ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಸಂಪುಟ ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು ಹಾಗೂ ಸಂಸತ್ ಸದಸ್ಯತ್ವ ರದ್ದು ಗೊಳಿಸಲು – ದಲಿತ ಮುಖಂಡರಿಂದ ಆಗ್ರಹ.

ಬಳ್ಳಾರಿ ಡಿ.23

ರಾಜ್ಯ ಸಭೆಯಲ್ಲಿ 75 ನೇ. ವರ್ಷದ ವಜ್ರ ಮಹೋತ್ಸವ ಸಂಭ್ರಮದಲ್ಲಿ ಸಂವಿಧಾನದ ಮೇಲೆ ನಡೆಯುತ್ತಿದ್ದ ಚರ್ಚೆಯ ವೇಳೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡುತ್ತಾ “ಅಂಬೇಡ್ಕರ್… ಅಂಬೇಡ್ಕರ್… ಅಂಬೇಡ್ಕರ್… ಎನ್ನುವುದೇ ಫ್ಯಾಶನ್ ಆಗಿದೆ, ಅಂಬೇಡ್ಕರ್ ಬದಲಾಗಿ ಅಷ್ಟು ಬಾರಿ ದೇವರುಗಳನ್ನು ಸ್ಮರಿಸಿದರೆ ಏಳು ಜನ್ಮಕ್ಕಾಗು ವಷ್ಟು ಸ್ವರ್ಗ ಪ್ರಾಪ್ತಿ ಯಾಗುತ್ತಿತ್ತು” ಎಂದು ಸದನದಲ್ಲಿ ಅರಚುತ್ತಾ ಡಾ, ಬಾಬಾ ಸಾಹೇಬ ಅಂಬೇಡ್ಕರ್ ರವರಿಗೆ ಅವಹೇಳನ ಮಾಡಿದ್ದಾರೆ. ದುರುದ್ದೇಶ ಪೂರ್ವಕವಾಗಿ ಕೊಳಕು ಮನಸ್ಥಿತಿಯಲ್ಲಿಯೇ ಡಾ, ಬಾಬಾ ಸಾಹೇಬ ಅಂಬೇಡ್ಕ‌ರ್ ರವರನ್ನು ಅವಹೇಳನ ಮಾಡಿರುವುದನ್ನು ಸಂವಿಧಾನ ಛಲವಾದಿ ಮಹಾಸಭಾ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ನಡೆಯನ್ನು ದೇಶದ ಪ್ರಧಾನ ಮಂತ್ರಿಗಳು ಸಮರ್ಥಿಸಿ ಕೊಂಡಿರುವುದನ್ನು ಖಂಡಿಸಿ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಕೇಂದ್ರದ ಗೃಹ ಸಚಿವರನ್ನು ಕೂಡಲೇ ಸಚಿವ ಸಂಪುಟ ದಿಂದ ವಜಾ ಮಾಡಬೇಕು ಹಾಗೂ ಸಂಸತ್ ಸದಸ್ಯತ್ವವನ್ನು ರದ್ದು ಪಡಿಸಬೇಕು ಎಂದು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಒತ್ತಾಯಿಸಲಾಗುತ್ತದೆ. ಕೆಲ ಮನುವಾದಿ ಶಕ್ತಿಗಳು ಮತ್ತು ಸಂವಿಧಾನ ವಿರೋಧಿಗಳು ಡಾ, ಬಾಬಾ ಸಾಹೇಬ ಅಂಬೇಡ್ಕರ್ ಶಕ್ತಿಯನ್ನು ಅರಿಯದೇ ಕೊಳಕು ಮನಸ್ಸುಗಳಲ್ಲಿ ಅಸಹನೀಯವಾದ ದ್ವೇಷವನ್ನು ಬಿತ್ತುತ್ತಾ ಅಜ್ಞಾನಿಗಳಂತೆ ವರ್ತಿಸಿ ರಾಜ್ಯಾಧಿಕಾರದ ದರ್ಪದಿಂದ ಸಾಕ್ಷಿ ಯಾಗುತ್ತಿರುವುದು ಇಂದಿನ ತಾಜಾ ಉದಾಹರಣೆ ಯಾಗಿದೆ.

ಗೃಹ ಸಚಿವ ಅಮಿತ್ ಶಾ ಎಂಬ ಗುಜರಿ ವ್ಯಾಪಾರಿ ತಾನು ಮಾಡಿದ ಕೃತ್ಯದಿಂದ ಗಡಿಪಾರಾದ ವ್ಯಕ್ತಿ. ಇಂತಹ ವ್ಯಕ್ತಿ ಇಂದು ದೇಶದ ಗೃಹ ಮಂತ್ರಿಯಾಗಿರುವುದು ನಮ್ಮೆಲ್ಲರ ದೌರ್ಭಾಗ್ಯ. ಮನುವಾದಿ ಮನಸ್ಥಿತಿಯನ್ನೇ ಕರಗತ ಮಾಡಿ ಕೊಂಡಿರುವ ಕೋಮುವಾದಿ ಗೃಹ ಸಚಿವ ಅಮಿತ್ ಶಾ ಜನೆವರಿ 26, 1950 ರಿಂದ ಜಾರಿ ಬಂದಿರುವ ಸಂವಿಧಾನವನ್ನು ತಿಳಿಯದ ಒಬ್ಬ ಮೂರ್ಖ ವ್ಯಕ್ತಿ ಯಾಗಿದ್ದಾನೆ. ಇಂತಹ ಅಯೋಗ್ಯನಿಗೆ ಅನಗತ್ಯ ಚರ್ಚೆಗಳಿಗೆ ವೇದಿಕೆ ಕಲ್ಪಿಸಿರುವುದು ನಮ್ಮೆಲ್ಲರ ಸೌಭಾಗ್ಯ ವೆಂದರೆ ವಿಧಿಯಿಲ್ಲದೆ ಪರಿಗಣಿಸ ಬೇಕಾಗಿದೆ.ಕಳೆದ 25 ವರ್ಷಗಳಿಂದ ಅಂಧಕಾರದಿಂದ ಮುಳುಗಿರುವ ಭಾರತ ದೇಶದಲ್ಲಿ 9315 ಕ್ಕಿಂತ ಹೆಚ್ಚು ಜಾತಿ, ಉಪ ಜಾತಿಗಳಿವೆ. 19659 ಕ್ಕಿಂತ ಹೆಚ್ಚು ಭಾಷೆಗಳಿರುವ ದೇಶದಲ್ಲಿ ಹಿಂದಿನಿಂದಲೂ ಪುರೋಹಿತ ಶಾಹಿಗಳು ಮನಸ್ಕೃತಿಯನ್ನು ಕಾನೂನಾಗಿ ಜಾರಿ ಮಾಡಿ ತಾವೇ ಗರಿಷ್ಠ, ಇತರರೆಲ್ಲರೂ ಕನಿಷ್ಠವೆಂದು ಜಾತಿ ಬೇಧಗಳ ಕಂದಕವನ್ನು ಉಂಟು ಮಾಡಿದ ತಾರತಮ್ಯದಿಂದ ನಮ್ಮ ದೇಶ ಇಂದಿಗೂ ಚೇತರಿಸಿ ಕೊಂಡಿರುವುದಿಲ್ಲ. ಮೇಲು – ಕೀಳು ಎನ್ನುವ ಹೀನ ಸಂಸ್ಕೃತಿಯ ಕ್ರೌರ್ಯ ಇಂದಿಗೂ ತಾಂಡವಾಡುತ್ತಿದೆ.

ನಮ್ಮ ದೇಶದಲ್ಲಿ ಮಾತನಾಡದ ಕೋಟ್ಯಾಧಿ ಕೋಟಿ ದೇವತೆಗಳು ಸಹ ದೇಶದಲ್ಲಿರುವ ಅಸ್ಪೃಶ್ಯತೆ, ಅಸಮಾನತೆ, ಬಡತನ, ಮೂಢ ನಂಬಿಕೆಗಳನ್ನು ಕೊನೆ ಗಾಣಿಸಲು ಸಾಧ್ಯವಾಗಲಿಲ್ಲ ವೆನ್ನುವುದು ನಿಜ ಸಂಗತಿ. ದೇವರು ಧರ್ಮದ ಹೆಸರಿನಲ್ಲಿ ಹೋಮ – ಹವನಗಳನ್ನು ನಡೆಸಿ ತನ್ನ ಹೊಟ್ಟೆ ತುಂಬಿಸಿ ಕೊಳ್ಳುವ ಕಾಯಕ ಕೆಲ ಮಂದಿಗೆ ಅಷ್ಟೇ ಲಾಭ ದಕ್ಕಿದಲ್ಲದೆ 143 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಬಹು ಸಂಖ್ಯಾತರಿಗೆ ದೇವರುಗಳಿಂದ ಯಾವುದೇ ಪ್ರಯೋಜನ ವಾಗಿರುವುದಿಲ್ಲ. ತಥಾಗತ ಗೌತಮ ಬುದ್ಧ, ಸಾಂಸ್ಕೃತಿಕ ನಾಯಕ ಬಸವಣ್ಣ, ಮಹಾತ್ಮ ಜ್ಯೋತಿ ಬಾಪುಲೆ, ಅಕ್ಷರದವ್ವ ಸಾವಿತ್ರಿ ಬಾಯಿಫುಲೆ, ಛತ್ರಪತಿ ಶಾಹು ಮಹಾರಾಜರು, ನಾಲ್ವಡಿ ಕೃಷ್ಣರಾಜ ಒಡೆಯರ, ತಂದೆ ಪೆರಿಯಾರ, ನಾರಾಯಣ ಗುರು, ಟಿಪ್ಪು ಸುಲ್ತಾನ ಮುಂತಾದವರು ಅಸಮಾನತೆ ವಿರುದ್ಧ ನಡೆಸಿದ ಹೋರಾಟದ ನಂತರ ಏಪ್ರಿಲ್ 14, 1891 ರಂದು ಜನಿಸಿದ ಡಾ, ಬಾಬಾ ಸಾಹೇಬ ಅಂಬೇಡ್ಕರ್ ಅನೇಕ ಹೋರಾಟಗಳನ್ನು ನಡೆಸಿ ನಮಗೆ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡಿ ಭಾರತೀಯರ ಮನೆ ಮನೆಗೆ ದೀಪವಾಗಿ ಪ್ರಜ್ವಲಿಸುತ್ತಿದ್ದಾರೆ. ಇಂತಹ ಮಹಾನ್ ನಾಯಕನನ್ನು ಅಪಮಾನ ಮಾಡುವುದನ್ನು ಯಾರೂ ಕೂಡಾ ಸಹಿಸಲು ಅಸಾಧ್ಯವಾದದ್ದು.

ಅದಕ್ಕಾಗಿ ಡಾ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರು ಮತ್ತು ಸಂವಿಧಾನ ಉಳಿಸಲು ಪ್ರತಿಯೊಬ್ಬರು ಮುಂದಾಗ ಬೇಕಾಗಿದೆ. ಆದ್ದರಿಂದ ಕೂಡಲೇ ಕೇಂದ್ರದ ಗೃಹ ಸಚಿವರಾದಂತಹ ಅಮಿತ್ ಶಾ ಅವರ ಸಂಪುಟ ಸಚಿವ ಸ್ಥಾನದಿಂದ ವಜಿ ಗೊಳ್ಳಿಸಬೇಕು ಹಾಗೂ ಅವರ ಲೋಕಸಭಾ ಸದಸ್ಯತ್ವ ರದ್ದು ಗೊಳಿಸಬೇಕು ಎಂದು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ರಾಷ್ಟ್ರಪತಿಗೆ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ಶಿವಕುಮಾರಜಿಲ್ಲಾಧ್ಯಕ್ಷರು ಮಾನಯ್ಯ.ಬಿ ಗೋನಾಳ ಜಿಲ್ಲಾ ಉಪಾಧ್ಯಕ್ಷರು ಲೋಕೇಶ್ ಕಪಗಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ವೆಂಕಟೇಶ ಜಿಲ್ಲಾ ಜಂಟಿ ಕಾರ್ಯದರ್ಶಿ ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜು ತಲಮಾಮಡಿ ಕಾಂಗ್ರೆಸ್ ಮುಖಂಡರು ರಾಮಕೃಷ್ಣ ಜಿಲ್ಲಾ ಸಹ ಕಾರ್ಯದರ್ಶಿ ಛಲವಾದಿ ಮಹಾಸಭಾ ಮಲ್ಲಿಕಾರ್ಜುನ ದಲಿತ ಮುಖಂಡರು ಗಿರೀಶ್ ಕುಡಿತಿನಿ ಯುವ ದಲಿತ ಮುಖಂಡ ದಿವಾಕರ್ ಕುಡಿತಿನಿ ದಲಿತವ ಮುಖಂಡ ಲಕ್ಷ್ಮಿ ಬಿ ಗೋನಾಳ್ ಹಾಗೂ ಇನ್ನಿತರರು ಮುಖಂಡರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button