ಸಂವಿಧಾನ ಸಮ್ಮಾನ ಅಭಿಯಾನ ಅರಿವು ಮೂಡಿಸುವ ಕಾರ್ಯ – ಶ್ಲಾಘನೀಯ ಚರಂತಿಮಠ.
ಬಾಗಲಕೋಟೆ ಡಿ.06

ಬಾಬಾ ಸಾಹೇಬ ಡಾ, ಬಿ.ಆರ್ ಅಂಬೇಡ್ಕರ್ ರವರ 68.ನೇ ಪರಿನಿರ್ವಾಣ ನಿಮಿತ್ಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಘಟಕ ದಿಂದ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಂವಿಧಾನ ಸಮ್ಮಾನ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಡಾ, ವೀರಣ್ಣ ಚರಂತಿಮಠ ಇವರು ನವೆಂಬರ್ 26,1949 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಅಂಗೀಕಾರವಾದ ದಿನ, 2015 ರಿಂದ ಈಚೆಗೆ ಆ ದಿನವನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಆ ದಿನವನ್ನು ಸಂವಿಧಾನ ದಿನ ವೆಂದು ಘೋಷಣೆ ಮಾಡಿ ಆಚರಣೆಗೆ ತಂದು ಸಂವಿಧಾನವೇ ನಮ್ಮ ಆಡಳಿತ ವ್ಯವಸ್ಥೆಯ ಧರ್ಮ ಗ್ರಂಥ ಎಂದು ಗೌರವಿಸಿದರು. ನಾವೇ ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿ ಕೊಳ್ಳುವ ಕಾಂಗ್ರೆಸ್ ಪಕ್ಷ ಸ್ವತಂತ್ರ ಪೂರ್ವದಲ್ಲಿ ಮತ್ತು ಸ್ವತಂತ್ರ ನಂತರ ಸಂವಿಧಾನ ವಿರೋಧಿಯಾಗಿ, ಪ್ರಜಾಪ್ರಭುತ್ವದ ವಿರೋಧಿಯಾಗಿ ಹೇಗೆ ಕೆಲಸ ಮಾಡಿದೆ ಎಂಬ ಸತ್ಯ ಸಂಗತಿಗಳನ್ನು ಜನರ ಮುಂದೆ ತರುವ ಕೆಲಸವನು ಈ ಅಭಿಯಾನ ಮಾಡಲಿದೆ, ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ಮತ್ತು ಇತರ ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಂಯೋಗದಲ್ಲಿ ರಾಜ್ಯದಾದ್ಯಂತ ನವೆಂಬರ್ 26 ರಿಂದ ಆರಂಭ ಗೊಂಡ ಸಂವಿಧಾನ ಸಮ್ಮಾನ್ ಅಭಿಯಾನವು ಜನೆವರಿ 26 ರ ವರೆಗೆ ಎರಡು ತಿಂಗಳ ಕಾಲ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಡೆಯುತ್ತಿರುವ ಈ ಅಭಿಯಾನಕ್ಕೆ ಎಲ್ಲಾರು ಸಹಕಾರ ಅಗತ್ಯವಾಗಿದೆ ಎಂದರು. ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷರು ಶಾಂತಗೌಡ ಪಾಟೀಲ್ ಮಾತನಾಡಿ ನರೇಂದ್ರ ಮೋದಿಯವರ ಇಚ್ಛೆಯಂತೆ ಈ ಎರಡು ತಿಂಗಳ ಕಾಲ ಭಾರತೀಯ ಜನತಾ ಪಕ್ಷ ಸಂವಿಧಾನ ಸಮ್ಮಾನ್ ಅಭಿಯಾನವನ್ನು ಮಾಡಲಿದ್ದು ಜಿಲ್ಲಾಕೇಂದ್ರ, ತಾಲ್ಲೂಕ ಕೇಂದ್ರ, ನಗರಸಭೆ, ಪುರಸಭೆ, ವ್ಯಾಪ್ತಿಯಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಲಾ ಕಾಲೇಜುಗಳಲ್ಲಿಯೂ ಸಂವಿಧಾನ ಅರಿವು ಮೂಡಿಸುವ ಮುಲಕ ಜಾಗೃತಿ ಹಮ್ಮಿಕೊಂಡು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಸಂವಿಧಾನ ಸಮ್ಮಾನ್ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಜಗದೀಶ್ ಹಿರೇಮನಿ ಮಾತನಾಡಿ ಕೇಂದ್ರದ ಬಿ.ಜೆ.ಪಿ ಆಡಳಿತದಲ್ಲಿ ಸಂವಿಧಾನ ಭದ್ರವಾಗಿದೆ, ಸುರಕ್ಷಿತವಾಗಿದೆ ಮತ್ತು ಸುರಕ್ಷೀತವಾದವರ ಕೈಯಲ್ಲಿ ಸಂವಿಧಾನವಿದೆ ಆ ಸಂವಿಧಾನವನ್ನು ಸಂರಕ್ಷಣೆ ಮಾಡುತ್ತೇವೆ ಎಂಬ ಸಂಕಲ್ಪವನ್ನು ಈ ಅಭಿಯಾನದ ಮೂಲಕ ಅರಿವು ಮೂಡಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಬಾದಾಮಿ ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಡಾ, ವಿಜಯಲಕ್ಷ್ಮಿ ತುಂಗಳ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮೆದಾ ಮಾನೆ, ನಗರ ಸಭೆ ಅಧ್ಯಕ್ಷೆ ಸವಿತಾ ಲಂಕೇನ್ನವರ ಎಸ್/ಸಿ ಮೋರ್ಚಾ ಜಿಲ್ಲಾಧ್ಯಕ್ಷರು ಮುತ್ತಣ್ಣ ಬೆಣ್ಣೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ್, ಮಲ್ಲಯ್ಯ ಮೂಗನೂರಾಮಠ, ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಟವಳಿ, ತಿಪ್ಪಣ್ಣ ಸಂಜೀವಪ್ಪಗೋಳ ಮುಂತಾದವರಿದ್ದರು. ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನ ರಕ್ಷಣೆಯ ಪ್ರಮಾಣ ಮಾಡುತ್ತಾ ಬಿ.ಜೆ.ಪಿ ಪಕ್ಷದಿಂದ ಸಂವಿಧಾನ ರಕ್ಷಣೆ ಸಾಧ್ಯವಿದೆ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಸಮಾಪ್ತಿ ಮಾಡಿದರು ಎಂದು ವರದಿಯಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನಪ್ಪ.ಸಿ.ಹಲಗಿ.ಶಿರೂರು.ಬಾಗಲಕೋಟೆ