ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜೆ.ಜೆ.ಎಂ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು – ಸಾರ್ವಜನಿಕರಿಂದ ತಕರಾರು ಅರ್ಜಿ.
ಗೂಡೂರ ಮೇ.11

ಗ್ರಾಮದಲ್ಲಿ ಕೇಂದ್ರ ಸರ್ಕಾರದಿಂದ 2021-22 ನೇ. ಸಾಲಿನಲ್ಲಿ ಜಲ ಜೀವನ್ ಮೀಷನ್ (ಜೆ.ಜೆ.ಎಮ್) ಕಾಮಗಾರಿಯ ಮಂಜೂರಾತಿ ಆಗಿರುತ್ತದೆ. ಈ ಕಾಮಗಾರಿಯು ಪ್ರಾರಂಭವಾಗುವ ಮುಂಚಿತವಾಗಿ ಈ ಕಾಮಗಾರಿಯ ಮೇಟರೀಯಲ್ಲ (Materials bill) ಬಿಲ್ಲು ರೂ. 3,34,00,000/ ಬಿಲ್ಲು ಮಂಜೂರಾತಿ ಮಾಡಿಸಿ ಸುಮಾರುನ 2-3 ವರ್ಷ ಕಳೆದರೂ ಈ ಕಾಮಗಾರಿಯು ಆಮೆಗತಿಯಲ್ಲಿ ಪ್ರಾರಂಭ ಮಾಡಿ ಮತ್ತೆ ಈ ಕಾಮಗಾರಿಯ ರೂ. 2 ಕೋಟಿ ಬಿಲ್ಲು 2024 ನೇ. ಸಾಲಿನಲ್ಲಿ ತೆಗೆದಿರುತ್ತಾರೆ. ಆದ ಕಾರಣ ಈ ಕಾಮಗಾರಿಯಲ್ಲಿ ಸಂಪೂರ್ಣವಾಗಿ ಅಂದಾಜು ಪತ್ರಿಕೆಯಲ್ಲಿ (Estimate Copy) ಇರುವ ಸಾಮಗ್ರಿಗಳನ್ನು ಅಳವಡಿಸದೆ ಮತ್ತು ಆಗಿರುವ ಕಾಮಗಾರಿಯಲ್ಲಿಯೂ ಕೂಡಾ ವ್ಯತ್ಯಾಸ ಇರುವದರಿಂದ ಮತ್ತು ಈ ಕಾಮಗಾರಿಯನ್ನು ಪರಿಶೀಲನೆ ಮಾಡುವ ಸಹಾಯಕ ಕಿರಿಯ ಇಂಜನೀಯರಾದ ಕಾಶಿರಾಯ್. ನಾಯಕ್ ಈ ಕಾಮಗಾರಿ ಪ್ರಾರಂಭವಾದಾಗಿನಿಂದ ಈ ಅಧಿಕಾರಿಯು ಕಾಮಗಾರಿ ಪರಿಶೀಲನೆ ಮಾಡಿರುವುದಿಲ್ಲ.

ಮತ್ತು ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆರ್.ಎನ್ ಪುರೋಹೀತ ಇವರು ಕೂಡಾ ಈ ಕಾಮಗಾರಿ ಪರಿಶೀಲನೆ ಮಾಡದೆ ಕಾಮಗಾರಿಯ ಸೂಮಾರು ರೂ. 5,34,00,000/- ಬಿಲ್ಲು ಮಂಜೂರಾತಿ ಮಾಡಿ ಗುತ್ತಿಗೆದಾರರ ಜೊತೆ ಸೇರಿಕೊಂಡು ಈ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಮಾಡುತ್ತಿರುವುದ ರಿಂದ ಗುಡೂರ ಎಸ್.ಸಿ ಗ್ರಾಮದ ಸಾರ್ವಜನಿಕರು ಈ ಕಾಮಗಾರಿಯ ಮುಂದಿನ ಬಿಲ್ಲು ಮಂಜೂರಾತಿ ಮಾಡಬಾರದು ಮತ್ತು ಈ ತಕರಾರು ಅರ್ಜಿ ಮುಟ್ಟಿದ ತಕ್ಷಣ ಈ ಕಾಮಗಾರಿಯನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ತಕ್ಷಣವೇ 2-3 ದಿನಗಳ ಒಳಗಾಗಿ ಬಂದು ಪರಿಸೀಲನೆ ಮಾಡಬೇಕು ಹಾಗೂ ನಮ್ಮ ತಕರಾರು ಅರ್ಜಿ ಇರುತ್ತದೆ.

ಒಂದು ವೇಳೆ 2-3 ದಿನಗಳ ಒಳಗಾಗಿ ಕಾಮಗಾರಿಯ ಪರಿಶೀಲನೆ ಮಾಡದೆ ಇದ್ದಲ್ಲಿ ಮುಂದೆ ಆಗೂ ಹೋಗೂಗಳಿಗೆ ತಾವೆ ಜವಾಬ್ದಾರರು ಇರುತ್ತಿರಿ. ಈ ತಕರಾರು ಅರ್ಜಿಯ ಝರಾಕ್ಸ್ ಪ್ರತಿಗಳು ಈ ಕೆಳಗಿನ ಕಾರ್ಯಾಲಯಕ್ಕೆ ಗೌರವ ಪೂರಕವಾಗಿ ಸಲ್ಲಿಸಲಾಗಿದೆ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬಾಗಲಕೋಟೆ, ಕಾರ್ಯನಿರ್ವಾಹಕ ಅಭಿಯಂತರರು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ನವ ನಗರ ಬಾಗಲಕೋಟೆ, ಲೋಕಾಯುಕ್ತ ಪೋಲೀಸ್ ವರೀಷ್ಠಾಧಿಕಾರಿಗಳು ನವ ನಗರ ಬಾಗಲಕೋಟೆ ಇವರಿಗೆ ಕ್ರಮಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ವರದಿ:ಆನಂದ.ವಡ್ಡರ.ಗೂಡುರು