ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಿ ಡೆಂಗ್ಯೂ ಚಿಕನ್ ಗುನ್ಯಾ – ರೋಗ ತಡೆಗಟ್ಟೀರಿ.
ಯಡ್ಡೋಣಿ ಜೂ.07

ಯಲಬುರ್ಗಾ ತಾಲೂಕಿನ ಯಡ್ಡೋನಿ ಗ್ರಾಮದಲ್ಲಿ ಡೆಂಗ್ಯೂ ಮಾಸಾಚರಣೆ ಕಾರ್ಯಕ್ರಮ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ನೀರಿನ ಪರಿಕರಗಳಲ್ಲಿ ಉತ್ತತ್ತಿಯಾಗುತ್ತಿರುವ ಲಾರ್ವ ನಾಶ ಪಡಿಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಿ ರೋಗಗಳು ಹರಡದಂತೆ ತಡೆ ಗಟ್ಟಬಹುದು. ಶಾಲಾ ಮಕ್ಕಳು ಸಮುದಾಯದೊಂದಿಗೆ ಸೇರಿ ನಾಶಪಡಿಸಿ ಡೆಂಗ್ಯೂ ಜ್ವರ ಬಾರದಂತೆ ತಡೆ ಗಟ್ಟೋಣ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಡೆಂಗ್ಯೂ ಚಿಕಂನ್ ಗುನ್ಯಾ ರೋಗವು ಹರಡುತ್ತದೆ ನೀರಿನ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರರಾದ ಸವಿತಾ ಮಾತನಾಡಿದರು. ಏರ್ಪಡಿಸಿದ ಡೆಂಗ್ಯೂ ಮಾಸಾಚರಣೆ ದಿನಾಚರಣೆಯ ಮತ್ತು ಪರಿಸರ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿ ಕೊಳ್ಳುವುದು ಮುಖ್ಯವಾಗಿದ್ದು ಬೇರೆ ಬೇರೆ ಊರುಗಳಿಗೆ ಹೋಗಿ ಹೋಗಿ ಬಂದಂತವರು ರಕ್ತ ಪರೀಕ್ಷೆ ಮಾಡಿಸಿ ಕೊಳ್ಳಿರಿ. ಡೆಂಗ್ಯೂ ಚಿಕನ್ ಗುನ್ಯಾ ಮತ್ತು ಮಲೇರಿಯಾ ರೋಗಗಳನ್ನು ನಿಯಂತ್ರಣ ಮಾಡಲು ಸೊಳ್ಳೆಗಳ ಕಡಿತ ದಿಂದ ಪಾರಾಗಲೂ ಸೊಳ್ಳೆ ಪರದೆ ಒಡಮಸ್ ಲೇಪನ ಮತ್ತು ಸಂಜೆ ಮನೆಯಲ್ಲಿ ಬೇವಿನ ಸೊಪ್ಪಿನ ಧೂವೀಕರಣ ಮಾಡುವುದು. ಕಸ ಕಡ್ಡಿ ಹಾಕದೆ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು. ನೀರಿನ ಪರಿಕರಣಗಳಲ್ಲಿ ಲಾರ್ವ ಆಗದಂತೆ ನೋಡಿ ಕೊಳ್ಳುವುದು ಮುಖ್ಯವಾಗಿದೆ ಎಂದರುಸುದ್ದ ನೀರು ಆಹಾರ ಸೇವನೆ ಮಾಡಬೇಕು ಮತ್ತು ಪರಿಸರ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ನೀರಿನ ಪರಿಕರಣಗಳನ್ನು ಮುಚ್ಚಿಟ್ಟು ಸೊಳ್ಳೆಗಳನ್ನು ಮರಿ ಲಾರ್ವ . ಆಗದಂತೆ ನೋಡಿ ಕೊಳ್ಳಬೇಕು ಜೈವೀಕ ವಿಧಾನ ಗಂಬೂಸಿಯಾ ಮೀನುಗಳನ್ನು ಬೆಳೆಸಿ ಲಾರ್ವ ನಾಶ ಪಡಿಸ ಬೇಕೆಂದರು ಅತೀಸಾರ. ವಾಕರಿಕೆ. ವಾಂತಿ ನಿರ್ಜಲೀಕರಣ ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಇದ್ದರೆ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯಿರಿ ನೀರು ಕುದಿಸಿ ಆರಿಸಿದ ನೀರನ್ನು ಸೇವಿಸಿರಿ ತಾಜಾ ಹಣ್ಣುಗಳು ತರ್ಕಾರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನೇ ಉಪಯೋಗಿಸ ಬೇಕೆಂದು ಆಶಾ ಕಾರ್ಯಕರ್ತೆ ಕಮಲಾಕ್ಷಿ ಹಿರೇಮಠ ಮಾತನಾಡಿದರು.ಗ್ರಾಮದ ಹಿರಿಯರಾದ ಅಯ್ಯಪ್ಪ ಕಲ್ಲಗಡಿ. ಮಾತನಾಡಿ ಊಟ ತಯಾರಿಸುವ ಮತ್ತು ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛ ಗೊಳಿಸುವುದು ಶೌಚಾಲಯಗಳನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛ ಗೊಳಿಸುವುದು ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧ ಪಡಿಸಿದ ಆಹಾರ ಪದಾರ್ಥಗಳ ಮೇಲೆ ಕ್ರಿಮಿ ಕೀಟಗಳು ಕುಳಿತು ಕೊಳ್ಳದಂತೆ ಸದಾ ಮುಚ್ಚಳದಿಂದ ಮುಚ್ಚಿಡುವಂತೆ ನಿಮ್ಮ ಮನೆಯ ಶುದ್ಧ ನೀರಿನ ಪರಿಕರಣದಲ್ಲಿ ಉತ್ತತ್ತಿ ಆಗುವಂತ ಸೊಳ್ಳೆ ಮರಿ ಲಾರ್ವಾ ನಾಸೆ ಪಡಿಸುವುದು ಮುಖ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯಾದ ಹನುಮಕ್ಕ ಎಸ್ ಗುನ್ನಳ್ಳಿ. ಆಶಾ ಕಾರ್ಯಕರ್ತೆಯರಾದ ರೇಣುಕಾ ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ವೀರಯ್ಯ.ಹೀರೇಮಠ.ಕೊಪ್ಪಳ