ಕಾವ್ಯಶ್ರೀ ಚಾರಿಟ್ರಬಲ್ ಟ್ರಸ್ಟ್ ನ ರಾಜ್ಯಾಧ್ಯಕ್ಷ ಡಾ, ಶಿವಣ್ಣ.ಜಿ ಸೇರಿ 63 ಸಾಧಕರಿಗೆ – ಆರ್ಯಭಟ ಪ್ರಶಸ್ತಿ.
ಬೆಂಗಳೂರು ಮೇ.19

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ 50 ನೇ. ವರ್ಷದ ಸುವರ್ಣ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರು ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಇದೇ ಮೇ 22. ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾವ್ಯಶ್ರೀ ಚಾರಿಟ್ರಬಲ್ ನ ಅಧ್ಯಕ್ಷ ಡಾಕ್ಟರ್, ಜಿ.ಶಿವಣ್ಣ ಸೇರಿದಂತೆ ವಿದೇಶಿ ಭಾರತೀಯರು ಹಾಗೂ ಕರ್ನಾಟಕದ 63 ಸಾಧಕರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಡಾ. ಶಿವಣ್ಣ.ಜಿ ರವರು ಕಾವ್ಯಶ್ರೀ ಚಾರಿಟ್ರಬಲ್ ಟ್ರಸ್ಟ್ ರಾಜ್ಯಾಧ್ಯಕ್ಷರಾಗಿ ಕರ್ನಾಟಕದ ಅನೇಕ ನಾಡು ನುಡಿ ಸಾಹಿತ್ಯ ಕಲೆ ಸಂಗೀತ ಕವಿ ಗೋಷ್ಠಿ ಸೇರಿ ನಾಡಿನಾದ್ಯಂತ ಅನೇಕ ಸಾಧಕರನ್ನು ಗುರುತಿಸಿ ತಮ್ಮ ಸಂಸ್ಥೆಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನಿಸುವುದರ ಜೊತೆಗೆ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದಿರುವುದನ್ನು ಗುರುತಿಸಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಆರ್ಯಭಟ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ, ಎಚ್.ಎಲ್.ಎನ್ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಡಾಕ್ಟರ್, ಅಶೋಕ್.ಬಿ ಹಿಂಚಿಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜಾ ಡಾ, ಮಹೇಶ್ ಜೋಶಿ, ಸೇರಿದಂತೆ 63 ಸಾಧಕರಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಾಗೂ ನಾಡಿನ ಗಣ್ಯರನ್ನು ಗೌರವಿಸ ಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾವ್ಯಶ್ರೀ ಚಾರಿಟ್ರಬಲ್ ಟ್ರಸ್ಟ್ ಕರ್ನಾಟಕ ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳು, ಮತ್ತು ಚೇತನ ಫೌಂಡೇಶನ್ ಧಾರವಾಡ ಸಂಸ್ಥಾಪಕ ಅಧ್ಯಕ್ಷರು, ಸಂಚಾಲಕರು ಸರ್ವ ಸದಸ್ಯರು, ಅಧ್ಯಕ್ಷರು ಕರ್ನಾಟಕ ಸೋಶಿಯಲ್ ಕ್ಲಬ್, ಅಧ್ಯಕ್ಷರು ವಿಶ್ವಾಸ್ ಫೌಂಡೇಶನ್ ಹುಬ್ಬಳ್ಳಿ ಮತ್ತು ಸರ್ವ ಸದಸ್ಯರು ಸಾಹಿತ್ಯ ಅಭಿಮಾನಿಗಳು ಕನ್ನಡ ಮನಸ್ಸುಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್. ಕೆ.ಹೊಸಹಳ್ಳಿ