ಬಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಅಡವಿ ನರಿ ಕಾಪಾಡಿದ ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು.
ಕೋಹಳ್ಳಿ ಮೇ.26
![](https://i0.wp.com/sknewskannada.in/wp-content/uploads/2024/05/IMG-20240526-WA00361.jpg?resize=708%2C705&ssl=1)
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲ ಅಡವಿ ನರಿಯು ಕಾಲು ಜಾರಿ ನಾಗಯ್ಯ ಸಿದ್ದಯ್ಯ. ಪೂಜಾರಿ ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 26/05/2024 ರಂದು ಬೆಳಗಿನ ಜಾವ ಸಮಯ 07:30ಕ್ಕೆ ರವಿವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಧಾಕ್ಷಣ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ಅನಿಲ. ಬಡಚಿ ಪ್ರಮುಖ ಅಗ್ನಿಶಾಮಕ ರವರ ನೇತೃತ್ವದಲ್ಲಿ ಸಿಬ್ಬಂದಿಯವರು ಹಾಗೂ ಅರಣ್ಯ ಅಧಿಕಾರಿ ಸಿಬ್ಬಂದಿಯವರು ಒಳಗೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 45 ರಿಂದ 50 ಅಡಿ ಆಳದಲ್ಲಿ ಅಡವಿ ನರಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 02 ಗಂಟೆ 35 ನಿಮಿಷಗಳ ಕಾಲ ಕಷ್ಟಕರ ಜoಟಿ ಕಾರ್ಯ ಚರಣೆಯನ್ನು ಮಾಡಿ ಅಡವಿ ನರಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು. ಈ ರಕ್ಷಣಾ ಕಾರ್ಯ ಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯ ವಿವರಗಳು 01) ಅನಿಲ.ಬಡಚಿ. 02) ಮಲ್ಲನಗೌಡ. ನಾಯಕ್ 03)ಸಂಜೀವ.ಚೌಗಲಾ 04) ಕಲ್ಮೇಶ.ಚಿಮ್ಮಡ 05) ಮಲ್ಲಪ್ಪ. ಬಟಕುರಕಿ 06) ಸಂತೋಷ್ ಚೌಗುಲಾ ಅರಣ್ಯ ಇಲಾಖೆ ಸಿಬ್ಬಂದಿಯವರಾದ 01) ಮಂಜುನಾಥ ಪಾಟೀಲ 02) ಮಲ್ಲಿಕಾರ್ಜುನ. ಕುಂಬಾರ 03)ಭೀಮು.ಕುಂಬಾರ 04) ಶಂಕರ.ಪೂಜಾರಿ ಊರಿನ ಗ್ರಾಮಸ್ಥರು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.