ದಲಿತರ ಹಣ ದುರ್ಬಳಕೆ ಮಾಡಿದ ಸಿದ್ದರಾಮಯ್ಯ ಸರ್ಕಾರ – ಬಿ.ವೈ ವಿಜೇಯಂದ್ರ.
ಬಾಗಲಕೋಟೆ ಫೆ.20

ಇಂದು ಬೆಂಗಳೂರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ಬಿ.ವೈ ವಿಜೇಂದ್ರ ರವರು ಸಭೆ ಉದ್ದೇಶಿಸಿ ಮಾತನಾಡಿ ಮಾರ್ಚ್ 7 ರಂದು ನಡೆಯುವ ಬಜೆಟ್ ಅಧಿವೇಶನದ ದಿನದಲ್ಲಿ ಎಸ್/ಸಿ ಪಿ & ಟಿ/ಎಸ್ ಪಿ ದುಡ್ಡನ್ನು ದುರುಪಯೋಗ ಪಡಿಸಿ ಕೊಂಡು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಕೊಳ್ಳಲು ಸಿದ್ದರಾಮಯ್ಯ ಸರಕಾರವು ತಯಾರಿ ನಡೆಸಿದೆ ಹಾಗಾಗಿ ವಿಶೇಷ ಘಟಕ್ ಯೋಜನೆಯ ಮೂಲ ಉದ್ದೇಶ ದಲಿತರ ಸಬಲೀಕರಣ ದಲಿತರ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಶಿಕ್ಷಣ ಆರೋಗ್ಯ ಕುಡಿಯುವ ನೀರು ವಸತಿ ಸೌಲಭ್ಯಗಳಿಗೆ ಒತ್ತು ಕೊಟ್ಟು ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ. ಬಿಟ್ಟಿ ಗ್ಯಾರಂಟೀಗಳಿಗೆ ಎಸ್/ಸಿ ಎಸ್/ಟಿ ಮೀಸಲು ದುಡ್ಡು ಬಳಸುವದು ಅತ್ಯಂತ ಘೋರ್ ಅನ್ಯಾಯ ವೇಸಗುತ್ತಿರುವ ಸಿದ್ದರಾಮಯ್ಯ ಸರಕಾರದ ವಿರುದ್ದ ಬಿಜೆಪಿಯ ಮುಖ್ಯ ಜಿಲ್ಲಾ ಸಮಿತಿ ಹಾಗೂ ಎಸ್/ಸಿ ಎಸ್./ಟಿ ಮೋರ್ಚಾ ಸಮಿತಿಗಳು ಮಾರ್ಚ್ ಮೊದಲ ದಿನಗಳಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಿ ನಂತರ ಮಾರ್ಚ್ 3 ರೊಳಗೆ ಲೋಕಸಭಾ ವ್ಯಾಪ್ತಿಯ ಜಿಲ್ಲಾ ಕೇಂದ್ರಗಳಲ್ಲಿ ಎಸ್/ಸಿ ಪಿ ಟಿ/ಎಸ್ ಪಿ ದುಡ್ಡನ್ನು ದುರ್ಬಳಕೆ ಮಾಡಿರುವ ಎಮ್ಮೆ ಚರ್ಮದ ದಲಿತ ದ್ರೋಹಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಿದ್ದು. ಪಕ್ಷದದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಆರಂಭದಲ್ಲಿ ಆರ್.ಎಸ್.ಎಸ್ ಪ್ರಮುಖರಾದ ಸಾಮರಸ್ಯ ವೇದಿಕೆ ಸಂಚಾಲಕರಾದ ವಾದಿರಾಜ್ ಜೀ ವಿಸ್ತೃತವಾಗಿ ಮಾತನಾಡಿ ದಲಿತರ ಸಬಲೀಕರಣ ಹಣವನ್ನು ಕಾಂಗ್ರೇಸ್ ದುರ್ಬಳಕೆ ಮಾಡಿರುವುದನ್ನು ತಿಳಿಸಿದರು ಎಂದು ವರದಿಯಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟ