ಮೀಸಲು ಕ್ಷೇತ್ರಗಳಲ್ಲಿ ಮಾದಿಗರಿಗೆ ಅವಕಾಶ ಕಲ್ಪಿಸಿ – ಮುತ್ತಣ್ಣ ಮೇತ್ರಿ.
ಜಮಖಂಡಿ ಮಾರ್ಚ್.15

ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ 5 ಸ್ಥಾನ ಮೀಸಲು ಕ್ಷೇತ್ರವಾಗಿದ್ದು 5 ಕ್ಷೇತ್ರದಲ್ಲಿ 3 ಕ್ಷೇತ್ರದಲ್ಲಿ ಸಹೋದರ ಚಲವಾದಿ ಸಮುದಾಯಕ್ಕೆ ನೀಡಿದ್ದು ಸಂತೋಷಕರ ವಿಷಯ ಇನ್ನುಳಿದ ಎರಡು ಮೀಸಲು ಕ್ಷೇತ್ರವಾದ ಕೋಲಾರ್ ಮತ್ತು ಚಿತ್ರದುರ್ಗಕ್ಕೆ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಲು ಹೈಕಮಾಂಡಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬಾಗಲಕೋಟ ಜಿಲ್ಲಾ ಸಂಸಂಚಾಲಕ ಮುತ್ತಣ್ಣ ಮೇತ್ರಿ ಆಗ್ರಹಿಸಿದ್ದಾರೆ ಈ ದೇಶದ ಗಾಂಧಿ ಮನೆತನದ ಯುವ ನಾಯಕ ರಾಹುಲ್ ಗಾಂಧಿ ಅವರ ಆಶಯದಂತೆ ಮಹಿಳೆಯರಿಗೆ ಮತ್ತು ಯುವಕರಿಗೆ ಹೆಚ್ಚಿನ ಸ್ಥಾನವನ್ನು ನೀಡ ಬೇಕೆಂಬುವುದು ಅವರ ನಿಲುವಾಗಿದ್ದು ಅದಕ್ಕಾಗಿ ಅಬಕಾರಿ ಸಚಿವರು ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ನೀರಾವರಿ ಹರಿಕಾರರು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪುರ ಅವರ ಪುತ್ರ ಕಾಂಗ್ರೆಸ್ ಪಕ್ಷದ ರಾಜ್ಯ ಎಸ್ ಸಿ ವಿಭಾಗದ ಯುವ ಮುಖಂಡ ವಿನಯ ತಿಮ್ಮಾಪುರ ಅವರಿಗೆ ಚಿತ್ರದುರ್ಗ ಲೋಕಸಭಾ ಟಿಕೆಟ್ ನೀಡಿದರೆ ಅವರ ಗೆಲುವು ನಿಶ್ಚಿತ ಇದನ್ನೆಲ್ಲವನ್ನು ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪಕ್ಷದ ರಾಜ್ಯ ಉಸ್ತುವಾರಿಯಾದ ಸುರ್ಜೆವಾಲ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸುತ್ತೇವೆ ಚಿತ್ರದುರ್ಗ ಲೋಕಸಭಾ ಟಿಕೆಟ್ ವಿನಯ ತಿಮ್ಮಾಪುರ ಅವರಿಗೆ ನೀಡಿದರೆ ಅವರು ಗೆಲವು ನಿಶ್ಚಿತವಾಗುವುದು, ಶ್ರೀ ವಿನಯ್ ತಿಮ್ಮಾಪುರ ಅವರಿಗೆ ಚಿತ್ರದುರ್ಗ ಸಂಸದ ಟಿಕೆಟ್ ನೀಡಿದರೆ ಇಡೀ ರಾಜ್ಯದ ಮಾದಿಗ ಸಮುದಾಯ 28 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೆವೆ ಎಂದು ಮುತ್ತಣ್ಣ ಮೇತ್ರಿಯವರು ತಿಳಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರಾದ ಮುತ್ತಣ್ಣ ಮೇತ್ರಿ ದಾನೇಶ್ ಘಾಟಗೆ ಗೋವಿಂದ ಗಸ್ತಿ ವಿಲಾಸ್ ನಡುವಿನಮನಿ ಮಾರುತಿ ಮರೆಗುದ್ದಿ ಸಂಜು ಪೂಜಾರಿ ಉದಯ ಕಡಕೋಳ ಸೇರಿ ಪತ್ರಿಕಾ ಪ್ರಕಟಣೆ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರವರಲ್ಲಿ ಮನವಿ ಮಾಡಿದ್ದಾರೆ.