ನಗರದಲ್ಲಿ ವೀರ ವನಿತೆ ಒನಕೆ ಓಬವ್ವ ವೃತ್ತ ನಾಮಕರಣ ಮಾಡಲಿಕ್ಕೆ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಛಲವಾದಿ ಮಹಾಸಭಾ ಒತ್ತಾಯ.
ಬಳ್ಳಾರಿ ನ.07

ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ಹಾಗೂ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವೀರ ವನಿತೆ ಒನಕೆ ಓಬವ್ವನ ದಿನಾಂಕ 11/11/ 2024 ರಂದು ಜಯಂತಿಯ ಕಾರ್ಯಕ್ರಮ ಅಂಗವಾಗಿ ದಿನಾಂಕ 6/11/2024 ಬುಧುವಾರ ರಂದು ಬಳ್ಳಾರಿ ಅಪರ ಜಿಲ್ಲಾಧಿಕಾರಿಗಳು ಜಯಂತಿಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಕನ್ನಡ ನಾಡಿನ ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ರಕ್ಷಿಸಿದ ವೀರ ವನಿತೆ ಒನಕೆ ಓಬವ್ವನ ಜಯಂತಿಯ ಬಗ್ಗೆ ಚರ್ಚಿಸಿ ವೀರ ವನಿತೆ ಒನಕೆ ಓಬವ್ವ ಬಳ್ಳಾರಿ ಜಿಲ್ಲೆಯ ಗುಡೆಕೋಟೆ ಗ್ರಾಮದ ತವರೂರಾಗಿದ್ದು ಆದುದರಿಂದ ಬಳ್ಳಾರಿ ನಗರದಲ್ಲಿ ಯಾವುದಾದರೂ ಒಂದು ವೃತ್ತ ಸರ್ಕಲ್ ಇವರ ಹೆಸರನ್ನು ನಾಮಕರಣ ಮಾಡಿ ಎಂದು ಅಪರ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿ ಕೊಂಡಾಗ ಅಪರ ಜಿಲ್ಲಾಧಿಕಾರಿಗಳು ನಮಗೆ ಒಂದು ಮನವಿ ಪತ್ರವನ್ನು ಸಲ್ಲಿಸಿ ನಾಮಕರಣ ಮಾಡಲಿಕ್ಕೆ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಮಹಾನಗರ ಪಾಲಿಕೆ ಇವರಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು. ಜಿಲ್ಲೆಯ ವಿವಿಧ ಎಲ್ಲಾ ಇಲಾಖೆಗಳ ತಾಲೂಕಿನ ವಿವಿಧ ಕಚೇರಿಗಳಲ್ಲಿ ಎಲ್ಲಾ ಸಿಬ್ಬಂದಿಗಳ ಸೇರಿ ವೀರ ವನಿತೆ ಒನಕೆ ಓಬವ್ವ ಇವರ ಭಾವ ಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ ಗೌರವವನ್ನು ಸಲ್ಲಿಸಲಿಕ್ಕಾಗಿ ತಾವುಗಳು ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಶಿಸ್ತಿನ ಆದೇಶ ಹೊರಡಿಸಿ ಕಡ್ಡಾಯವಾಗಿ ಸಲ್ಲಿಸಬೇಕೆಂದು ಮನವಿ ಮಾಡಿ ಕೊಳ್ಳಲಾಗಿತ್ತು ಜಯಂತಿಯ ಬಗ್ಗೆ ಇನ್ನಿತರ ವಿಷಯಗಳ ಚರ್ಚೆ ಮಾಡಲಾಯಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದಂತ ಸಿ ಶಿವಕುಮಾರ್ ಜಿಲ್ಲಾ ಅಧ್ಯಕ್ಷರು ಛಲವಾದಿ ಮಹಾಸಭಾ ಶಿವರಾಮ್ (ಬಣ) ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಿಪ್ಪೇಸ್ವಾಮಿ ಸಂಗನಕಲ್ ಜಿಲ್ಲಾ ಛಲವಾದಿ ಮುಖಂಡರು ಕೆ.ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಲೋಕೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಛಲವಾದಿ ಮಹಾಸಭಾ ಮಾನಯ್ಯ.ಬಿ ಗೋನಾಳ್ ಜಿಲ್ಲಾ ಉಪಾಧ್ಯಕ್ಷರು ಛಲವಾದಿ ಮಹಾಸಭಾ ಗಾದಿಲಿಂಗ.ಬಿ ಗೋನಾಳ್ ಜಿಲ್ಲಾ ಅಧ್ಯಕ್ಷರು ಭೀಮವಾದ ಡಿ.ಎಸ್.ಎಸ್ ವೇದಿಕೆ ವೆಂಕಟೇಶ್ ಜಿಲ್ಲಾ ಜಂಟಿ ಕಾರ್ಯದರ್ಶಿ ಛಲವಾದಿ ಮಹಾಸಭಾ ಶೇಷಪ್ಪ ಛಲವಾದಿ ಮುಖಂಡರು ಮಲ್ಲಿಕಾರ್ಜುನ.ಬಿ ಗೋನಾಳ್ ಛಲವಾದಿ ಮುಖಂಡರು ಡಿ.ರಾಮಕೃಷ್ಣ ಛಲವಾದಿ ಮುಖಂಡರು ಇನ್ನಿತರರು ಭಾಗವಹಿಸಿದ್ದರು.