ನಾಯಕ ‘ಮನ್ವಿತ್‌ ಗೆ ಅತ್ಯುತ್ತಮ ನಟ’ – ಪ್ರಶಸ್ತಿ ಲಭಿಸಿದೆ.

ಧಾರವಾಡ ಆ.27

ಕನ್ನಡ ಚಿತ್ರರಂಗದ ನಾಯಕ ನಟರಾಗಿ ಭರವಸೆಯನ್ನು ಹುಟ್ಟು ಹಾಕಿರುವ ಯುವ ನಾಯಕ ‘ಮನ್ವಿತ್’ ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

ಉತ್ತರ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ(ರಿ) ವತಿಯಿಂದ ಧಾರವಾಡದ ಆಲೂರ ವೆಂಕಟರಾಯರ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ-೨೦೨೬ ರಲ್ಲಿ ಮಹಾಂತೇಶ ಹಳ್ಳೂರ ಅವರ ಕಥೆ ಆಧಾರಿತ ಗುರುದತ್ ಮುಸುರಿ ನಿರ್ದೇಶನದ ‘ಡೆತ್ ಸರ್ಟಿಫಿಕೆಟ್’ ಚಿತ್ರದಲ್ಲಿನ ನಾಯಕ ಪಾತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ದೊರೆತಿದೆ.

ಹಿರಿಯ ನಟ, ಪರಿಸರವಾದಿ, ಜೀವಮಾನ ಸಾಧನೆ ಪುರಸ್ಕೃತ ಸುರೇಶ ಹೆಬ್ಳೀಕರ, ನಿರ್ದೇಶಕ ನಟ ಅನಿರುದ್ಧ ಜತ್ಕರ್, ಗ್ಯಾರಂಟಿ ನ್ಯೂಜ್‌ನ ರಾಧಾ ಹಿರೇಗೌಡರ, ನ್ಯೂಜೋ ನ್ಯೂಜ್‌ನ ಹರೀಶ ನಾಗರಾಜು ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಹಿರಿಯ ಚಲನ ಚಿತ್ರ ನಟಿ ಭವ್ಯ, ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಉ.ಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ, ಕಾರ್ಯಾಧ್ಯಕ್ಷ ಡಾ.ಕಲ್ಮೇಶ ಹಾವೇರಿಪೇಟ, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ, ಉಪಾಧ್ಯಕ್ಷ ಪ್ರಭು ಹಂಚಿನಾಳ, ಸಲಹಾ ಸಮಿತಿ ಸದಸ್ಯ, ಚಲನ ಚಿತ್ರ ಪತ್ರಕರ್ತ ಡಾ, ಪ್ರಭು ಗಂಜಿಹಾಳ ಮತ್ತು ಮಂಡಳಿಯ ಪದಾಧಿಕಾರಿಗಳು, ‘ಡೆತ್ ಸರ್ಟಿಫಿಕೇಟ್’ ಚಿತ್ರದ ಕಥೆಗಾರ ಮಹಾಂತೇಶ ಹಳ್ಳೂರ, ನಿರ್ದೇಶಕ ಗುರುದತ್ ಮುಸುರಿ, ಹಿರಿಯ ಹೋರಾಟಗಾರರು, ನ್ಯಾಯವಾದಿ ಬಿ.ಡಿ ಹಿರೇಮಠ ಉಪಸ್ಥಿತರಿದ್ದರು.

ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಚಿತ್ರೀಕರಣವಾದ “ಡೆತ್ ಸರ್ಟಿಫಿಕೇಟ್” ಚಲನ ಚಿತ್ರಕ್ಕೆ ‘ಅತ್ಯುತ್ತಮ ನಟ’ ಪ್ರಶಸ್ತಿ ದೊರೆತಿದ್ದಕ್ಕೆ ಮನ್ವಿತ್ ಖುಷಿಯಾಗಿದ್ದಾರೆ.

ಸಧ್ಯದಲ್ಲೆ “ಧ್ರುವನಕ್ಷತ್ರ” ಕನ್ನಡ ಚಲನ ಚಿತ್ರ ಮತ್ತು “ಕೊಪ್ಪಂ” ಎಂಬ ತಮಿಳು ಚಲನ ಚಿತ್ರದಲ್ಲಿಯೂ ನಾಯಕ ನಟನಾಗಿ ನಟಿಸಿದ್ದು ಅವೆರಡೂ ಕೂಡಾ ಬಿಡುಗಡೆಗೆ ಸಿದ್ಧವಾಗಿದ್ದು ಅವರಿಗೆ ತಮ್ಮ ಅಭಿನಯದಲ್ಲಿ ಹೆಚ್ಚಿನ ಭರವಸೆ ಹುಟ್ಟುಹಾಕಿದೆ.ಪ್ರಶಸ್ತಿ ಪಡೆದದ್ದಕ್ಕೆ ‘ಡೆತ್ ಸರ್ಟಿಫಿಕೇಟ್’ ಚಿತ್ರ ತಂಡ ಇವರನ್ನು ಅಭಿನಂದಿಸಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button