ಕೊಟ್ಟೂರಿನಲ್ಲಿ ಕೌಟುಂಬಿಕ ಸಲಹೆ ಕೇಂದ್ರ.
ಕೊಟ್ಟೂರು ಏಪ್ರಿಲ್.28

ವಿಜಯನಗರದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಸುರಕ್ಷಾ ಅಸೋಸಿಯೇಷನ್ ಮತ್ತು ಸುಮಂಗಲಿ ಸೇವಾ ಟ್ರಸ್ಟ್ ಇದರ ವತಿಯಿಂದ ಕೌಟಿಂಬಿಕ ಸಲಹಾ ಕೇಂದ್ರವನ್ನು ಕೊಟ್ಟೂರಿನಲ್ಲಿ ಪ್ರಾರಂಭ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಕೊಟ್ಟೂರು ಪಿಎಸ್ಐ ಶ್ರೀಮತಿ ಗೀತಾಂಜಲಿ ಸಿಂಧೆ ಇವರು ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನೆಯ ನಂತರ ಕೊಟ್ಟೂರಿನ ಕೌಟುಂಬಿಕ ಪ್ರಾರಂಭ ಮಾಡಿರುವುದು ತುಂಬಾ ಸಂತೋಷದಾಯಕ ವಿಷಯ ಕೊಟ್ಟೂರಿಗೆ ಈ ವ್ಯಾಪ್ತಿಯಲ್ಲಿ ಯಾವುದೇ ಕುಟುಂಬ ಕೌನ್ಸಿಲಿಂಗ್ ನಡೆಸಲು ಇದ್ದೀದ್ದಿಲ್ಲ ಈಗ ಈ ಕೇಂದ್ರವನ್ನು ತೆರೆದಿದ್ದು ನಾಗರಿಕರಿಗೆ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ. ನಾವು ಇಂತಹ ಕೇಸ್ ಬಂದಲ್ಲಿ ನಿಮ್ಮ ಸಲಹಾ ಕೇಂದ್ರಕ್ಕೆ ಕಳುಸುತ್ತೇವೆ ಎಂದು ಮಾತನಾಡಿದರು ಎಂ ಬಸವರಾಜ್ ಇವರು ಮಾತನಾಡಿ ದಿನಗಳಲ್ಲಿ ಟೆಕ್ನೋಲಜಿ ಹೆಚ್ಚಾದಂತಲ್ಲ ಮತ್ತು ಹೆಚ್ಚಾಗುತ್ತಿದ್ದು ಒಂದು ರೀತಿಯ ಸಣ್ಣ ಸಣ್ಣ ವಿಷಯಕ್ಕೂ ಕುಟುಂಬದಲ್ಲಿ ಕಲಹಗಳು ಹೆಚ್ಚಾಗುತ್ತಿವೆ ಇಲ್ಲಿ ಕೌಟುಂಬಿಕ ಸಲಹಾ ಕೇಂದ್ರವನ್ನು ನಿಜಕ್ಕೂ ಬೆಳವಣಿಗೆ ಈ ಒಂದು ಕೌಟುಂಬಿಕ ಸಲಹಾ ಕೇಂದ್ರಕ್ಕೆ ಸಂತ್ರಸ್ತರು ಬಂದಾಗ ಹೋಗಲು ಈ ಕೇಂದ್ರ ದಾರಿ ದೀಪವಾಗಲಿದೆ ಎಂದು ಹೇಳಿದರು.

ವಿಕಾಸ ಟ್ರಸ್ಟ್ ಸಹಾಯಕ ನಿರ್ದೇಶಕರಾದ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆಗಳು ಕಂಡು ಬರುತ್ತಿದ್ದು ಇದಕ್ಕೆಲ್ಲ ಪರಿಹಾರವಾಗಿ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಬರುವ ಮಹಿಳೆಯರಿಗೆ ಅವರಿಗೆ ಸಹಾಯ ಹಸ್ತ ನೀಡಲು ಅನುಕೂಲವಾಗುತ್ತದೆ ಎಂದರು. ಹಾಗೂ ಮಹಿಳೆಯರಿಗೆ ಎಸ್ ಬಿ ಐ ಇಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನು ಮಾಡುವ ಸಲುವಾಗಿ ಸಂಸ್ಥೆ ಸದಾ ಕಟ್ಟಿ ಬದ್ಧವಾಗಿದೆ ಎಂದು ಹೇಳಿದರು. ಈ ಸಲ ಕೇಂದ್ರದ ರೂವಾರಿಗಳಾದ ನಿಂಗಮ್ಮ ಮಂಗನಹಳ್ಳಿ ಮತ್ತು ಅಂಜಿನಪ್ಪ ಇವರ ಪರಿಶ್ರಮ ದಿಂದ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕನಕಪ್ಪ ಇವರು ಹೇಳಿದರು. ನಿಂಗಮ್ಮ ಮಂಗನಹಳ್ಳಿ ಅಂಜಿನಪ್ಪ ಮಂಗನಹಳ್ಳಿ ಶ್ರೀ ಮಲ್ಲಿಕಾರ್ಜುನ ಕೊಟ್ಟೂರು ಮತ್ತು ಅನೇಕ ಮಹಿಳೆಯರು ಹಾಜರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್ ಕಾನಾ ಹೊಸಹಳ್ಳಿ.