ವಲಸೆ ಗ್ರಾಮದಲ್ಲಿ ಇಂದು ಡಾ, ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮ.
ತಳಕು ಜು.07

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವಲಸೆ ಗ್ರಾಮದಲ್ಲಿ ದಿನಾಂಕ : 07/07/2024 ಭಾನುವಾರ ರಂದು ಬೆಳಿಗ್ಗೆ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇಯಜಯಂತಿಯ ಆಚರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿ ಜಾಂಬವಮಠ ಪೀಠಾಧಿಪತಿಗಳು ಆದ ಶ್ರೀ ಶ್ರೀ ಷಡಕ್ಷರಮುನಿ ಸ್ವಾಮಿಗಳು ವಹಿಸಲಿದ್ದಾರೆ, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಶಾಸಕರು ಆದ ಶ್ರೀಯುತ ಎನ್.ವೈ.ಗೋಪಾಲಕೃಷ್ಣ ರವರು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ತಿಪ್ಪಕ್ಕ ಮಲ್ಲೇಶ್ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು, ವಿಶೇಷ ಉಪನ್ಯಾಸವನ್ನು ವಕೀಲರು ಹಾಗೂ ಪ್ರಗತಿಪರ ಚಿಂತಕರು ಆದ ಶ್ರೀಯುತ ಬಿ.ಎಂ, ಹನುಮಂತಪ್ಪ ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ ಲಿಂಗಪ್ಪ ರವರು ಉಪನ್ಯಾಸ ನೀಡಲಿದ್ದಾರೆ, ಚಿತ್ರದುರ್ಗ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳಿಗೆ ಮತ್ತು ಯುವಕರಿಗೆ ಅತ್ಯಂತ ಸಂತಸ ತಂದಿದೆ. ಡಾ|| ಬಿ.ಆರ್ ಅಂಬೇಡ್ಕರ್ ಯುವಕರ ಬಳಗ ವಲಸೆ ಹಾಗೂ ಕೋಡಿಹಳ್ಳಿಯ ಅಂಬೇಡ್ಕರ್ ಯುವಕ ಸಂಘ ಹಾಗೂ ತಿಮ್ಮನಹಳ್ಳಿ, ಬೇಡರೆಡ್ಡಿ ಹಳ್ಳಿ,ಬಂಜಗೆರೆ, ಹೊನ್ನೂರು ಹೊಸಹಳ್ಳಿ, ಹಿರೇಹಳ್ಳಿ, ತಳಕು ಇನ್ನಿತರ ನೆರೆ ಹೊರೆಯ, ಎಲ್ಲಾ ಸಂಘಗಳ ಪದಾಧಿಕಾರಿಗಳು ಸದಸ್ಯರು, ಯುವಕರು, ಯಜಮಾನರು, ಸಮಸ್ತ ನಾಗರೀಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು ಆದ ಶ್ರೀ ಟಿ ಪ್ರದೀಪ್ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ವರದಿ:ಕೋಡಿಹಳ್ಳಿ ಶಿವಮೂರ್ತಿ ಚಿತ್ರದುರ್ಗ