ಸತತ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ: ಎಸ್.ಬಿ.ಚಳಗೇರಿ.
ಚಿತ್ತವಾಡಗಿ ಆಗಷ್ಟ.8
ಹುನಗುಂದ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಯಶಸ್ಸ ಪಡೆಯಲು ಮತ್ತು ಗುರಿ ಮುಟ್ಟಲು ಸಾಧ್ಯ ಎಂದು ಲೆಪ್ಟಿನೆಂಟ್ ಹಾಗೂ ದೈಹಿಕ ನಿರ್ದೇಶಕ ಎಸ್.ಬಿ.ಚಳಗೇರಿ ಹೇಳಿದರು.ತಾಲೂಕಿನ ಚಿತ್ತವಾಡಗಿ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ವಿ.ಎಂ.ಎಸ್.ಆರ್.ವಿ ಮಹಾವಿದ್ಯಾಲಯ ರಾಷ್ಟೀಯ ಸೇವಾ ಯೋಜನೆ ಘಟಕದ ೨೦೨೨-೨೩ ನೆಯ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿದ್ದು.ದುಡ್ಡಿನಿಂದ ಜ್ಞಾನ ಕೊಂಡುಕೊಳ್ಳಲು ಸಾಧ್ಯವಿಲ್ಲ.

ವಿದ್ಯಾರ್ಥಿಗಳಲ್ಲಿ ಸ್ಪಷ್ಪವಾದ ಗುರಿ ಜೊತೆಗೆ ಓದಿನಲ್ಲಿ ಏಕಾಗ್ರತೆ ಮತ್ತು ಇರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಗುರಿಯಡೆಗೆ ಮುನ್ನಡೆಯಿರಿ.ಶಿಕ್ಷಣ ಜೊತೆಗೆ ಸಂಸ್ಕಾರವಿದ್ದಾಗ ಮಾತ್ರ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಲು ಸಾಧ್ಯ.ಅಚಲವಾದ ಗುರಿ,ದಿಟ್ಟತನದ ಪ್ರಯತ್ನದಿಂದ ಬೆಟ್ಟದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.ಎಚ್.ಎಸ್. ಬೋಳಿಶೆಟ್ಟರ ಮಾತನಾಡಿ ಇಂದಿನ ಕಲುಷಿತ ವಾತಾವರಣದಲ್ಲಿ ನಾವು ಇದ್ದೇವೆ ಜೊತೆಗೆ ನಮ್ಮ ಆಹಾರ ಪದ್ದತಿಯಲ್ಲಿನ ಬದಲಾವಣೆಯಿಂದ ಅಪಾಯದ ಸ್ಥಿತಿಯಲ್ಲಿ ಬದುಕಬೇಕಾಗಿದೆ.ಯುವಕರು ಆರೋಗ್ಯದ ಬಗ್ಗೆ ಗಮನಹರಿಸಿ ಜಂಕ್ ಪುಡ್ ದೂರವಿರಿ ಪೌಷ್ಟಿಕಯುಕ್ತ ಆಹಾರ ಸೇವಿಸಿ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ,ಪರಿಸರದ ಪ್ರಜ್ಞೆ ಮೂಡಿಸುವ ಕಾರ್ಯಮಾಡಿ.ಸಾಧನೆಗೆ ಅಸಾದ್ಯವಾದದ್ದು ಯಾವುದುಇಲ್ಲ ಸಾಧಿಸುವ ಛಲ ನಮ್ಮಲ್ಲಿರಬೇಕು ಎಂದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಲೆಕ್ಕಿಹಾಳ,ತಿಪ್ಪೇರುದ್ರಸ್ವಾಮಿ.ಡಿ.ಎಸ್,ಪತ್ರಕರ್ತ ಸಂಗಮೇಶ ಹೂಗಾರ,ಪರಶುರಾಮ ವಡ್ಡರ,ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಬಿ.ಎ.ಕಂಠಿ,ನವೀನ ಪಾಟೀಲ,ಶಂಭುಗೌಡ ಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ