ಸುಂಕೇಶ್ವರ ಗ್ರಾಮ ಪಂಚಾಯತಿಯ – ಕರ್ಮಕಾಂಡ ಬಟಾ ಬಯಲು.
ಸುಂಕೇಶ್ವರ ಏ.08

ಸರಕಾರದ ನಿಯಮದ ಪ್ರಕಾರ ದಾಖಲಾತಿಗಳನ್ನ ಪರಿಶೀಲನೆ ಮಾಡಿ ಮನೆಗಳು ಬಂದರೆ ಜಿ.ಪಿ.ಎಸ್ ಮಾಡಬೇಕು. ಆದರೆ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತಿ ಸಿಬ್ಬಂದಿ ಯಾರದೋ ಆಸ್ತಿಗೆ ಯಾರದೋ ಜಿ.ಪಿ.ಎಸ್ ಮಾಡಿರುವುದು ಬೆಳಕಿಗೆ ಬಂದಿದೆ.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತಿ ಪಿ.ಡಿ.ಓ ನಾಗಭೂಷಣ ಸಾಹೇಬ್ರೆ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಯಾರದೋ ಆಸ್ತಿಗೆ ಯಾರದೋ ಹೆಸರಿನಲ್ಲಿ ಜಿ.ಪಿ.ಎಸ್ ಮಾಡುತ್ತೀರಾ ಅಂದ ಮೇಲೆ ಸುಂಕೇಶ್ವರ ಗ್ರಾಮ ಪಂಚಾಯತಿಯ ಕರ್ಮಕಾಂಡ ರಾಘವೇಂದ್ರ ಅವರ ಆರೋಪ ದಿಂದ ಬಯಲಾಗಿದೆ.

ಸುಂಕೇಶ್ವರ ಗ್ರಾಮದ ನಿವಾಸಿ ರಾಘವೇಂದ್ರ ಅವರು ಮಾನ್ವಿ ತಾಲೂಕ ಪಂಚಾಯತಿ ಇ.ಓ ಕಚೇರಿಗೆ ದೂರು ಸಲ್ಲಿಸಿ ಸುಂಕೇಶ್ವರ ಗ್ರಾಮ ಪಂಚಾಯತಿಯವರು ನಮ್ಮ ಜಾಗದಲ್ಲಿ ಯಾರದೋ ಹೆಸರಿನಲ್ಲಿ ಜಿ.ಪಿ.ಎಸ್ ಮಾಡಿ ನಮಗೆ ಜಗಳ ಹಚ್ಚುವ ಕೆಲಸ ಮಾಡಲಾಗಿದೆ ಇದನ್ನು ಕೂಡಲೆ ತಡೆ ಹಿಡಿಯುವ ಕೆಲಸ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ