ಸಾಮಾಜಿಕ ಲೆಕ್ಕ ಪರಿಶೋಧನೆ ಪೂರ್ವಭಾವಿ ಸಭೆ.

ಕೊಟ್ಟೂರು ಜು.20

ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮ ಪಂಚಾಯಿತಿಯಲ್ಲಿ 20 ಜುಲೈ 2024 ಶನಿವಾರ 2023-24 ನೇ. ಸಾಲಿನ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆ ತಂಡವು ಪೂರ್ವ ಬಾವಿ ಸಭೆಯನ್ನು ನಡೆಸಿದರು. ಸದರಿ ಕಾರ್ಯಕ್ರಮದಲ್ಲಿ ಗ್ರಾ,ಪಂ ಅಧಕ್ಷರು ಶ್ರೀಮತಿ ಡಿ ಹಾಲಮ್ಮ ಉಪಾಧ್ಯಕ್ಷ ಶ್ರೀ ಡಿ ನಾಗೇಶ ಮತ್ತು ಸರ್ವ ಸದಸ್ಯರು, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಸುಭಾಶ್‌ ಚಂದ್ರ ಗೌಡ ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಿ ಹೆಚ್‌ ಎಂ ಗಂಗಾಧರ, ಗ್ರಾಮ ಪಂಚಾಯಿತಿ ಗ್ರಂಥಾಪಾಲಕ ಬಿ ಲೋಕೇಶ್‌ ಇವರೆಲ್ಲರೂ ಸಭೆಯಲ್ಲಿ ಹಾಜರಿದ್ದರು. ಮತ್ತು ಗಣಕ ಯಂತ್ರ ನಿರ್ವಾಹಕರು ಎಂ ಸ್ವತಂತ್ರ ಕುಮಾರ ಇವರಿಂದ ವಂದನಾರ್ಪಣೆ ಮಾಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button