ಪ್ರತಿಮಾ ಹಾಸನ್ ಗೆ ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ.
ಹಾಸನ ಜನೇವರಿ.2

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಮೈಸೂರು. ಮತ್ತು ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್, ಸಂಯುಕ್ತ ಆಶ್ರಯದಲ್ಲಿ ನಡೆಯಿತು . ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಆಚರಣೆ. ಮತ್ತು ಕವಿ ಗೋಷ್ಠಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು , ವಿಜಯನಗರ ಒಂದನೇ ಹಂತ ಇಲ್ಲಿ ಏರ್ಪಡಿಸಿದ್ದರು .31:12:2023 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೊಡ ಮಾಡಲಾದ ಕುವೆಂಪು ವಿಶ್ವ ಮಾನವ ಕನ್ನಡ ರಾಜ್ಯ ಪ್ರಶಸ್ತಿಗೆಯನ್ನು ಹಾಸನ ನಗರದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮತ್ತು ಕವನ ವಾಚನಕ್ಕೂ ಸನ್ಮಾನಿಸಿ ಗೌರವಿಸಲಾಯಿತು. ಇವರು ಶಿಕ್ಷಕಿಯಾಗಿದ್ದು, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿದ್ದು.

ವಿವಿಧ ಕ್ಷೇತ್ರದ ಸಂಘ ಸಂಸ್ಥೆಗಳ ಮಹಿಳಾ ಜಿಲ್ಲಾಧ್ಯಕ್ಷರು ಆಗಿ, ರಾಜ್ಯ ಮಟ್ಟದ ಪದಾಧಿಕಾರಿಗಳು ಆಗಿ ಹಲವಾರು ಸಂಸ್ಥೆಯ ಕಾರ್ಯಕರ್ತೆಯಾಗಿ ,ಇನ್ನೂ ಹಲವು ಸಂಸ್ಥೆ ಗಳ ಸದಸ್ಯರು ಆದ ಇವರು ಬಹುಮುಖ ಪ್ರತಿಭೆಯಾಗಿ , ಸದಾ ಕ್ರಿಯಾಶೀಲರಾದ ಶ್ರೀಮತಿ ಹೆಚ್, ಎಸ್, ಪ್ರತಿಮಾ ಹಾಸನ್ ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರ್ ಇಲ್ಲಿ ” ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ “ನೀಡಿ ಸನ್ಮಾನಿಸಲಾಯಿತು . ಪ್ರಶಸ್ತಿಯನ್ನು ಇವರ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಇವರ ಎಲ್ಲಾ ಕ್ಷೇತ್ರದ ಕಾರ್ಯದ ಕ್ರಿಯಾಶೀಲತೆಯನ್ನು ಗಮನಿಸಿ ಮತ್ತು , ಪತ್ರಕರ್ತೆಯಾಗಿ , ಅಂಕಣಗಾರ್ತಿಯಾಗಿ, ಸಾಮಾಜಿಕ ಚಿಂತಕಿಯಾಗಿ, ತನ್ನದೇ ಆದಂತಹ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗಮನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜಕರಾದಂತಹ ಶಿವಕುಮಾರ್, ಡಾ. ಸಿಪಿ ಕೃಷ್ಣಕುಮಾರ್, ಕುವೆಂಪು ವಿಶ್ವ ವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದೇಗೌಡ, ಸತೀಶ್ ಜವರೇಗೌಡ. ತ್ಯಾಗರಾಜು. ಇನ್ನೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.