ಸಹಾಯಕ ಆಯುಕ್ತರು ಗಜಾನನ ನೇತೃತ್ವದಲ್ಲಿ – ಕುಡಿಯುವ ನೀರಿನ ಸಭೆ.
ಮಾನ್ವಿ ಮಾ.07

ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಪಿ.ಡಿ.ಓ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಕಾಳಜಿ ವಹಿಸುವ ಕೆಲಸ ಮಾಡಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಗಜಾನನ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಶಾಸಕರ ಭವನದಲ್ಲಿ ನಡೆದ ಕುಡಿಯುವ ನೀರಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲಾಖೆಯವರು ಅಕ್ರಮ ಪಂಪ್ ಸೆಟ್ ಗೆ ಅವಕಾಶ ಕೊಡುತ್ತಾರೆಂಬ ದೂರಿದೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದರು.
ಈಗಾಗಲೇ ಕಾಲುವೆ ಮೂಲಕ ನೀರು ಬಿಡಲಾಗಿದೆ ಬೇಸಿಗೆ ಇರುವುದರಿಂದ ನೀರಿನ ಸಮಸ್ಯೆ ಬಾರದಂತ ಅಧಿಕಾರಿ ಗಳೆಲ್ಲರೂ ನೋಡಿ ಕೊಳ್ಳಬೇಕು.ಕೆಲ ಗ್ರಾಮಗಳು ಬೋರ್ ವೆಲ್ ಆಶ್ರಿತವಾಗಿವೆ. ಹೀಗಾಗಿ ಜನರಿಗೆ ತೊಂದರೆ ಯಾಗದಂತೆ ನೋಡಿ ಕೊಳ್ಳಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ