ಕಾರ್ಮಿಕರು ಐಕ್ಯತೆ ಯಿಂದ ಹೋರಾಡಿ ನಿಮ್ಮ – ಸೌವಲತ್ತುಗಳು ಪಡೆಯಿರಿ.
ಕಲಕೇರಿ ಮಾ.21

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಕಟ್ಟಡ ಕಾರ್ಮಿಕ ಸಂಘದ ಸಭೆ ನಡೆಸಿದರು. ಜಿಲ್ಲಾ ಅಧ್ಯಕ್ಷರಾದ ಅಣ್ಣಾರಾಯ ಈಳಗೇರ ಇವರು ಎಲ್ಲಾ ಕಾರ್ಮಿಕರಿಗೆ ಪ್ರತಿಯೊಬ್ಬರು ಲೇಬರ್ ಕಾಡುಗಳನ್ನು ಮಾಡಿಸಬೇಕು ಅದರಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸರಕಾರದಿಂದ ಬರುವಂತ ಲೇಬರ್ ಆಫೀಸ್ ನಿಂದ ನಿಮ್ಮಗಳಿಗೆ ತಲುಪುತ್ತೆ ಎಂದು ಎಲ್ಲಾ ಕಾರ್ಮಿಕರು ಒಂದಾಗಿ ಹೋರಾಡಬೇಕು ಅಂದಾಗ ನಿಮ್ಮ ಕೆಲಸಗಳನ್ನು ಯಶಸ್ವಿ ಗೊಳುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆದ ಮೈಬೂಬಬಾಷ ಮನಗೂಳಿ ಇವರು ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಕಟ್ಟಡ ಕಾರ್ಮಿಕ ಸಂಘದಲ್ಲಿ ಎಲ್ಲಾ ಕಾರ್ಮಿಕರು ಒಂದಾಗಿ ಪ್ರತಿಯೊಬ್ಬ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಬರುವಂತಹ ಸೌಲಭ್ಯಗಳನ್ನು ಪಡೆದು ಕೊಳ್ಳಬೇಕು ಎಲ್ಲಾ ಕಟ್ಟಡ ಕಾರ್ಮಿಕರಲಿ ತಿಳಿಸುವುದೇನೆಂದರೆ ಮೊದಲು ನೀವು ಲೇಬರ್ ಕಾರ್ಡ್ಗಳನ್ನು ಮಾಡ್ಕೋಬೇಕು ಕಾರ್ಮಿಕ ಸಂಘದ ಮೆಂಬರ್ ಆಗಬೇಕು ಎಂದು ಕಟ್ಟಡ ಕಾರ್ಮಿಕ ಸಂಘ ಬೆಳೆಸಿ ಆ ಸಂಘದಲ್ಲಿ ನೀವು ಬೆಳೆಯಬೇಕು ಸಂಘದಲ್ಲಿ ಜಾತಿ ಮತ ಇಲ್ಲ ಎಲ್ಲರೂ ಒಂದಾಗಿ ಹೋರಾಡುವಂಥ ಛಲತೊಟ್ಟು ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ಎಂದು ತಿಳಿಸಿದೆರು. ಅಧ್ಯಕ್ಷರಾದ ಸಲೀಂ ನಾಯ್ಕೋಡಿ. ಉಪಾಧ್ಯಕ್ಷರಾದ ರಫೀಕ್ ಅಂದೇವಾಲ. ಹಠಬುದ್ದೀನ್ ಹೊಸಮನಿ. ಭಾಗ್ಯವಂತ ಮೂಪಗಾರ. ದೇವು ವಡ್ಡರ್. ರಮೇಶ್ ಮೊಪೂಗಾರ್. ಅಲ್ತಾಫ್. ರಫೀಕ್ ಸೆಂಟ್ರಿಂಗ್ ಮೇಸ್ತ್ರಿ. ಅನೇಕ ಕಟ್ಟಡ ಕಾರ್ಮಿಕರು ಸೇರಿದಂತೆ ಹಾಗೂ ಗ್ರಾಮಸ್ಥರು ಸೇರಿದಂತೆ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ