ಸಂಘಟಿತ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ – ತರೀಕೆರೆ.ಎನ್ ವೆಂಕಟೇಶ್.
ಬಾಳೆಹೊನ್ನೂರು ನ.11

ದಲಿತರು ಶೋಷಿತರು ವಿದ್ಯಾವಂತರಾಗ ಬೇಕು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದಾಗ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ರವರು ಹೇಳಿದರು. ಅವರು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ, ಕೊಪ್ಪ, ಎನ್ ಆರ್ ಪುರ ತಾಲೂಕುಗಳಲ್ಲಿ ಅಸ್ಪೃಶ್ಯತೆ ಜಾತಿ ಪದ್ಧತಿ ಇನ್ನು ಜೀವಂತವಾಗಿದೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ಅಸ್ಪೃಶ್ಯತೆ ನಿವಾರಣೆಗೆ ಸೂಕ್ತ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ, ಅಸಮಾನತೆ, ಜಾತಿ ತಾರತಮ್ಯಗಳನ್ನು ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ, ಧರಣಿ ಸತ್ಯಾಗ್ರಹಗಳಂತ ಕಾರ್ಯಕ್ರಮವನ್ನು ರೂಪಿಸ ಬೇಕೆಂದರು. ಸಂಘಟಿತ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿಯಾದ ಎಂ.ವಿ ಭವಾನಿ ಮಾತನಾಡಿ ನಿಮ್ಮ ಮಕ್ಕಳನ್ನು ಹಾಸ್ಟಲ್ ಮತ್ತು ವಸತಿ ಶಾಲೆಗಳಿಗೆ ಸೇರಿಸಿ ವ್ಯಾಸಂಗ ಮಾಡಿಸಿರಿ, ಮೇಲ್ವರ್ಗದವರ ಮೇಲೆ ದ್ವೇಷ, ಅಸೂಯೆ ಬೇಡ ದಾಸ್ಯದಿಂದ ಹೊರಗೆ ಬಂದು ಸಂಘಟಿತರಾಗಬೇಕು. ಡಾ, ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ಬದ್ಧವಾದ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ಅವುಗಳನ್ನು ಪಡೆದು ಕೊಳ್ಳಬೇಕು ಅರಿವಿನ ಬೆಳಕಿನಲ್ಲಿ ಮುನ್ನಡೆಯೋಣ ಎಂದು ಹೇಳಿದರು. ಗ್ರಾಮ ಸಂಚಾಲಕರಾದ ಚರಣ್ ಮಾತನಾಡಿ ಗ್ರಾಮೀಣ ಹಳ್ಳಿಗಳಲ್ಲಿ ದಲಿತರಿಗೆ ಮೇಲ್ಜಾತಿಯವರು ಮನೆ ಮುಂದೆ ಪ್ರತ್ಯೇಕ ತಟ್ಟೆ ಲೋಟ ಇಟ್ಟಿದ್ದಾರೆ, ನಾವು ಬದಲಾಗಬೇಕು ಮುಂದಿನ ಪೀಳಿಗೆಯ ನಮ್ಮ ಮಕ್ಕಳು ಇಂತ ಘೋರ ದೃಶ್ಯಗಳನ್ನು ನೋಡಬಾರದು ಬದಲಾವಣೆಗಾಗಿ ಒಗ್ಗಟ್ಟಾಗಿರೋಣ ಎಂದು ಹೇಳಿದರು. ಸಂಘಟನಾ ಸಂಚಾಲಕರಾದ ಸುನಿಲ್ ಮಾತನಾಡಿ ಅಡಿಗೆ ಬೈಲು ಗ್ರಾಮದ ದಲಿತರ ಜಮೀನುಗಳು ಅವರು ಸ್ವಾಧೀನ ಅನುಭವದಂತೆ ಕಂದಾಯ ಅಧಿಕಾರಿಗಳು ಪೋಡಿ ಮಾಡಿಕೊಡಬೇಕು ಎಂದು ಹೇಳಿದರು. ಸಂಘಟನಾ ಸಂಚಾಲಕರಾದ ಪ್ರಜಿತ್ ಮಾತನಾಡಿ ನಾವೆಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಂಘ ನಮ್ಮದು ಎಂಬ ಭಾವನೆಯೊಂದಿಗೆ ಬೆರೆಯೋಣ, ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸೋಣ ಎಂದು ಹೇಳಿದರು. ಗ್ರಾಮ ಸಂಚಾಲಕಿಯಾದ ಸವಿತಾ ಮಾತನಾಡಿ ಡಾ, ಬಿ.ಆರ್ ಅಂಬೇಡ್ಕರ್ ನೀಡಿದ ಹಕ್ಕುಗಳನ್ನು ತಿಳಿಯೋಣ. ಹಿಂದುಳಿದಿರುವ ನಾವು ಹಿಂದೆಯೇ ಇರಬಾರದು ಮುಂದೆ ಬರಬೇಕು ದಲಿತ ಸಂಘ ನಮ್ಮ ಆಸ್ತಿ ಎಂದು ಹೇಳಿದರು. ಸಂಘಟನಾ ಸಂಚಾಲಕಿ ಜಾನಕಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮಾಗುಂಡಿ ಸುಬ್ರಮಣ್ಯ ರವರು ಉಪಸ್ಥಿತರಿದ್ದು ದಲಿತ ಸಂಘಟನೆ ರಾಜ್ಯಮಟ್ಟದಲ್ಲಿ ಇದ್ದು ದಲಿತರ ಸಮಸ್ಯೆಗಳಿಗೆ ಒಗ್ಗಟ್ಟಾಗಿ ಎಲ್ಲರೂ ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು