ಡಿ.ಸಿ.ಮಿಲ್ ರೋಡ ತಳಗೇರಿ ಓಣಿಯಲ್ಲಿ ನಾಗರಪಂಚಮಿಯನ್ನು ವಿಜ್ರಂಭಣೆಯಿಂದ ಆಚರಿಸಿದರು.
ಗದಗ ಆಗಷ್ಟ.21
ನಗರದ ಡಿ.ಸಿ. ಮಿಲ್ ರೋಡ, ತಳಗೇರಿ ಓಣಿಯಲ್ಲಿ ನಾಗರಪಂಚಮಿಯನ್ನು ಕರ್ನಾಟಕ ಮಾದಿಗ ಸಂಘ಼ರ್ಘ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ತಳಗೇರಿ ಓಣಿಯಲ್ಲಿರುವ ಶ್ರೀ ಕೆಂಚಮ್ಮ ದೇವಸ್ಥಾನದ ಎದುರುಗಡೆ ಓಣಿಯ ಮಹಿಳೆಯರೂ ಕೂಡಿಕೊಂಡು ಮಣ್ಣಿನ ನಾಗಪ್ಪನ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ತಾಯಂದಿರು, ಅಕ್ಕಂದಿರು, ತಂಗಿಯರು, ಮಕ್ಕಳು ಮಣ್ಣಿನ ನಾಗಪ್ಪನ ಮೂರ್ತಿಗೆ ಹಾಲು ಹಾಕುವ ಮೂಲಕ ಪೂಜೆ ಸಲ್ಲಿಸಿದರು. ಈ ಮಣ್ಣಿನ ಮೂರ್ತಿಯನ್ನು ಕೋಟ್ನಿಕಲ್ ಕುಟುಂಬದವರು ಸುಮಾರು ೪೦ ವರ್ಷಗಳಿಂದ ಮಣ್ಣಿನ ನಾಗಪ್ಪನ ಮೂರ್ತಿಯನ್ನು ಮಾಡಿ ಈ ದೇವಸ್ಥಾನ ಮುಂದೆ ನಾಗರಪಂಚಮಿಯಂದು ಪ್ರತಿಷ್ಠಾಪಿಸುತ್ತಾ ಬಂದಿರುತ್ತಾರೆ. ಈ ಮೂರ್ತಿಯನ್ನು ಕೋಟ್ನಿಕಲ್ರವರ ತಮ್ಮ ಮನೆತನದಲ್ಲಿ ಎಷ್ಟೆ ತೊಂದರೆ ಇದ್ದರೂ ಸಹ ಈ ಮೂರ್ತಿಯನ್ನು ಮಾಡುತ್ತ ಈ ನಾಗದೇವರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ತಯಾರಿಸಿದ ನಾಗರಮೂರ್ತಿಗೆ ಈ ತಳಗೇರಿ ಓಣಿಯ ಎಲ್ಲಾ ಕುಟುಂಬದವರು ನಾಗರಪಂಚಮಿಯ ದಿನ ಹಾಲೆರುವ ಮೂಲಕ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಪೂಜೆಯಿಂದ ಓಣಿಯ ಕುಟುಂಬ ವರ್ಗದವರಿಗೆ ಸದಾ ಒಳ್ಳೆಯದು ಆಗಿರುತ್ತದೆ. ಡಿ. ಸಿ. ಮಿಲ್ ರೋಡ, ತಳಗೇರಿ ಓಣಿ, ಗುರು-ಹಿರಿಯರು, ತಾಯಂದಿರು, ಸಹೋದರಿಯರು, ಯುವಕರು, ಕೋಟ್ನಿಕಲ್ ಕುಟುಂಬಕ್ಕೆ ಸದಾಕಾಲ ಆರೋಗ್ಯ, ಶಾಂತಿ, ನೆಮ್ಮದಿ ಕೊಡಲೆಂದು ಹಾಗೂ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳ ಸಂಘದ ಎಲ್ಲ ಪದಾಧಿಕರಿಗಳು ಸದಸ್ಯರು ನಾಗದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಪೂಜಾ ಕಾರ್ಯಕ್ರಮದಲ್ಲಿ. ಓಣಿಯ ಹಿರಿಯರಾದ ಪ್ರಕಾಶ ಕಲ್ಮನಿ, ಕನಕಪ್ಪ ದೊಡ್ಡಮನಿ, ಪರಶುರಾಮ ತಳಗೇರಿ, ಹನಮಂತಪ್ಪ ಕಟ್ಟಿಮನಿ, ವಿರುಪಾಕ್ಷ ಪರಾಪೂರ, ವಿಜಯ ಎಂ.ಕಲ್ಮನಿ, ಅಶೋಕ ಕುಡತಿನ್ನಿ, ಯಲ್ಲವ್ವ ವಾಯ. ಪರಾಪೂರ, ನಾಗವ್ವ ಎಂ. ಗೌಡರ, ತಾರವ್ವ ದೊಡ್ಡಮನಿ, ಉಮಾಬಾಯಿ ಕಲ್ಮನಿ ಸೇರಿದಂತೆ ಓಣಿಯ ಮಹಿಳೆಯರು ಪಾಲ್ಗೊಂಡಿದ್ದರು.
ರಾಘವೇಂದ್ರ ಪರಸಪ್ಪ ಪರಾಪೂರ
ಮೊ : 9880161018