ದಲಿತ ಸಮುದಾಯಕ್ಕೆ ವಂಚಿಸಿದ್ದ ಸಿದ್ದರಾಮಯ್ಯ ಸರ್ಕಾರ – ಜಿಲ್ಹಾ ಅಧ್ಯಕ್ಷರಿಂದ ಆರೋಪ.
ಬಾಗಲಕೋಟೆ ಫೆ.22

ದಿನಾಂಕ 24/2/2025 ರಂದು ಮುಂಜಾನೆ 10:30 ಗಂಟೆಗೆ ನವನಗರ ದಲ್ಲಿರುವ ಬಿಜೆಪಿ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ತುರ್ತು ಸಭೆಯನ್ನು ಜಿಲ್ಲಾಧ್ಯಕ್ಷರಾದ ಶ್ರೀ ಶಾಂತಗೌಡ ಪಾಟೀಲ ರವರು ಆಯೋಜಿಸಿದ್ದು ಜಿಲ್ಲೆಯ ಎಸ್/ಸಿ ಮೋರ್ಚಾ ಮತ್ತು ಎಸ್/ಟಿ ಮೋರ್ಚಾ ಹಾಗೂ ಇತರೆ ಮೊರ್ಚಾಗಳ ಪ್ರಮುಖ ಮುಖ್ಯ ಪದಾಧಿಕಾರಿಗಳು ಹಾಗೂ ಪಕ್ಷದಲ್ಲಿರುವ ದಲಿತ ಸಮುದಾಯದ ಹಿರಿಯರನ್ನು ಈ ಸಭೆಗೆ ಆವ್ವಾನವನ್ನು ನೀಡಿದ್ದು ದಯವಿಟ್ಟು 25 ನೇ. ತಾರೀಕಿಗೆ ಸೋಮವಾರ ಬೆಳಿಗ್ಗೆ ಸರಿಯಾದ ಸಮಯಕ್ಕೆ ಸಭೆಗೆ ಆಗಮಿಸಲು ಸೂಚಿಸಿದ್ದು.

ಪ್ರಸ್ತುತ ಸರ್ಕಾರವು ಈಗಾಗಲೇ ಎರಡು ಭಾರೀ ವಿಷೇಶ ಘಟಕ ಯೋಜನೆಯ ಮೀಸಲು ಹಣ ದುರ್ಬಳಕೆ ಮಾಡಿ ಕೊಂಡು ದಲಿತ ಸಮುದಾಯಕೆ ಸೌಲಭ್ಯ ವಂಚಿತ ರನ್ನಾಗಿಸಿದ್ದು ಮತ್ತೆ ಈ ಬಾರಿಯೂ ಬಜೆಟ್ ಅಧಿವೇಶನದಲ್ಲೇ 3 ನೇ. ಬಾರಿಯೂ ಸುಮಾರು 14 ಸಾವಿರ ಕೋಟಿ ರೂಪಾಯಿ ಮೀಸಲು ಹಣವನ್ನು ನೇರವಾಗಿ ಗ್ಯಾರೆಂಟಿ ಯೋಜನೆಗೆ ತೆಗೆದು ಕೊಳ್ಳುವ ಹೊಂಚು ಹಾಕುತ್ತಿರುವ ರಾಜ್ಯದ ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಸುವ ಸಲುವಾಗಿ ಪಕ್ಷವು ಅತ್ಯಂತ ಅಚ್ಚು ಕಟ್ಟಾಗಿ ಜಾಗ್ರತಿ ವಹಿಸಿ ಎಸ್ಸಿ/ಎಸ್ಟಿ ಹಣ ದುರ್ಬಳಕೆ ವಿರುದ್ದ ಜನಾಂದೋಲನ ರೂಪಿಸಿದ್ದು.

ಆ ಹೋರಾಟದ ಪೂರ್ವಭಾವಿ ಸಿದ್ಧತೆಗಾಗಿ ಜಿಲ್ಲಾಧ್ಯಕ್ಷರಾದ ಎಸ್/ಟಿ ಪಾಟೀಲ್ ಸರ್ ಹಾಗೂ ಜಿಲ್ಲೆಯ ಶಾಸಕರು ಮಾಜಿ ಶಾಸಕರು ಲೋಕಸಭಾ ಸದಸ್ಯರು ರಾಜ್ಯ ಸಭಾ ಸದಸ್ಯರು ಈ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದು ಅದಕ್ಕಾಗಿ ತಪ್ಪದೇ ಸಭೆಗೆ ಆಗಮಿಸಲು ಕೋರಿದ ಮುತ್ತಣ್ಣ.ವೈ ಬೆಣ್ಣೂರು ಜಿಲ್ಲಾಧ್ಯಕ್ಷರು ಎಸ್/ಸಿ ಮೋರ್ಚಾ ಅಧ್ಯಕ್ಷರು ಬಾಗಲಕೋಟೆ ರವರಿಂದ ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟ