ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ (ರಿ) ದ ಜಿಲ್ಲಾ ಅಧ್ಯಕ್ಷರಾಗಿ ಬಣಕಾರ್ ಪತ್ರೇಶ್ ಆಯ್ಕೆ.
ಕೊಟ್ಟೂರು ಜೂನ್.17

ಕೊಟ್ಟೂರಿನ ಸರ್ಕಾರಿ ಪ್ರೌಢಶಾಲೆ ( ಬಾಲಕರ ) ಇಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲೆಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಶ್ರೀ ಆನಂದ್ ನಾಯಕ್ ಇವರ ನೇತೃತ್ವದಲ್ಲಿ ನಡೆಯಿತು. ಕಲ್ಯಾಣ ಕರ್ನಾಟಕದ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಕೋನದಿಂದ ಪ್ರೌಢಶಾಲೆಗಳ ಮುಖ್ಯ ಗುರುಗಳು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ತೋಟಗಾರಿಕಾ ಶಿಕ್ಷಕರು ಇವರನ್ನೊಳಗೊಂಡ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ರಾಜ್ಯ ಸಂಘದ ಪದಾಧಿಕಾರಿಗಳು ಈ ಕೆಳಗಿನ ಸದಸ್ಯರನ್ನು ಜಿಲ್ಲಾ ಪದಾಧಿಕಾರಿಗಳನ್ನಾಗಿ ಅನುಮೋದನೆ ನೀಡಿದರು.

*ಜಿಲ್ಲಾ ಗೌರವ ಅಧ್ಯಕ್ಷರು* : ಪಿ.ಡಿ.ರಂಗಪ್ಪ ಮುಖ್ಯ ಗುರುಗಳು(ಕೂಡ್ಲಿಗಿ ) *ಜಿಲ್ಲಾಧ್ಯಕ್ಷರು* : ಬಣಕಾರ್ ಪತ್ರೇಶ್ ವಿಜ್ಞಾನ ಶಿಕ್ಷಕರು (ಕೊಟ್ಟೂರು ) *ಜಿಲ್ಲಾ* *ಪ್ರಧಾನ ಕಾರ್ಯದರ್ಶಿಗಳು** : ನರೇಂದ್ರ ಕೆ. ಆದರ್ಶ ವಿದ್ಯಾಲಯ ಹೊಸಪೇಟೆ *ಉಪಾಧ್ಯಕ್ಷರು* : ಭೀಮನಾಯ್ಕ್ (ಹಡಗಲಿ) *ಉಪಾಧ್ಯಕ್ಷರು* : ಮೂಗಣ್ಣ ಕೆ ಎಸ್ (ಕೊಟ್ಟೂರು) *ಜಿಲ್ಲಾ*ಖಜಾಂಚಿಗಳು* :ಹರಪನಹಳ್ಳಿ *ಸಂಘಟನಾ* *ಕಾರ್ಯದರ್ಶಿ* : ಪ್ರಶಾಂತ್ ದೈಹಿಕ ಶಿಕ್ಷಕರು, ಹೆಚ್ ಬಿ ಹಳ್ಳಿ *ಸಹ* *ಕಾರ್ಯದರ್ಶಿ** : ಕೆ.ಎಚ್.ಎಂ. ವಿಶ್ವನಾಥ್ ವೃತ್ತಿ ಶಿಕ್ಷಣ ಶಿಕ್ಷಕರು ಈ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅನುಮೋದಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು