🚨ಬ್ರೇಕಿಂಗ್ ನ್ಯೂಸ್, ಬಂಟ್ವಾಳ ಬಿ.ಸಿ. ರೋಡ್ ಹತ್ಯಾಕಾಂಡ – ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಕೊಡಿಸಲು ಅಜಿತ್ ಕುಮಾರ್ ಶೆಟ್ಟಿ ರಣ ಕಹಳೆ!🚨

ಬಂಟ್ವಾಳ ಜು.18

ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅಂಗಳದಲ್ಲಿ ನಡೆದ ಯುವತಿ ಲಾವಣ್ಯ ಅವರ ಬರ್ಬರ ಹತ್ಯೆ ಇಡೀ ನಾಡನ್ನೇ ತಲ್ಲಣ ಗೊಳಿಸಿದೆ. ಈ ಅಮಾನವೀಯ ಕೃತ್ಯದ ವಿರುದ್ಧ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ “ಅಜಿತ್ ಕುಮಾರ್ ಶೆಟ್ಟಿ” ಅವರು ಅತೀವ ನೋವು ವ್ಯಕ್ತಪಡಿಸಿದ್ದು, ಹಂತಕನಿಗೆ ಕಠಿಣ ಶಿಕ್ಷೆ ಮತ್ತು ಮೃತ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಉಗ್ರ ಹೋರಾಟದ ಹಾದಿ ತುಳಿದಿದ್ದಾರೆ.

🔥 ಅಜಿತ್ ಕುಮಾರ್ ಶೆಟ್ಟಿಯವರ ‘ಐದು ಅಗ್ನಿ ಪರೀಕ್ಷೆ’ – ಸರ್ಕಾರದ ಮುಂದೆ ನೇರ ಸವಾಲು:-

ಅಜಿತ್ ಕುಮಾರ್ ಶೆಟ್ಟಿ ಅವರು ರಾಜಕೀಯ ಭೇದ ಮರೆತು, ಮಾನವೀಯತೆಯ ನೆಲೆಯಲ್ಲಿ ಸರ್ಕಾರದ ಮುಂದಿಟ್ಟಿರುವ ಐದು ಬೇಡಿಕೆಗಳು ಇದೀಗ ಚರ್ಚೆಯ ಕೇಂದ್ರ ಬಿಂದುವಾಗಿವೆ.

⚖️ ಉಗ್ರ ಶಿಕ್ಷೆ:-

ಹಂತಕನಿಗೆ ಮರುಮಾತಿಗೆ ಅವಕಾಶವಿಲ್ಲದಂತೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಇದಕ್ಕಾಗಿ ಪ್ರತ್ಯೇಕ ವಿಶೇಷ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ನಡೆಯಬೇಕು.

💰 ₹1 ಕೋಟಿ ಪರಿಹಾರ:-

ಸಂತ್ರಸ್ತ ಕುಟುಂಬವು ಅನುಭವಿಸುತ್ತಿರುವ ನೋವು ಮತ್ತು ಆರ್ಥಿಕ ನಷ್ಟವನ್ನು ಸರಿ ದೂಗಿಸಲು ಸರ್ಕಾರ ತಕ್ಷಣವೇ ₹1 ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸ ಬೇಕು.

💼 ಸರ್ಕಾರಿ ಉದ್ಯೋಗ:-

ಕುಟುಂಬದ ಆಸರೆಯಾಗಿದ್ದ ಲಾವಣ್ಯ ಅವರ ಅಗಲಿಕೆಯಿಂದ ಕುಟುಂಬ ಅತಂತ್ರವಾಗಿದೆ. ಆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಆಸರೆಯಾಗಬೇಕು.

🕊️ ದ್ವೇಷಕ್ಕೆ ‘ನೋ’ – ಮಾನವೀಯತೆಗೆ ‘ಎಸ್’:-

“ಅಪರಾಧಿಯನ್ನು ಜಾತಿ, ಧರ್ಮದ ಮೂಲಕ ನೋಡಬೇಡಿ; ಆತ ಒಬ್ಬ ಹಂತಕ ಅಷ್ಟೇ” ಎಂದು ಗುಡುಗುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಅಜಿತ್ ಕುಮಾರ್ ಶೆಟ್ಟಿ ಕರೆ ನೀಡಿದ್ದಾರೆ.

🚫 ಸೈಬರ್ ಕಿಡಿಗೇಡಿಗಳಿಗೆ ಎಚ್ಚರಿಕೆ:-

ಈ ನೋವಿನ ಘಟನೆಯನ್ನು ರಾಜಕೀಯ ಗೊಳಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ವಿಷಕಾರಿ ಪೋಸ್ಟ್‌ಗಳನ್ನು ಹಾಕುವವರ ಮೇಲೆ ತಕ್ಷಣವೇ ‘Suo Motu’ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು.

📢 ಸಾರ್ವಜನಿಕರ ಧ್ವನಿಯಾಗಿ ಅಜಿತ್ ಕುಮಾರ್ ಶೆಟ್ಟಿ:-

“ಒಬ್ಬ ಸಹೋದರಿಯ ಸಾವು ಇಡೀ ಸಮಾಜದ ನೋವು” ಎಂದು ನಂಬಿರುವ ಅಜಿತ್ ಕುಮಾರ್ ಶೆಟ್ಟಿ ಅವರು, ರಾಜಕೀಯ ಮೀರಿ ಲಾವಣ್ಯ ಅವರ ಕುಟುಂಬದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಅವರ ಈ ದಿಟ್ಟ ನಿಲುವು ಮತ್ತು ನ್ಯಾಯದ ಪರವಾದ ಹೋರಾಟಕ್ಕೆ ಇಂದು ಜನ ಸಾಮಾನ್ಯರಿಂದ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ.

ಅಜಿತ್ ಕುಮಾರ್ ಶೆಟ್ಟಿಯವರ ಈ ಹೋರಾಟವು ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಲಕ್ಷಾಂತರ ಜನರ ಧ್ವನಿಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಅಜಿತ್ ಕುಮಾರ್ ಶೆಟ್ಟಿ ಅವರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಸಮಸ್ತ ಸಮಾಜ ಆಗ್ರಹಿಸುತ್ತಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button