ಕುಷ್ಠರೋಗ ಭಯ ಬೇಡ ಬಹು ಔಷಧಿ ಚಿಕಿತ್ಸಯಿಂದ ಗುಣಮುಖ ಎಸ್ ಎಸ್ ಅಂಗಡಿ.
ಗುಂಡನಪಲ್ಲೆ ನ.15

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಬೆನಕಟ್ಪಿ ಉಪಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಹುನಗುಂದ ಕುಷ್ಠರೋಗ ಮಾಹಿತಿ ಕರಪತ್ರ ಬಿಡುಗಡೆ ಮಾಡುವ ಮುಖಾಂತರ ಕುಷ್ಠರೋಗ ಅರಿವು ಜಾಗೃತಿ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಎಸ್.ಎಸ್ ಅಂಗಡಿಯವರು, ದಿನಾಂಕ 04/11/2024 ರಿಂದ 21/11/2024ರವರೆಗೆ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಸಮಗ್ರ ಗ್ರಾಮದ ಜನರ ಸಮೀಕ್ಷೆ ಪರೀಕ್ಷೆ ಸಂಶಯುತ ತದ್ದು ಮಚ್ಚೆ ಕುಷ್ಠರೋಗ ಪತ್ತೆಗಾಗಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷ ಚಿಕಿತ್ಸೆ ಉಚಿತವಾಗಿರುತ್ತದೆ. “ಕುಷ್ಠರೋಗ ಮುಕ್ತ ಭಾರತಕ್ಕಾಗಿ ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಅಂಗವಿಕಲತೆಯನ್ನು ತಡೆಯಬಹುದು,

ಎಂಬ ಘೋಷ ವಾಕ್ಯಯೊಂದಿಗೆ, ಕುಷ್ಠರೋಗ ದೇವರ ಶಾಪ, ಪಾಪದ ಫಲ ಅಲ್ಲ. “ಮೈಕೊಬ್ಯಾಕ್ಟೆರಿಯಂ ಲೇಪ್ರೆ “ಎಂಬ ರೋಗಾಣುಗಳಿಂದ ಚರ್ಮ ನರಗಳಿಗೆ ಬಾಧಿತವಾಗುವುದು ಮಾನವ ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ತಾಮ್ರ ವರ್ಣದ ತದ್ದು, ಮಚ್ಛೆ ಕಾಣಿಸುತ್ತದೆ ಯಾವುದೇ ತರಹ ನೋವು, ತುರಿಕೆ ಇರುವುದಿಲ್ಲ, ಕುಷ್ಠರೋಗ ಈಗ ಭಯ ಬೇಡ ಬಹು ಔಷಧಿಯಿಂದ ಸಂಪೂರ್ಣ ಗುಣಮುಖವಾಗುವುದು, ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಅಂಗವಿಕಲತೆಯನ್ನು ತಡೆಯಬಹುದು. ಕುಷ್ಠರೋಗಿಯನ್ನು ದೂರಿಡ ಬೇಡಿ, ಕುಷ್ಠರೋಗ ನಿರ್ಮೂಲನೆಗೆ ಕೈಜೋಡಿಸಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತ ವಾಗಿರುತ್ತದೆ ತಮ್ಮ ಮನೆಗಳಿಗೆ ಸಮೀಕ್ಷೆಗೆ ಬರುವ ಆರೋಗ್ಯ ಅಧಿಕಾರಿಗಳು, ಆಶಾ ಸ್ವಯಂ ಸೇವಕರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಿ, ಕುಷ್ಠರೋಗ ಮುಕ್ತ ಭಾರತಕ್ಕಾಗಿ ಕೈಜೋಡಿಸಲು ಮನವಿ ಮುಖಾಂತರ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ಪರ್ಶ ಕುಷ್ಠರೋಗ ನಿರ್ಮೂಲನಾ ಆರೋಗ್ಯ ಅರಿವು ಜನಜಾಗೃತಿ ಕಾರ್ಯಕ್ರಮದಲ್ಲಿ,ಶಾಲಾ ಶಿಕ್ಷಕರಾದ ಆರ್ ಬಿ ಅಂತರತಾನಿ, ಗುರು ಮಾತೆಯರಾದ ಭಾರತಿ ಗಣಿಯಾರ ಅನಿತಾ ಗದಿಗೆನ್ನವರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಿ ಆರ್ ತಳವಾರ, ಆಶಾ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕ್ರಮದ ಸಿಬ್ಬಂದಿ ಶಾಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.