ನಕಲಿ ಗೊಬ್ಬರ ವರದಿ ಬಂದರು ಕೃಷಿ ಅಧಿಕಾರಿ ಗುರುನಾಥ – ಕಣ್ಣಿದ್ದು ಕುರುಡರಂತೆ ಬೇಜವಾಬ್ದಾರಿ ವರ್ತನೆ.

ಮಲ್ಲದಗುಡ್ಡ ಅ.22

ನಕಲಿ ಗೊಬ್ಬರ ಮಾರಾಟ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಸರಕಾರ ಹೇಳಿದರೆ, ಸರಕಾರವೇ ಮಸ್ಕಿ ತಾಲೂಕಿನ ಹಾಲಾಪುರ ಹೋಬಳಿಯ ಮಲ್ಲದಗುಡ್ಡ ಕ್ಯಾಂಪ್ ನಲ್ಲಿರುವ ಶ್ರೀನಿವಾಸ ಆಗ್ರೋ ಟ್ರೇಡರ್ಸ್ ಮಾಲೀಕ ಬಿ.ವಾಸು ನಕಲಿ ಗೊಬ್ಬರ ನೀಡಿರುವುದು ಸತ್ಯವಾಗಿದ್ದರು ಕೃಷಿ ಅಧಿಕಾರಿ ಗುರುನಾಥ ಕ್ರಮ ಜರುಗಿಸದೆ ಮೌನ ತಾಳಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾಯಕ ರೈತರಿಗೆ ಮೋಸ ಮಾಡಿದರು ಸಹ ನಮ್ಮನ್ನು ಯಾರು ಕೇಳುತ್ತಾರೆಂದು ಬಿ.ವಾಸು ಎಂಬ ವ್ಯಕ್ತಿ ನಕಲಿ ಗೊಬ್ಬರ ನೀಡಿರುವ ಅಂಶ ಸತ್ಯವಾಗಿದ್ದರು ಕೃಷಿ ಅಧಿಕಾರಿ ಗುರುನಾಥ ಮಾಲೀಕನ ಜೊತೆ ಶಾಮೀಲಾಗಿ ಪ್ರಕರಣ ದಾಖಲಿಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆಂದು ರೈತರು ನ್ಯಾಯಬೇಕು ಎಂದು ಒತ್ತಾಯಿಸಿದ್ದಾರೆ. ಬಡ ರೈತರ ಬೆನ್ನೆಲುಬನ್ನು ಬಿ.ವಾಸು ಎಂಬಾತ ನಕಲಿ ಗೊಬ್ಬರ ನೀಡಿ ರೈತರನ್ನು ಸಾಯಿಸುವ ಕೆಲಸ ಮಾಡುತ್ತಿದ್ದರು ಸರಕಾರದ ಅಧಿಕಾರಿಗಳು ಬಡ ರೈತರ ಗೋಣು ಮುರಿಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಅಮಾಯಕ ರೈತರ ಕಷ್ಟ ಕೇಳಿಯಾದರು ನ್ಯಾಯ ಕೊಡುವ ವ್ಯವಸ್ಥೆ ಮಾಡಿ ಸ್ವಾಮಿ ಎಂದು ರೈತರು ಅಲುಬುತಿದ್ದಾರೆ ಎಂದು ಸುದ್ದಿಯಾಗಿರುತ್ತದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button