ದಲಿತರ ಆಶೋತ್ತರಗಳನ್ನ ಹುಸಿ ಗೊಳಿಸಿದ ಬಜೆಟ್ – ಸುರೇಶ ಚಲವಾದಿ.

ಗದಗ ಮಾ.07

ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳನ್ನ ರೂಪಿಸಿರುವುದಿಲ್ಲ. ಶೋಷಿತ ಸಮುದಾಯದ ಅಭಿವೃದ್ದಿ ಯಲ್ಲಿರುವ ವಿವಿಧ ನಿಗಮಗಳಲ್ಲಿನ ಯೋಜನೆಗಳನ್ನ ಪುನಶ್ಚೇತನ ಗೊಳಿಸದೆ ದಲಿತರ ಆಶೋತ್ತರಗಳಿಗೆ ಸ್ಪಂದಿಸಿದೆ ನಿರಾಶಾದಾಯಕ ಬಜೆಟ್ ಇದಾಗಿದೆ. ಎಸ್ಸಿ/ಎಸ್ಟಿ ಮೀನು‌ ಮಾರಾಟಗಾರರ ಸಂಚಾರಿ ವಾಹನ ಖರೀದಿಸಲು 3 ಲಕ್ಷ ಸಹಾಯಧನ ಒದಗಿಸಲಾಗಿದೆ. ಆದರೆ ಈ ಯೋಜನೆ ಕರಾವಳಿ ಭಾಗದ ಮೀನು‌ ಮಾರಾಟಗಾರರಿಗೆ ಅನುಕೂಲವಾಗಿದೆ ಉತ್ತರ ಕರ್ನಾಟಕ ಭಾಗದ ಸಮುದಾಯದ ಜನತೆಗೆ ಅನ್ಯಾಯ ವೆಸಗಿದಂತಾಗಿದೆ.ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡದೇ ಮತ್ತೆ ರೈತರಿಗೆ ವಂಚಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ನಾಡಿದ ದಲಿತರ ರೈತರ ಹಿಂದುಳಿದ ವರ್ಗದ ಜನ ವಿರೋಧಿ ಬಜೆಟ್ ಮಂಡಿಸಿರುತ್ತಾರೆ. ಎಂದು ಸುರೇಶ.ವಾಯ್ ಚಲವಾದಿಯವರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಕ್ಷ ಎಸ್/ಸಿ ಮೋರ್ಚಾ ಗದಗ ಜಿಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button