ಪುರ ಸಭೆ ಸದಸ್ಯರಿಗೆ ಇಡೀ ಶಾಪ ಹಾಕುತ್ತಿರುವ – ಇಂದಿರಾ ನಗರದ ನಿವಾಸಿಗಳು.
ಮಾನ್ವಿ ಮೇ.30

ಸರ್ಕಾರ ನಮ್ಮ ಪಾಲಿಗೆ ಸತ್ತೈತೋ ಯಪ್ಪೋ…..
ಬಡ ಜನರಿಗೆ ಸುಳ್ಳು ಹೇಳಿ ಮತ ಪಡೆದ ನಂತರ ಸದಸ್ಯರು ಕೆಲಸ ಮಾಡಬೇಕು. ಆದರೆ ಮಾನ್ವಿ ಪಟ್ಟಣದ ಇಂದಿರಾ ನಗರ ಪುರ ಸಭೆಯ ಸದಸ್ಯರು ಕೆಲಸ ಮಾಡದೇ ಕಾರಣ ಇಡೀ ಶಾಪ ಹಾಕುತ್ತ ಸಾರ್ವಜನಿಕ ಶೌಚಾಲಯದ ದುರ್ನಾತದ ಮಧ್ಯೆ ಜೀವನ ಕಳೆಯುವ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ಬಂದೋದಗಿದೆ.
ಸಾರ್ವಜನಿಕರ ಕೈಗೆ ಆಮ್ ಆದ್ಮಿ ಪಕ್ಷದ ಸಿಂಬಲ್ ಬರುವ ಮುಂಚೆ ಎಚ್ಚರ ಗೊಳ್ಳಿ Other wise…..?
ಶಾಸಕ ಹಂಪಯ್ಯ ನಾಯಕರೆ ನಿಮ್ಮ ಕ್ಷೇತ್ರದ ಇಂದಿರಾ ನಗರದ ನಿವಾಸಿಗಳು ರೋಗ ರುಜಿನಗಳು ನಡುವೆ ಬದುಕುತ್ತಿದ್ದಾರೆ ಅಂದರೆ ಇಲ್ಲಿನ ಸಮಸ್ಯೆ ಕೇಳುವವರು ಯಾರು ಸ್ವಾಮಿ. ಪುರಸಭೆ ಇದ್ದರು ಒಂದು ರೀತಿಯಲ್ಲಿ ವ್ಯರ್ಥವಾಗಿದೆ.
ಪುರಸಭೆ ಸದಸ್ಯರು ಇಲ್ಲಿನ ನಿವಾಸಿಗಳ ಪರಿಸ್ಥಿತಿ ಯಾರು ಕೇಳದ ಕಾರಣ ಬಡ ಜನರು ಸತ್ತರು ಸಹ ಸರಕಾರದ ಅಧಿಕಾರಿಗಳಿಗೆ ಖುಷಿನಾ ಎಂದು ಜನರೆ ಕೇಳುತ್ತಾರೆ ಎಂದ ಮೇಲೆ ಮಾನ್ವಿ ತಾಲೂಕಿನ ಪರಿಸ್ಥಿತಿ ಇದೆ ರೀತಿಯಲ್ಲಿ ಇರುತ್ತಾ ಅಥವಾ ಅಭಿವೃದ್ಧಿಯನ್ನು ಯಾರಾದರೂ ಮಾಡುತ್ತಾರಾ ಎಂದು ಜನರ ಪ್ರಶ್ನೆಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ