ಕೊಟ್ಟೂರು ಪಟ್ಟಣದಲ್ಲಿ “ವ್ಯಸನ ಮುಕ್ತ ದಿನಾಚರಣೆ”.
ಕೊಟ್ಟೂರು ಅ.01

ಕೊಟ್ಟೂರು ಪಟ್ಟಣ ಪಂಚಾಯಿತಿ ಹಾಗೂ ತಾಲೂಕಾ ಆಡಳಿತ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಇಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ “ವ್ಯಸನ ಮುಕ್ತ ದಿನಾಚರಣೆ” ಪ್ರಯುಕ್ತ ಪೌರ ಕಾರ್ಮಿಕರು ಹಾಗೂ ಶಾಲಾ ಮಕ್ಕಳಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾಥಾ ಮಾಡಿ, ಮಾನವ ಸರಪಳಿ ರಚನೆ ಮೂಲಕ ತಂಬಾಕು, ಮದ್ಯಪಾನ ತ್ಯಜಿಸುವಂತೆ ಪ್ರತಿಜ್ಞಾ ವಿಧಿ ಮಾಡಿಸಲಾಯಿತು. ಅಗಷ್ಟ್ 01, 1930 ರಲ್ಲಿ ಬಾಗಲಕೋಟೆ ಜಮಖಂಡಿ ತಾಲೂಕು , ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು ಸಮಾಜದ ಒಳಿತಿಗಾಗಿ ಸನ್ಯಾಸಿಯಾಗಿ ಜೋಳಿಗಿ ಮತ್ತು ಬೆತ್ತವನ್ನು ಹಿಡಿದು ವ್ಯಸನ ಯುಕ್ತರಿಂದ ಅನಾರೋಗ್ಯಕರ ಅಭ್ಯಾಸಗಳನ್ನು ಜೋಳಿಗೆ ಒಳಗೆ ಹಾಕಿ ವ್ಯಸನ ಮುಕ್ತ ಜೀವನ ನಡೆಸಿ ಎಂದು ತನ್ನ ಮಠದ ಭಕ್ತರಿಗೆ ಆರ್ಶೀವಚನ ನೀಡಿದವರು. ಬೆತ್ತವನ್ನು ಸಮಾಜ ತಿದ್ದುವ ಕೆಲಸಕ್ಕೆ ಬಳಸಿ ತಪ್ಪು ಮಾಡಿದವರಿಗೆ ಆ ಮೂಲಕ ಸಮಾಜದ ಯುವಕರನ್ನು ಸುಸ್ಥಿತಿಗೆ ತರುವ ಕೆಲಸ ಮಾಡುತಿದ್ದರು.

48 ವರ್ಷಗಳ ತಮ್ಮ ಮಠದ ಆಡಳಿತ ಅವಧಿಯಲ್ಲಿ ನಿರುದ್ಯೋಗ ಹಾಗೂ ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ, ನಿರಂತರ ದಾಸೋಹ, ದೇವದಾಸಿ ವಿಮೋಚನಾ ಸಂಸ್ಥೆ, ನಿಸರ್ಗ ಚಿಕಿತ್ಸೆ ಯೋಗ ಕೇಂದ್ರ, ಶಾಖಾ ಮಠಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರಿಗೆ ಧರ್ಮ ಬೋಧನೆ ಮಾಡಿ ಪಟ್ಟಾಭಿಷೇಕ ಮಾಡಿ ಸಮಾನತೆ ತರಲು ಪ್ರಯತ್ನ ಮಾಡಿದ ಶ್ರೀಗಳು. ಶ್ರೀಗಳ ಕಾಯಕ ಗಮನಿಸಿದ ಸರ್ಕಾರ ಅವರ ಜನ್ಮ ದಿನ ಅಗಷ್ಟ್ 01 ನೇ ತಾರೀಕು “ವ್ಯಸನ ಮುಕ್ತ ದಿನಾಚರಣೆ” ಯನ್ನು ಮಾಡುತ್ತಿರುವುದು ಶ್ರೀಗಳ ವ್ಯಸನ ಮುಕ್ತ ಸಮಾಜ ಜೋಳಗಿ ಕಾಯಕ ಯೋಜನೆಗೆ ಸರ್ಕಾರ ಗೌರವ ಸಲ್ಲಿಸುತ್ತಿರುವು ಶ್ಲಾಘನೀಯ ಎಂದ ಸಾರ್ವಜನಿಕರು. ಕೆಲವು ಸ್ವಾಮಿಗಳು ಸನ್ಯಾಸಿ ವೇಷ ಹಾಕಿ ಜೋಳಿಗೆ ಮತ್ತು ಬೆತ್ತವನ್ನು ಹಿಡಿದು ಸಮಾಜದ ಒಳಿತಿಗಾಗಿ ದುಡಿಯದೇ ಜಂಗಮ ಜೋಳಿಗಿಯಿಂದ ಹಣ, ಆಸ್ತಿ ಮಾಡಲು ಬಳಸಿ ಕೊಳ್ಳುತ್ತಿರುವುದು ಕ್ರೋಧನೀಯ, ಇಂಥಹ ಸ್ವಾಮಿಗಳ ಕಾರ್ಯವೈಖರಿಯಿಂದ ಸಮಾಜಕ್ಕಾಗಿ ದುಡಿಯುವ ಸ್ವಾಮೀಜಿಗಳಿಗೆ ಭಕ್ತರಿಂದ ಗೌರವ ಸಲ್ಲದಂತಾಗಿದೆ ಎಂದು ಗುರು ಬಸವರಾಜ ಹೇಳಿದರು.ಪಟ್ಟಣದಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆ ಜಾಥಾ ಕಾರ್ಯಕ್ರಮದಲ್ಲಿ ಪ.ಪಂ. ಮುಖ್ಯಾಧಿಕಾರಿ ಎ.ನಸರುಲ್ಲಾ. ಉಪ ತಹಶೀಲ್ದಾರ್ ಅನ್ನದಾನೇಶ್ ಬಿ ಪತ್ತರ್ , ಗುರು ಬಸವರಾಜ, ಇಸಿಒ ನಿಂಗಪ್ಪ ಹಾಗೂ ಬಿ ಆರ್ ಪಿ, ಸಿ.ಆರ್.ಪಿ ,ಶಿಕ್ಷಕರು ಶಾಲಾ ಮಕ್ಕಳು, ಪ.ಪಂ. ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.