ನಾಗರೀಕ ಹಾಗೂ ಮೂಲಭೂತ ಸೌಕರ್ಯ ಒದಗಿಸಿ ಮತ್ತು 4/5 ಅಡಿ ತೆಗ್ಗು ಇದ್ದಿದ್ದನ್ನು ಮುಚ್ಚಿ ಭವನಕ್ಕೆ – ಹೋಗಲಿಕ್ಕೆ ರಸ್ತೆಯನ್ನು ಕಲ್ಪಿಸಿರಿ.

ಬಳ್ಳಾರಿ ಮಾ.21

ಕರ್ನಾಟಕದ ರಕ್ಷಣಾ ವೇದಿಕೆ ಜಿಲ್ಲಾ ಸಂಸ್ಥೆ ಬಳ್ಳಾರಿ ಈಗ ತಮ್ಮ ಗಮನಕ್ಕೆ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದಲ್ಲಿ ಈಗಾಗಲೇ ನೂತನವಾಗಿ ಡಾ, ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಿ ಪೂರ್ಣ ಗೊಂಡು 3 ವರ್ಷಗಳು ಗತಿಸಿ ಹೋದರು ಸಹ ಈ ಸಮುದಾಯ ಭವನಕ್ಕೆ ಕುಡಿಯುವ ನೀರಿಲ್ಲದೆ ಹಾಗೂ ವಿದ್ಯುತ್ 3/4 ಕಂಬಗಳು ಹಾಕಿ ಕಂಬಗಳಿಗೆ ವಾಯರ್ ಎಳೆದು ವಿದ್ಯುತ್ತನು ವ್ಯವಸ್ಥೆ ಮಾಡಲಾರದೆ ಕಗ್ಗತ್ತಲಿನಲ್ಲಿ ಅಂಬೇಡ್ಕರ್ ಸಮುದಾಯ ಭವನ ಇದ್ದು ಇದು ಒಂದು ರೀತಿ ಆದರೆ ಮುಖ್ಯ ರಸ್ತೆಯಿಂದ ಸಮುದಾಯ ಭವನ 60 ಅಡಿ ದೂರವಿದ್ದು ರಸ್ತೆಯಿಂದ 5/6 ಅಡಿಗಳಷ್ಟು ತೆಗ್ಗು ಇದ್ದು ಭವನದಿಂದ ಮುಖ್ಯ ರಸ್ತೆಯ ವರೆಗೆ ಸೈಡ್ ವಾಲ್ ಕಟ್ಟಿ ಮಣ್ಣು ತುಂಬಿ ಸಮುದಾಯ ಭವನಕ್ಕೆ ಗ್ರಾಮದ ಸಾರ್ವಜನಿಕರು ಹೋಗಲಿಕ್ಕೆ ವಿಪರೀತ ತೊಂದರೆ ಯಾಗಿತ್ತಿದ್ದು ಇವುಗಳ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ತಾಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು ಸಹ ಯಾವುದೇ ಕ್ರಮ ಕೈಗೊಳ್ಳಲಾರದೆ ಇದ್ದು ಪಿ.ಡಿ.ಓ ಇವರನ್ನು ಕೇಳಿದರೆ ಹಾರಿಕೆಯ ಉತ್ತರ ನೀಡಿ ಕಳಿಸುತ್ತಿದ್ದು ಸಮುದಾಯ ಭವನ ಮೂಲಭೂತ ಸೌಲಭ್ಯಗಳಿಂದ ವಂಚಿತ ಗೊಂಡಿದ್ದ ತಾವುಗಳು ಆದಷ್ಟು ಬೇಗನೆ ವಿದ್ಯುತ್ ಕುಡಿಯುವ ನೀರಿನ ಐದು ರೆಡಿ ಸೈಡ್ ವಾಲ್ ಕಟ್ಟಿ ಮಣ್ಣನ್ನು ತುಂಬಿಸಿ ರಸ್ತೆ ಮಾಡಿಸಿ ಕೊಟ್ಟು ನಮಗೆ ಅನುಕೂಲ ಮಾಡಿ ಕೊಡಬೇಕೆಂದು ಏಕೆಂದರೆ ಮುಂದಿನ ಏಪ್ರಿಲ್ ತಿಂಗಳದಲ್ಲಿ ಡಾ, ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ಕೊಳ್ಳುತ್ತೇವೆ ಅಷ್ಟರ ಒಳಗಡೆ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಈ ಎಲ್ಲಾ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಅನುಕೂಲ ಮಾಡಿ ಕೊಡಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಸಿ.ರಂಗಪ್ಪ ತಾಳೂರು ತಾಲೂಕು ಉಪಾಧ್ಯಕ್ಷರು ಇವರೆಲ್ಲರೂ ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button