ನಿವೃತ್ತ ಪಶು ನೌಕರ ಜಿ.ಟಿ. ಮಂಜಣ್ಣ ಗೆ ಬೀಳ್ಕೊಡುಗೆ

ತಾಯಕನಹಳ್ಳಿ ಮಾರ್ಚ್.3

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾ.ಪಂ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಡಿ ಗ್ರೂಪ್ ಪಶು ನೌಕರರು ಜಿ.ಟಿ. ಮಂಜಣ್ಣ ವಯೋ ನಿವೃತ್ತಿ ಹೊಂದಿದ ಹಿನ್ನಲೆ ಪಶು ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ತಾಲೂಕಿನಲ್ಲಿ ತಾಯಕನಹಳ್ಳಿ ಪಶು ಚಿಕಿತ್ಸಾಲಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಅವರ ಸೇವೆ ಸ್ಮರಿಸಿ ಪಶು ಇಲಾಖೆ ನೇತೃತ್ವದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಡಾ ಲೋಹಿತ್ ಕುಮಾರ್ ಟಿ ಕೂಡ್ಲಿಗಿ ಇವರು ಮಾತನಾಡಿ ಜಿ.ಟಿ ಮಂಜಣ್ಣ ತಾಯಕನಹಳ್ಳಿ ಪಶು ಆಸ್ಪತ್ರೆಯಲ್ಲಿ 29 ವರ್ಷಗಳ ಕಾಲ ಪಶು ಸಂಗೋಪನ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯವಾದದ್ದು, ಅವರ ನಿವೃತ್ತಿ ಜೀವನ ಸುಃಖಕರವಾಗಿರಲಿ ಎಂದು ಆಶಿಸಿದರು. ಈ ವೇಳೆ ಜಿ.ಟಿ ಮಂಜಣ್ಣ ಪಶು ಇಲಾಖೆಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಅವರ ನಿವೃತ್ತಿ ಜೀವನ ಸುಃಖಕರವಾಗಿರಲಿ ಎಂದು ಸಿಬ್ಬಂದಿಗಳು ಆಶಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಕೊಟ್ಟೂರು ಡಾ. ಕೊಟ್ರೇಶ್ ಕೆ.ವಿ, ಡಾ ಸುನಿಲ್ ಪಶು ವೈದ್ಯಧಿಕಾರಿ ತಾಯಕನಹಳ್ಳಿ ಹಾಗೂ ಓಂಕಾರಮ್ಮ ಮಹಾಂತಪ್ಪ ಮಾಜಿ ತಾ.ಪಂ ಸದಸ್ಯರು, ಕೆಂಚಲಿಂಗಪ್ಪ ನಿವೃತ್ತ ಪೊಲೀಸ್ ಅಧಿಕಾರಿ, ಡಾ ಮಂಜುಶ್ರೀ ಪಶು ವೈದ್ಯಾಧಿಕಾರಿ ಹಿರೇಕುಂಬಳಗುಂಟೆ, ಡಾ ವರ್ಷ ಪಶು ವೈದ್ಯಾಧಿಕಾರಿ ಆಲೂರು, ರಾಮಚಂದ್ರಪ್ಪ ಪಶು ವೈದ್ಯಕೀಯ ಪರೀಕ್ಷಕರು, ಮೈತ್ರಿ ಕಾರ್ಯಕರ್ತರು, ಶಾಂತಪ್ಪ ಕೆಎಂಎಫ್ ಸೇರಿದಂತೆ ಗ್ರಾ.ಪಂ ಸದಸ್ಯರು, ಮುಖಂಡರು, ಪಶು ಸಖಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button