ದಾರ್ಶನಿಕರ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿ ದಾಯಕವಾಗಲಿ.
ಬೇವೂರ ಸ.06

ನಮ್ಮ ದೇಶ ಕಂಡ ಅನೇಕ ದಾರ್ಶನಿಕರ ಬದುಕು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ, ಸಿ.ಬಿ ನಂದನ್ ಹೇಳಿದರು. ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಾಲೇಜಿನಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಗುರು ಶಿಷ್ಯ ಪರಂಪರೆಯ ಬಾಂಧವ್ಯ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳ ಸಾಧನೆ, ಯಶಸ್ಸು ಗುರು ಬಳಗಕ್ಕೆ ಆನಂದ, ಸಂಭ್ರಮವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳು ಸಮಾಜದ, ತಂದೆ-ತಾಯಿಗಳ, ಶಿಕ್ಷಣ ನೀಡಿದ ವಿದ್ಯಾ ಸಂಸ್ಥೆಯ ಗುರುಗಳ ಋಣದಲ್ಲಿ ಇರುತ್ತಾರೆ. ಆ ಋಣವನ್ನು ತೀರಿಸುವ ನಿಟ್ಟಿನಲ್ಲಿ ಸಮಾಜ ಸೇವೆ, ದೇಶ ಸೇವೆ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಎಲ್ಲರೂ ಭಾಗಿ ಯಾಗಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀ ಎಸ್.ಎಸ್. ಆದಾಪೂರ ಮಾತನಾಡಿ ದೇಶಕಂಡ ಶ್ರೇಷ್ಠ ಗುರುಗಳಾದ ಡಾ, ಸರ್ವಪಳ್ಳಿ ರಾಧಾಕೃಷ್ಣನ ಅವರದ್ದು ಆಕರ್ಷಣೀಯ ವ್ಯಕ್ತಿತ್ವವಾಗಿತ್ತು.

ಗುರುಗಳು ಹಾಗೂ ಶಿಷ್ಯರ ನಡುವಿನ ಬಾಂಧವ್ಯ ಗಟ್ಟಿ ಗೊಳ್ಳಲು ಶಿಕ್ಷಕರ ದಿನಾಚರಣೆ ಮಹತ್ವದ ಸ್ಥಾನ ಹೊಂದಿದೆ. ಮಾರ್ಗದರ್ಶಿ, ಸ್ನೇಹಿತ, ತತ್ವ ಜ್ಞಾನಿಯಂತೆ ಶಿಕ್ಷಕರು ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕಾಗಿ ಕಂಡು ಬರುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಗದೀಶ ಗು. ಭೈರಮಟ್ಟಿ ವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಶ್ರೀ ಬಿ.ಬಿ. ಬೇವೂರ. ಡಾ, ಸಂಗಮೇಶ ಹಂಚಿನಾಳ, ಜಿ.ಎಸ್ ಗೌಡರ, ಡಿ.ವಾಯ್. ಬುಡ್ಡಿಯವರ, ಡಾ,ಎ.ಎಮ್.ಗೊರಚಿಕ್ಕನವರ, ನಾಗಲಿಂಗೇಶ ಬೆಣ್ಣೂರ, ಬೋಧಕೇತರ ಸಿಬ್ಬಂದಿಯವರಾದ ಆರ್.ಬಿ. ಕರಡಿಗುಡ್ಡ, ಗ್ಯಾನಪ್ಪ ಶಿರೂರ, ಶಿವು ಕಟಗಿ ಉಪಸ್ಥಿತರಿದ್ದರು. ಉಪನ್ಯಾಸಕರಿಗೆ ಮ್ಯೂಸಿಕಲ್ ಚೇರ್, ಆಶು ಭಾಷಣ ಚಟುವಟಿಕೆಗಳನ್ನು ನಡೆಸಿ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ವಿದ್ಯಾರ್ಥಿನಿ ಅಕ್ಷತಾ ಶ ಕಟ್ಟಿಮನಿ ನಿರೂಪಿಸಿದರು. ಸಂಗೀತಾ ಗು. ಗೊರಚಿಕ್ಕನವರ ಅತಿಥಿಗಳ ಪರಿಚಯ ನಡೆಸಿ ಕೊಟ್ಟರು. ಶೃತಿ ಸಂದಿಮನಿ ಪುಷ್ಫಾರ್ಪಣೆ ನಡೆಸಿ ಕೊಟ್ಟರು, ಭಾಗ್ಯ ಭೀರಗೊಂಡ ಅನಿಸಿಕೆ ನುಡಿಗಳ ನ್ನಾಡಿದರು. ವಿದ್ಯಾಥಿನಿ ವಿಜಯಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಹಣಮಂತ ಪೂಜಾರಿ ವಂದಿಸಿದರು.
ವರದಿ : ಅಮರೇಶ.ಗೊರಚಿಕನವರ
(ಕೂಡಲ ಸಂಗಮ)