಟೆಗೆ ಹಿಂದೂ ಧರ್ಮವನ್ನು ತೇಜಿಸಿ ಬೌದ್ಧ ಧಮ್ಮವನ್ನು ಸ್ವೀಕರಿಸಲಿದ್ದಾರೆ ಈ ದೀಕ್ಷೆ ಕಾರ್ಯಕ್ರಮವನ್ನು ನೆರೆವೇರಿಸಲು ಪೂಜ್ಯ. ಭದಂತ ನಾಗಘೋಷ ಮಾಹಾಥೆರೋ ಪುಣೆ ಮತ್ತು ಪೂಜ್ಯ. ಭದಂತ ಕಶಪ್ಪ ಮಾಹಾಥೆರೋ ಪುಣೆ ಇವರಿಂದ ದೀಕ್ಷೆಯನ್ನು ಪಡೆದುಕೊಳ್ಳಲಾಗುವದು ಆದ ಕಾರಣ ತಾವೆಲ್ಲರೂ ಸಹ ಕುಟುಂಬ – ಸಹಪರಿವಾರ ದೊಂದಿಗೆ ಆಗಮಿಸಿ ನಮ್ಮ ಹೊಸ ಜೀವನಕ್ಕೆ ಆಶೀರ್ವಾದ ಮಾಡಬೇಕೆಂದು ದಲಿತ ಮುಖಂಡರಾದ ಸಂತೋಷ ಸಿಂಗೆ ಅವರು ಸಾವ೯ಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.ಮೊ.9901559257.

ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button